ಉತ್ತರ ಒಡಿಶಾದಲ್ಲಿ ಭೀಕರ ಪ್ರವಾಹ – 3 ದಿನಗಳಿಂದ ಭಾರಿ ಮಳೆ
ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಪ್ರದೇಶದ ಎಲ್ಲಾ ನಾಲ್ಕು ಪ್ರಮುಖ ನದಿ ಸುವರ್ಣರೇಖಾ, ಬ್ರಹ್ಮಣಿ, ಬೈತರಾಣಿ ಮತ್ತು ಬುಧಬಳಂಗಗಳ ಮೇಲೆ ತೀವ್ರ ನಿಗಾ ಇರಿಸಿದೆ.
ರಾಜ್ಯ ಜಲಸಂಪನ್ಮೂಲ ಸಚಿವ ತುಕುನಿ ಸಾಹು ಅವರು ಉತ್ತರ ಒಡಿಶಾದ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. “ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ಸ್ಥಳೀಯ ಆಡಳಿತವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು. ಉತ್ತರ ಒಡಿಶಾದ ಮೂರು ಜಿಲ್ಲೆಗಳಾದ ಬಾಲಸೋರ್, ಮಯೂರ್ಭಂಜ್ ಮತ್ತು ಕಿಯೋಂಜಾರ್ ಭಾರಿ ಪ್ರವಾಹಕ್ಕೆ ಸಿಲುಕೊಂಡಿವೆ. ಬಾಲಸೋರ್ ಜಿಲ್ಲೆಯ ಮೂಲಕ ಹರಿಯುವ ಸುವರ್ಣರೇಖಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಬಾಲಸೋರ್ ಜಿಲ್ಲಾಡಳಿತವು ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ, 50 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳು ಜಲಾವೃತವಾಗಿವೆ. ಪ್ರವಾಹ ಪೀಡಿತ ಜನರಿಗೆ ಆಹಾರ, ವಸತಿ ಮತ್ತು ಔಷಧಿಗಳಿಗೆ ಸ್ಥಳೀಯ ಆಡಳಿತವು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದ್ದರೆ, NDRF, ODRAF ಮತ್ತು ಅಗ್ನಿಶಾಮಕ ಸೇವಾ ಇಲಾಖೆಗಳ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಿಯೋಜಿಸಲ್ಪಟ್ಟಿವೆ.
ಈ ಮಧ್ಯೆ ಪಶ್ಚಿಮ ಮತ್ತು ಕರಾವಳಿ ಒಡಿಶಾದ ಹಲವಾರು ಪ್ರದೇಶಗಳಲ್ಲಿ ಮಳೆ ಬಿಡುವು ಕೊಟ್ಟಿದೆ. ಹಿರಾಕುಡ್ ಅಣೆಕಟ್ಟಿನಿಂದ ನೀರಿನ ಬಿಡುಗಡೆ ಕಡಿಮೆಯಾಗಿದ್ದು, ಪ್ರವಾಹದಿಂದ ಚೇತರಿಸಿಕೊಳ್ಳುತ್ತಿವೆ.