ನನ್ನ ರಾಜಕೀಯ ಜೀವನದಲ್ಲೇ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟಿಲ್ಲ : ಹೆಚ್ ಡಿಕೆ
ಮಂಡ್ಯ : ನನ್ನ ರಾಜಕೀಯ ಜೀವನದಲ್ಲೇ ನಾನು ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟವನಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತರ ಹೋರಾಟಕ್ಕೆ ನಾವು ಬೆಂಬಲ ಕೊಡಲ್ಲ : ಆರ್.ಶಂಕರ್
ಅಕ್ರಮ ಗಣಿಗಾರಿಕೆ ಬಗ್ಗೆ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲೇ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ಸಚಿವ ನಾರಾಯಣ ಗೌಡ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾನಾಡುತ್ತಾರೆ. 14 ತಿಂಗಳಿನಿಂದ ಅವರು ಎಲ್ಲಿ ಹೋಗಿದ್ದರು. ಮಂಡ್ಯದಲ್ಲಿ ಶೇ.87 ರಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಹರಿಹಾಯ್ದರು.
ಗಂಡನ ಮೊಬೈಲ್ ನಲ್ಲಿ ತನ್ನದೇ ಹಳೆ ಫೋಟೋ ನೋಡಿ ಪತಿಗೆ ಚಾಕುವಿನಿಂದ ಇರಿದ ಹೆಂಡತಿ : ಕಾರಣ ವಿಚಿತ್ರ..!
ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆ ಎಂದರೆ ಅದು ಮಂಡ್ಯದಲ್ಲಿ, ಎನ್ಒಸಿ ಕೊಡಲು ಇಲ್ಲಿ 10 ಲಕ್ಷ ಫಿಕ್ಸ್ ಮಾಡಿಕೊಂಡಿದ್ದಾರೆ. 10 ಲಕ್ಷ ರೂಪಾಯಿ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ಸತ್ಯ ಹೇಳಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಂತ್ರಿಯಾಗಿ ಜಿಲ್ಲೆಯ ಆಸ್ತಿಯನ್ನು ಉಳಿಸಬೇಕು. ಈಗ ಬಂದು ಹೇಳಿಕೆ ಕೊಟ್ಟು ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ದೆಹಲಿಯಿಂದ “ಅರುಣ” ಸಂದೇಶ : ಇಲ್ಲಿದೆ ದಿಢೀರ್ ಖಾತೆ ಬದಲಾವಣೆಗೆ ಕಾರಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








