ಕೋಲಾರದಲ್ಲಿ ನಿರ್ಗತಿಕರಿಗೆ ಉಚಿತ ಕಂಬಳಿ ವಿತರಣೆ
ಕೋಲಾರ : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದೆ. ವೈರಸ್ ನಿಂದ ತಪ್ಪಿಸಿಕೊಳ್ಳಲು ಹಗಲಿನಲ್ಲಿ ಜನರು ಮಾಸ್ಕ್ ಮೊರೆ ಹೋದ್ರೆ, ರಾತ್ರಿ ವೇಳೆ ವಿಪರೀತ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿ ಹಾಗೂ ದುಪ್ಪಟ್ಟು ಹೊದಿಕೆಗಳಿಗೆ ಮೊರೆ ಹೋಗಿದ್ದಾರೆ. ಆದರೆ ನಗರದಲ್ಲಿ ಇರುವ ನೂರಾರು ನಿರ್ಗತಿಕರು, ಮಾನಸಿಕ ಅಸ್ವಸ್ಥರು ಚಳಿಯಿಂದ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನ ಕಂಡ ಕೋಲಾರದ ರೋಟರಿ ಸೆಂಟ್ರಲ್ ಹಾಗೂ ಸಿಎಂಆರ್ ಫೌಂಡೇಶನ್ ಉಚಿತವಾಗಿ ಕಂಬಳಿ ವಿತರಣೆ ಮಾಡುವ ಮೂಲಕ ನಿರ್ಗತಿಕರು ಹಾಗೂ ಭಿಕ್ಷಕರಿಗೆ ನೆರವಾಗಿದ್ದಾರೆ.
ಜೆಡಿಎಸ್ ಯುವ ಮುಖಂಡ ಸಿಎಂಅರ್ ಶ್ರೀನಾಥ್ ನೇತೃತ್ವದಲ್ಲಿ ರೋಟರಿ ಸೆಂಟ್ರಲ್ ಸದಸ್ಯರು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಾಲಯಗಳು, ಪಾರ್ಕ್ ಸೇರಿದಂತೆ ದರ್ಗಾ ಬಳಿ ಇದ್ದ ನಿರ್ಗತಿಕರು, ಭಿಕ್ಷಕರು, ಮಾನಸಿಕ ಅಸ್ವಸ್ಥರಿಗೆ ಕಂಬಳಿ ಹಾಗೂ ಮಾಸ್ಕ್ ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂಆರ್ ಶ್ರೀನಾಥ್, ಪ್ರತಿ ವರ್ಷ ಚಳಿಗಾಲ ಸಮಯದಲ್ಲಿ ರೋಟರಿ ಸೆಂಟ್ರಲ್ ಹಾಗೂ ನಮ್ಮ ಫೌಂಡೇಶನ್ ವತಿಯಿಂದ ಪುಟ್ ಪಾತ್, ಪಾರ್ಕ್, ವೃತ್ತಗಳು, ನಿಲ್ದಾಣ ಸೇರಿದಂತೆ ದೇವಾಲಯ ದರ್ಗಾ ಗಳ ಬಳಿ ಮಲಗುವ ಜನರಿಗೆ ಕಂಬಳಿ ಉಚಿತವಾಗಿ ನೀಡುತ್ತಾ ಬಂದಿದ್ದೇವೆ. ಈ ಬಾರಿ ಕೊಡ ಕಂಬಳಿ ಜೊತೆ ಮಾಸ್ಕ್ ನೀಡುತ್ತಿದ್ದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಿರ್ಗತಿಕರು ಹಾಗೂ ಬಡವರಿಗೆ ಕಂಬಳಿಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.