ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

Namratha Rao by Namratha Rao
November 3, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

1. ಎಗ್ ಸುಕ್ಕಾ ( ರೆಸ್ಟೋರೆಂಟ್ ಸ್ಟೈಲ್)

ಬೇಕಾಗುವ ಸಾಮಾಗ್ರಿಗಳು

Related posts

ಅಂದು ಕೃಷ್ಣನಿದ್ದ ಭೀಮ ಗೆದ್ದ, ಇಂದು ದುರ್ಯೋಧನನ ಗೆಲುವು: ಜಾಗತಿಕ ವಿನಾಶದ ಮುನ್ಸೂಚನೆ ನೀಡಿದ ಕೋಡಿಶ್ರೀಗಳ ಭಯಾನಕ ಭವಿಷ್ಯ

ಅಂದು ಕೃಷ್ಣನಿದ್ದ ಭೀಮ ಗೆದ್ದ, ಇಂದು ದುರ್ಯೋಧನನ ಗೆಲುವು: ಜಾಗತಿಕ ವಿನಾಶದ ಮುನ್ಸೂಚನೆ ನೀಡಿದ ಕೋಡಿಶ್ರೀಗಳ ಭಯಾನಕ ಭವಿಷ್ಯ

March 17, 2026
ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

March 17, 2026

ಮೊಟ್ಟೆ – 4
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಹಸಿ ಮೆಣಸಿನ ಕಾಯಿ – 2
ಜೀರಿಗೆ – 1 ಚಮಚ
ತುರಿದ ತೆಂಗಿನಕಾಯಿ – 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಹುಣಸೆ ರಸ ಅಗತ್ಯವಿರುವಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ- 3 ಚಮಚ
Saakshatv cooking recipes Egg sukka

Saakshatv cooking recipes Egg sukka

ಮಾಡುವ ವಿಧಾನ :
ಮೊದಲು ಮೊಟ್ಟೆಗಳನ್ನು ಬೇಯಿಸಿ ಎರಡು ತುಂಡುಗಳಾಗಿ ಕತ್ತರಿಸಿ. ಈಗ ಕಡಾಯಿ ಬಿಸಿ ಮಾಡಿ ತುರಿದ ತೆಂಗಿನಕಾಯಿಯನ್ನು ಹುರಿದು ಪಕ್ಕಕ್ಕೆ ಇರಿಸಿ. ನಂತರ ಕಡಾಯಿಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ತುಂಡುಗಳನ್ನು ಹುರಿದು ಇಟ್ಟುಕೊಳ್ಳಿ. ಈಗ ಕಡಾಯಿಗೆ ಎರಡು ಚಮಚ ಎಣ್ಣೆ ಸೇರಿಸಿ, ಜೀರಿಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಸೇರಿಸಿ ಹುರಿಯಿರಿ.
Saakshatv cooking recipes Egg sukka
ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಹುಣಸೆ ರಸ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಹುರಿದ ಈರುಳ್ಳಿ ಮತ್ತು ಹುರಿದ ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ ಕಲಸಿ. ಬಳಿಕ ಕತ್ತರಿಸಿದ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರಣವನ್ನು ಸರಿಯಾಗಿ ಬೆರೆಸಿ. ಈಗ ಬಿಸಿ ಬಿಸಿಯಾದ ರುಚಿಕರವಾದ ಎಗ್ ಸುಕ್ಕಾ  ಸವಿಯಲು ರೆಡಿಯಾಗಿದೆ.

 

2. ಚಟ್ಟಂಬಡೆ / ಮಸಾಲ ವಡಾ

ಬೇಕಾಗುವ ಪದಾರ್ಥಗಳು

200 ಗ್ರಾಂ ಕಡಲೆ ಬೇಳೆ
3 ಇಂಚು ಶುಂಠಿ
ಬೆಳ್ಳುಳ್ಳಿಯ – 8 ಎಸಳು
1 ಟೀಸ್ಪೂನ್ ಸೋಂಪು ( fennel seeds)
ಚಕ್ಕೆ – 2 ಚೂರು
ಹಸಿಮೆಣಸಿನಕಾಯಿ 5-6
ಕತ್ತರಿಸಿದ ಕರಿಬೇವಿನ ಸೊಪ್ಪು ಸ್ವಲ್ಪ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1
ಅಗತ್ಯವಿರುವಷ್ಟು ನೀರು
ಡೀಪ್ ಫ್ರೈಗೆ ಎಣ್ಣೆ
ರುಚಿಗೆ ತಕ್ಕಂತೆ ಉಪ್ಪು
Saakshatv cooking recipes chattambade
Saakshatv cooking recipes chattambade
ಮಾಡುವ ವಿಧಾನ:
ಹಂತ 1-ಕಡಲೆ ಬೇಳೆಯನ್ನು ಸುಮಾರು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.

ಹಂತ 2– ಶುಂಠಿ, ಬೆಳ್ಳುಳ್ಳಿ, ಫೆನ್ನೆಲ್ ಬೀಜಗಳು, ಚಕ್ಕೆ, ಹಸಿ ಮೆಣಸಿನಕಾಯಿ, ನೆನೆಸಿದ ಕಡಲೆ ಬೇಳೆಯನ್ನು ನೀರು ಸೇರಿಸದೆ ತರಿತರಿಯಾಗಿ ರುಬ್ಬಿ.

ಹಂತ 3– ನಂತರ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 4– ಈಗ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಮತ್ತು ಅವುಗಳನ್ನು ಅಂಗೈಯನ್ನು ಇಟ್ಟುಕೊಂಡು ಒತ್ತಿ ಮತ್ತು ವೃತ್ತಾಕಾರವಾಗಿ ಮಾಡಿ.

Saakshatv cooking recipes chattambade
ಹಂತ 5– ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.

ಹಂತ 6– ಮಧ್ಯಮದಿಂದ ಕಡಿಮೆ ಉರಿಯಲ್ಲಿ ಈ ವಡಾಗಳ ಎರಡೂ ಬದಿಯನ್ನು ಡೀಪ್ ಫ್ರೈ ಮಾಡಿ ತೆಗೆಯಿರಿ.

ಚಹಾ ಅಥವಾ ಕಾಫಿಯೊಂದಿಗೆ ಚಟ್ಟಂಬಡೆ/ ಮಸಾಲ ವಡಾ ಸೇವಿಸಿ.

3. ಗೋಧಿ ಹಿಟ್ಟಿನ ಲಡ್ಡು

ಬೇಕಾಗುವ ಸಾಮಗ್ರಿಗಳು

ಗೋಧಿ ಹುಡಿ 1ಕಪ್
ಮಿಲ್ಕ್ ಮೇಡ್ 3/4 ಕಪ್
ಏಲಕ್ಕಿ ಪುಡಿ 1/4 ಚಮಚ
ತುಪ್ಪ 2 1/2 ಚಮಚ.
ಹುರಿದ ಗೋಡಂಬಿ, ದ್ರಾಕ್ಷಿ ಸ್ವಲ್ಪ
ಕಾಯಿಸಿದ ಹಾಲು 4 ಚಮಚ
Saakshatv cooking recipes wheat laddu
Saakshatv cooking recipes wheat laddu

ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಗೋಧಿ ಹುಡಿ ಹಾಕಿ ಮಧ್ಯಮ ಉರಿಯಲ್ಲಿ 3 ನಿಮಿಷ ಹುರಿಯಿರಿ. ನಂತರ ಸ್ಟವ್ ಆಫ್ ಮಾಡಿ ಬಾಣಲೆಯನ್ನು ಕೆಳಗಿಳಿಸಿ.
Saakshatv cooking recipes wheat laddu
ನಂತರ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಇದಕ್ಕೆ ತುಪ್ಪ ಏಲಕ್ಕಿ ಪುಡಿ, ಗೋಡಂಬಿ ,ದ್ರಾಕ್ಷಿ, ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಕೈಗೆ ಸ್ವಲ್ಪ ತುಪ್ಪ ಸವರಿ ಗೋಧಿ ಲಡ್ಡುಗಳನ್ನು ತಯಾರಿಸಿ. ಗೋಧಿ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.

 

4. ಅನಾನಸ್( ಪೈನಾಪಲ್) ಗೊಜ್ಜು

ಬೇಕಾಗುವ ಸಾಮಗ್ರಿಗಳು

ಉದ್ದಿನ ಬೇಳೆ 2 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 1/4 ಚಮಚ
ಚಿಟಕಿ ಇಂಗು
ಒಣ ಕೊಬ್ಬರಿ ತುರಿ 1/4 ಕಪ್
ಬಿಳಿ ಎಳ್ಳು 2ಚಮಚ

ಸಣ್ಣಗೆ ಹೆಚ್ಚಿದ ಪೈನಾಪಲ್ 1 ಕಪ್
ಸಾಸಿವೆ 1 ಚಮಚ
ಕತ್ತರಿಸಿದ ಕರಿಬೇವು ಸ್ವಲ್ಪ
ಹುಣಸೆ ರಸ 1/4 ಕಪ್
ಬೆಲ್ಲ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಕಿ‌‌ ಅರಿಶಿನ
ಒಣಮೆಣಸು 6
ಎಣ್ಣೆ

Saakshatv cooking recipes pineapple gojju
Saakshatv cooking recipes pineapple gojju

ಮಾಡುವ ವಿಧಾನ

ಪಾನ್ ಗೆ ಉದ್ದಿನ ಬೇಳೆ, ಜೀರಿಗೆ, ಕಾಳುಮೆಣಸು ಇಂಗು, ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಒಣ ಕೊಬ್ಬರಿ ತುರಿ ಸೇರಿಸಿ ಕೆಂಪಗಾಗುವ ವರೆಗೆ ಹುರಿಯಿರಿ. ನಂತರ ಬಿಳಿ ಎಳ್ಳು ಹುರಿದು ಎಲ್ಲವನ್ನೂ ಮಿಕ್ಸಿ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.

Saakshatv cooking recipes pineapple gojju

ಈಗ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಕರಿಬೇವು ಸೇರಿಸಿ.
ಅದಕ್ಕೆ ಸಣ್ಣಗೆ ಹೆಚ್ಚಿದ ಪೈನಾಪಲ್ ಸೇರಿಸಿ ಅರಿಶಿಣ ಹಾಕಿ ಬೇಯಿಸಿ. ಬಳಿಕ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಕುದಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ. ಈಗ ಸವಿಯಲು ರುಚಿಯಾದ ಅನಾನಸ್ ‌ಗೊಜ್ಜು‌ ತಯಾರಾಗಿದೆ.

 

5. ಆಲೂ ಟಿಕ್ಕಿ

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಆಲೂಗಡ್ಡೆ – 6
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಕಪ್
ಹಸಿಮೆಣಸಿನಕಾಯಿ – 3-4
ಮೆಣಸಿನ ಪುಡಿ ‌- 1 ಚಮಚ
ಗರಂ‌ಮಸಾಲೆ – 1 ಚಮಚ
ಚಾಟ್ ಮಸಾಲಾ ‌1 ಚಮಚ
ಕಾರ್ನ್ ಫ್ಲೋರ್ 2 ಚಮಚ
ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಬೇಯಿಸಿದ ಆಲೂಗಡ್ಡೆಗಳನ್ನು ಚೆನ್ನಾಗಿ ಮ್ಯಾಶ್(ಹುಡಿ) ಮಾಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಮೆಣಸಿನ ಪುಡಿ, ಗರಂ‌ಮಸಾಲೆ, ಚಾಟ್ ಮಸಾಲಾ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಕಲಸಿ. ಈಗ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಚಪ್ಪಟೆಯಾಗಿ ತಟ್ಟಿ.
Saakshatv cooking aloo tikki
ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಟಿಕ್ಕಿಯನ್ನು ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಹುರಿಯಿರಿ .
ಚಟ್ನಿ ಅಥವಾ ಸಾಸ್ ನೊಂದಿಗೆ ಬಿಸಿಯಾಗಿ ಸವಿಯಿರಿ.

Tags: #saakshatvbengalurubiriyanichildrensfavouratescookingcookingvariteiescurrydiferentstylesdosaFoodgojjugravyicecreamsindiajuiceskannadanewskarnatakamanglore karavalipulavricebathrotisambarsimplerecipiessnacksvaritiesfoodvegbiriyani
ShareTweetSendShare
Join us on:

Related Posts

ಅಂದು ಕೃಷ್ಣನಿದ್ದ ಭೀಮ ಗೆದ್ದ, ಇಂದು ದುರ್ಯೋಧನನ ಗೆಲುವು: ಜಾಗತಿಕ ವಿನಾಶದ ಮುನ್ಸೂಚನೆ ನೀಡಿದ ಕೋಡಿಶ್ರೀಗಳ ಭಯಾನಕ ಭವಿಷ್ಯ

ಅಂದು ಕೃಷ್ಣನಿದ್ದ ಭೀಮ ಗೆದ್ದ, ಇಂದು ದುರ್ಯೋಧನನ ಗೆಲುವು: ಜಾಗತಿಕ ವಿನಾಶದ ಮುನ್ಸೂಚನೆ ನೀಡಿದ ಕೋಡಿಶ್ರೀಗಳ ಭಯಾನಕ ಭವಿಷ್ಯ

by Shwetha
March 17, 2026
0

ಜಗತ್ತು ಅಕ್ಷರಶಃ ಯುದ್ಧದ ಅಗ್ನಿಕುಂಡದಲ್ಲಿ ಬೇಯುತ್ತಿದೆ. ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆರಂಭಿಸಿರುವ ಮಹಾಯುದ್ಧ ಇಡೀ...

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

by Shwetha
March 17, 2026
0

ವಿಧಾನಸಭೆ ಅಧಿವೇಶನದ ವೇಳೆ ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಯು. ಟಿ. ಖಾದರ್...

ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

by Shwetha
March 17, 2026
0

ಬೆಂಗಳೂರು: ಟ್ರಾಫಿಕ್ ಪೊಲೀಸ್ ಎಂದರೆ ಕೇವಲ ದಂಡ ಹಾಕುವವರು, ವಾಹನ ಸವಾರರೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವವರು ಎಂಬ ಸಾಮಾನ್ಯ ಕಲ್ಪನೆ ನಮ್ಮಲ್ಲಿದೆ. ಆದರೆ, ಖಾಕಿ ಸಮವಸ್ತ್ರದ ಒಳಗೂ ಮಿಡಿಯುವ...

ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ.. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ: ಸಚಿವ ಮುನಿಯಪ್ಪ

ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ.. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ: ಸಚಿವ ಮುನಿಯಪ್ಪ

by Shwetha
March 17, 2026
0

ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಗ್ಯಾಸ್ ಸಿಲಿಂಡರ್ ಅಭಾವದಿಂದ ಜನರಿಗೆ ತೊಂದರೆ...

ಯಶಸ್ಸಿನ ಉತ್ತುಂಗದಲ್ಲಿರುವ ರಾಕಿ ಭಾಯ್ ನಿಜಕ್ಕೂ ಡಿಪ್ರೆಶನ್‌ನಲ್ಲಿದ್ದಾರಾ? ರಾಕಿ ಭಾಯ್ ಬಗ್ಗೆ ಟಾಲಿವುಡ್ ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

ಯಶಸ್ಸಿನ ಉತ್ತುಂಗದಲ್ಲಿರುವ ರಾಕಿ ಭಾಯ್ ನಿಜಕ್ಕೂ ಡಿಪ್ರೆಶನ್‌ನಲ್ಲಿದ್ದಾರಾ? ರಾಕಿ ಭಾಯ್ ಬಗ್ಗೆ ಟಾಲಿವುಡ್ ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

by Shwetha
March 17, 2026
0

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಹಾಗೂ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸುವ ಆಂಧ್ರದ ಜ್ಯೋತಿಷಿ ವೇಣುಸ್ವಾಮಿ ಇದೀಗ ಕರುನಾಡಿನ 'ರಾಕಿ ಭಾಯ್' ಯಶ್ ಬಗ್ಗೆ ಸ್ಫೋಟಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram