ADVERTISEMENT
Wednesday, May 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಬೇಬಿ ಅಲ್ಲ… ಬೇಬಿ ಬಾಸ್…! ವಾರೇ ವ್ಹಾ… ಎಂಥಾ ವೈಭವ..!

Fourteen and fearless: Vaibhav Suryavanshi storms into IPL record books

Shwetha by Shwetha
April 29, 2025
in ಕ್ರಿಕೆಟ್, Newsbeat, Sports
Share on FacebookShare on TwitterShare on WhatsappShare on Telegram

ಅದು ಜೈಪುರದ ಸವಾಯ್ ಮಾನ್ ಸಿಂಗ್ ಅಂಗಣ. ಎಲ್ಲರ ಚಿತ್ತ ಇದ್ದದ್ದು ಆ 14ರ ಹರೆಯದ ಪುಟ್ಟ ಪೋರನತ್ತ…ಆ ಹುಡುಗ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಝಗಮಗಿಸುವ ವಿದ್ಯುತ್ ಮಂಡಲದ ಪ್ರಭೆಯಲ್ಲಿ ಶೋಭಿಸುತ್ತಾ… ಪ್ರಖರ ಸೂರ್ಯನ ಜ್ವಾಲೆಯಂತೆ ಪ್ರಜ್ವಲಿಸುತ್ತಾ.. ಚಂದಿರನ ಬೆಳಕಿನಲ್ಲಿ ಅರಳಿದ ಮಲ್ಲಿಗೆಯಂತೆ ಇಡೀ ವಿಶ್ವ ಕ್ರಿಕೆಟ್‍ಗೆ ಸುವಾಸನೆಯನ್ನು ಬೀರಿದ ವೈಭವನ ವೈಭೋಗದ ಆಟಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಅಷ್ಟೇ.!

ಹೌದು, 14ರ ಹರೆಯದ ಬಾಲಕ ವೈಭವ್ ಈ ಬಾರಿಯ ಐಪಿಎಲ್‍ನಲ್ಲಿ ಚೆಂಡಾಡಿದ ಪರಿ ನಿಜಕ್ಕೂ ಬೆರಗುಗೊಳಿಸುತ್ತೆ. ಆಡಿದ ಮೊದಲ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್‍ಗಟ್ಟಿದ್ದಾಗಲೇ ಈತ ಅಸಾಮಾನ್ಯ ಬಾಲಕ ಎಂಬುದು ಸಾಬೀತಾಗಿತ್ತು. ಅದರಲ್ಲೂ ವಿಶ್ವ ದರ್ಜೆಯ ಬೌಲರ್‍ಗಳನ್ನು ಈತ ದಂಡಿಸುವ ರೀತಿಗೆ ಅಚ್ಚರಿಗೊಳ್ಳದೇ ಇರಲು ಸಾಧ್ಯವೇ ಇಲ್ಲ.
ಹೊಡಿ ಬಡಿ ಆಟವೇ ಈತನ ಮೂಲ ಮಂತ್ರ. ಬೌಲರ್ ಯಾರು ಅನ್ನೋದನ್ನು ನೋಡಲ್ಲ. ಅದು ಆತನಿಗೆ ಬೇಕಾಗಿಯೂ ಇಲ್ಲ. ತನ್ನ ಬ್ಯಾಟ್‍ನಿಂದ ರನ್ ಹೊಡೆಯಬೇಕು ಅಷ್ಟೇ.. ಚೆಂಡು ಬೌಂಡರಿ – ಸಿಕ್ಸರ್ ಗೆರೆ ದಾಟಬೇಕು. ಅದನ್ನು ನೋಡಿಯೇ ಮನದೊಳಗೆ ಖುಷಿ ಪಡುತ್ತಾನೆ.. ಸೀನಿಯರ್ ಬೌಲರ್‍ಗಳೇ ಈತನ ಬ್ಯಾಟಿಂಗ್ ವೈಖರಿಗೆ ಸುಸ್ತಾಗುತ್ತಾರೆ ಅಂದ ಮೇಲೆ ಬೇರೆ ಬೌಲರ್‍ಗಳಿಗೆ ನರಕ ದರ್ಶನವಾಗುವುದರಲ್ಲಿ ಅಚ್ಚರಿ ಏನಿಲ್ಲ.

Related posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

May 14, 2025
ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

May 14, 2025

ಮೀಸೆ ಚಿಗುರದ ಹುಡುಗನ ತಾಕತ್ತು.. ಪ್ರತಿಭೆಯನ್ನು ಪ್ರಶ್ನೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತಿದ್ದಾನೆ. ಈ ಬಾರಿಯ ಐಪಿಎಲ್‍ನ ಬಲಿಷ್ಠ ತಂಡ ಎಂದೇ ಬಿಂಬಿತವಾಗಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೊಟ್ಟ ಏಟು ಇದೆಯಲ್ವಾ ಅದನ್ನು ಮರೆಯಲು ಸಾಧ್ಯವೇ ಇಲ್ಲ.
17 ಎಸೆತದಲ್ಲಿ ಅರ್ಧಶತಕ.. 35 ಎಸೆತದಲ್ಲಿ ಸೆಂಚುರಿ..ಅದರಲ್ಲಿ 11 ಸಿಕ್ಸರ್.. ಏಳು ಬೌಂಡರಿಗಳು… ಅಂದ್ರೆ 94 ರನ್‍ಗಳು ಬರೀ 18 ಎಸೆತಗಳಲ್ಲಿ ಬಂದಿವೆ. ಹಾಗಂತ ಇದು ಮ್ಯಾಜಿಕ್ ಬ್ಯಾಟ್‍ನಿಂದ ಬಂದಿರೋದು ಅಲ್ಲ.. ಅಥವಾ ಯಾವುದೇ ಸಿನಿಮಾದಲ್ಲಿ ಮೂಡಿರುವ ಆಟವಲ್ಲ.. 14ರ ಹರೆಯದ ಬಾಲಕ ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡಿರುವ ವೈಭವನ ಬೇಬಿ ಬಾಸ್ ಆಟದ ಖದರ್.

ಬಹುಶಃ ವೈಭವನ ಬ್ಯಾಟಿಂಗ್ ಝಳಕನ್ನು ಮೈದಾನದಲ್ಲಿ ನೋಡಿದವರಿಗೆ ಹೈಲೈಟ್ಸ್ ನೋಡಿದಂಗೆ ಭಾಸವಾದ್ರೂ ಅಚ್ಚರಿ ಏನಿಲ್ಲ. ಮನೆಯಲ್ಲಿ ಟಿವಿ ನೋಡಿಕೊಂಡು ಪಂದ್ಯ ನೋಡುತ್ತಿದ್ದವರು ಬೇರೆ ಚಾನೆಲ್ ನೋಡೋ ಮನಸ್ಸಾಗಲ್ಲ. ಯಾಕಂದ್ರೆ ಅಷ್ಟೊಂದು ಕೂಲ್ ಆಗಿಯೇ ಆಡುತ್ತಿರುವ ಈ ಪೋರನ ಆಟವನ್ನು ಮನಸಾರೆ ಎಂಜಾಯ್ ಮಾಡಬೇಕು ಎಂದು ಅನ್ನಿಸುತ್ತಿರುತ್ತದೆ. ಮುಖದಲ್ಲಿ ಒಂಚೂರು ಟೆನ್ಷನ್ ಇಲ್ಲ. ಅಹಂ ಇಲ್ಲ.. ಜಾಸ್ತಿ ಸಂಭ್ರಮಪಡಲ್ಲ. ಏನೋ ಮಾಮೂಲಿಯಾಗಿ ಆಡುತ್ತಿದ್ದೇನೆ ಎಂಬಂತೆ ಬ್ಯಾಟ್ ಬೀಸುವ ಈ ಹುಡುಗನ ಹಿಂದಿನ ಶಕ್ತಿಯೇ ಗುರು ರಾಹುಲ್ ದ್ರಾವಿಡ್.

ಅದರಲ್ಲೂ 14ರ ಹರೆಯದ ಹುಡುಗನನ್ನು ಐಪಿಎಲ್‍ನಂತಹ ಹೈವೋಲ್ಟೆಜ್ ಮ್ಯಾಚ್‍ನಲ್ಲಿ ಆಡಿಸುವುದು ಅಂದ್ರೆ ಅದು ತಮಾಷೆಯ ಸಂಗತಿಯಲ್ಲ. ಒಬ್ಬ ಕೋಚ್ ಆಗಿ ರಾಹುಲ್ ದ್ರಾವಿಡ್ ಸಾಕಷ್ಟು ರಿಸ್ಕ್ ತಗೊಂಡೇ ಈ ನಿರ್ಧಾರವನ್ನು ತಂಗೋಡಿರುತ್ತಾರೆ. ಹೊಡಿ ಬಡಿ ಆಟವಾಗಿರುವ ಟಿ-20ಯಲ್ಲಿ ಓರ್ವ ಹೈಸ್ಕೂಲ್ ಹುಡುಗನನ್ನು ಆಡಿಸುವುದು ಅಂದ್ರೆ ಆತನ ಪ್ರತಿಭೆ, ಸಾಮಥ್ರ್ಯವನ್ನು ಮೊದಲು ಅರಿತುಕೊಂಡಿರಬೇಕು. ಜೊತೆಗೆ ಆತನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ರೆಡಿ ಮಾಡಿಸಬೇಕು. ಆ ಕೆಲಸವನ್ನು ರಾಜಸ್ತಾನ ರಾಯಲ್ಸ್ ತಂಡದ ಟೀಮ್ ಮ್ಯಾನೇಜ್‍ಮೆಂಟ್ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸರಿಯಾಗಿಯೇ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‍ಗೆ ಹೊಸ ಹುಡುಗರನ್ನು ಪರಿಚಯಿಸಿದ ರಾಹುಲ್ ದ್ರಾವಿಡ್ ಈಗ ಮತ್ತೊಬ್ಬ ಹುಡುಗನನ್ನು ಪರಿಚಯಿಸಿದ್ದಾರೆ. ದ್ರಾವಿಡ್ ಗುರು ಕುಲದಿಂದ ಐಪಿಎಲ್ ಮಾತ್ರವಲ್ಲ.. ಭಾರತ ತಂಡಕ್ಕೆ, ವಿಶ್ವ ಕ್ರಿಕೆಟ್‍ಗೆ ಹೊಸ ಕ್ರಿಕೆಟಿಗನ ಉದಯವಾಗಿದೆ.

ಕಡೆಯದಾಗಿ ವೈಭವ್‍ಗೆ ಐಪಿಎಲ್‍ನಲ್ಲಿ ಕೋಟಿಗೆ ಬೆಲೆಕಟ್ಟಿರಬಹುದು.. ಆದ್ರೆ ಈತ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾನೆ. ಅದರಲ್ಲೂ ಭಾರತೀಯ ಕ್ರಿಕೆಟಿಗೆ ಕಚ್ಛಾ ಡೈಮಂಡ್ ಸಿಕ್ಕಿದೆ. ಅದನ್ನು ಹೊಳೆಯುವಂತೆ ಮಾಡಬೇಕಿದೆ. ಈತನ ಪ್ರತಿ ಹೆಜ್ಜೆಯನ್ನು ಕಣ್ಣಿಟ್ಟು ನೋಡಿಕೊಳ್ಳಬೇಕಿದೆ. ಯಾಕಂದ್ರೆ ಈತನಿಗೆ ಉಜ್ಜಲ ಭವಿಷ್ಯವಿದೆ. ಆದ್ರೆ ಯಶಸ್ಸಿನ ಅಮಲು ತಲೆಗೆ ಹತ್ತದೇ ಇದ್ರೆ ಮುಂದೊಂದು ದಿನ ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ವೈಭವದ ದಿನಗಳನ್ನು ಎದುರುನೋಡಬಹುದು..

ಸನತ್ ರೈ

ShareTweetSendShare
Join us on:

Related Posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

by Shwetha
May 14, 2025
0

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಸಾಲ ತೀರಿಸಲು ಸಿದ್ಧರ...

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

by Shwetha
May 14, 2025
0

ಪಾಕಿಸ್ತಾನ ವಿರುದ್ಧ ನಡೆದ 'ಆಪರೇಷನ್ ಸಿಂಧೂರ' ಯಶಸ್ವಿಯಾದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರವ್ಯಾಪಿ ತಿರಂಗಾ ಯಾತ್ರೆಗೆ ಚಾಲನೆ ನೀಡಲು ತೀರ್ಮಾನಿಸಿದೆ. ಈ ಯಾತ್ರೆಯ ಪ್ರಾರಂಭ...

SPL ಬೆಂಡೆಕಾಯಿ ಗೊಜ್ಜು ರೆಸಿಪಿ

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025

by Shwetha
May 14, 2025
0

Cotton Corporation of India Limited Recruitment 2025 – ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುತ್ತದೆ. ಹುದ್ದೆಗಳ ವಿವರ : ಮ್ಯಾನೇಜ್‌ಮೆಂಟ್...

BSNLನಿಂದ ಗ್ರಾಹಕರಿಗೆ ಸಿಹಿ ಸುದ್ದಿ – ದೇಶಾದ್ಯಂತ 84,000 4G ಟವರ್‌ಗಳು ಸ್ಥಾಪನೆ, ಶೀಘ್ರದಲ್ಲೇ 5G ಸೇವೆ ಆರಂಭ

BSNLನಿಂದ ಗ್ರಾಹಕರಿಗೆ ಸಿಹಿ ಸುದ್ದಿ – ದೇಶಾದ್ಯಂತ 84,000 4G ಟವರ್‌ಗಳು ಸ್ಥಾಪನೆ, ಶೀಘ್ರದಲ್ಲೇ 5G ಸೇವೆ ಆರಂಭ

by Shwetha
May 14, 2025
0

ದೇಶದ ಸರ್ಕಾರಿ ದೂರಸಂಪರ್ಕ ಸಂಸ್ಥೆ BSNL (ಭಾರತ ಸಂಚಾರ ನಿಗಮ್ ಲಿಮಿಟೆಡ್) ತನ್ನ 4G ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ 1 ಲಕ್ಷ 4G ಮೊಬೈಲ್ ಟವರ್‌ಗಳನ್ನು...

ರೆಡ್‌ ಬಾಲ್‌ ಕ್ರಿಕೆಟ್‌ ಗೆ ಕಿಂಗ್‌ ಕೋಹ್ಲಿ ಗುಡ್‌ ಬೈ: ದಾಖಲೆಗಳ ಸರದಾರನಿಗೊಂದು ಅಲ್ವಿದಾ ಹೇಳಲೇಬೇಕಲ್ಲವೇ?

ರೆಡ್‌ ಬಾಲ್‌ ಕ್ರಿಕೆಟ್‌ ಗೆ ಕಿಂಗ್‌ ಕೋಹ್ಲಿ ಗುಡ್‌ ಬೈ: ದಾಖಲೆಗಳ ಸರದಾರನಿಗೊಂದು ಅಲ್ವಿದಾ ಹೇಳಲೇಬೇಕಲ್ಲವೇ?

by Shwetha
May 14, 2025
0

ರನ್‌ ಮೆಷಿನ್‌ ಕಿಂಗ್‌ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಜಗತ್ತು ಕಂಡ ಅಗ್ರಗಣ್ಯ ಬ್ರಾಟರ್‌ ಗಳಲ್ಲಿ ಅಗ್ರಸ್ಥಾನ ಸಂಪಾದಿಸಿಕೊಂಡಿದ್ದ ವಿರಾಟ್‌ ರೆಡ್‌...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram