Ganeshotsava | ಗಣೇಶೋತ್ಸವಕ್ಕೆ ಹೊಸಪೇಟೆ ಸಜ್ಜು
ವಿಜಯನಗರ : ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದ್ದು ಈ ಬಾರಿಯ ಗಣೇಶ ಹಬ್ಬ ಕೊಂಚ ವಿಶೇಷವಾಗಿರಲಿದೆ.
ಈ ಬಾರಿಯ ಚತುರ್ಥಿಗೆ ಗಣೇಶ ತನ್ನ ಜೊತೆ ಕನ್ನಡದ ರಾಜರತ್ನನನ್ನೂ ಸಹ ಕರೆತರಲಿದ್ದಾನೆ.
ವಿಭಿನ್ನರೀತಿಯಲ್ಲಿ ಆಗಮಿಸುತ್ತಿತರುವ ಗಣಪನನ್ನು ಬರಮಾಡಿಕೊಳ್ಳಲು ಎಲ್ಲೆಲ್ಲೂ ಭರ್ಜರಿ ಸಿದ್ದತೆ ನಡೆಯುತ್ತಿದೆ.
ಅದರಂತೆ ವಿಜಯನಗರದ ಜಿಲ್ಲಾ ಕೇಂದ್ರವಾದ ಹೊಸಪೇಟೆ ಗಣೇಶ ಚತುರ್ಥಿಗೆ ಸಜ್ಜಾಗುತ್ತಿದೆ.
ಕೊರೊನಾ ಕಾಟದಿಂದ ಸರ್ಕಾರವೂ ಕಳೆದ ಎರಡು ವರ್ಷದಿಂದ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿತ್ತು.
ಆದರೆ ಈ ಭಾರಿಯ ಗಣೇಶೋತ್ಸವಕ್ಕೆ ಯಾವುದೇ ವಿಘ್ನಗಳಿಲ್ಲ. ಹೀಗಾಗಿ ಗಣೇಶೋತ್ಸವ ದ್ವಿಗುಣಗೊಂಡಿದೆ.
ಹೊಸಪೇಟೆಯಲ್ಲಿ ಕಲ್ಕತ್ತ ಮೂಲದ ಗಣೇಶ ತಯಾರಕರು ವಿಶಿಷ್ಟ ವಿಶೇಷ ಮೂರ್ತಿಗಳು ತಯಾರಿಸುತ್ತಿದ್ದಾರೆ. ಅವುಗಳಿಗೆ ಬೇಡಿಕೆ ಹೆಚ್ಚಾಗಿದೆ.