ದೇಶದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. 8 ಹಾವುಗಳನ್ನು ಪೂಜಿಸಿದರೆ, ಕಾಳಸರ್ಪ ದೋಷ ಮತ್ತು ಹಾವು ಕಡಿತದಿಂದ ಮುಕ್ತಿ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ನಾಗರ ಪಂಚಮಿಯ ದಿನದಂದು ನಾಗರ ಮೂರ್ತಿಗಳನ್ನು ಮಾಡಿ ಹಾಲನ್ನು ಅರ್ಪಿಸಲಾಗುತ್ತದೆ.
ಸರ್ಪಗಳಾದ ರಾಹು ಮತ್ತು ಕೇತು ಈ ದೋಷದ ಪ್ರಮುಖ ಅಂಶಗಳಾಗಿವೆ. ಜಾತಕದಲ್ಲಿ ಕಾಳಸರ್ಪ ಮತ್ತು ಹಾವು ಕಡಿತದ ಯೋಗವು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾಗಪಂಚಮಿಯಂದು ಈ ಹಾವುಗಳನ್ನು ಪೂಜಿಸುವುದರಿಂದ ಈ ಎರಡೂ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಈ ದಿನ ಕಾಳಿಯ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟ, ಧನಂಜಯ್, ತಕ್ಷಕ ಮತ್ತು ವಾಸುಕಿ ನಾಗರ ಹಾವನ್ನು ಪೂಜಿಸುವುದರಿಂದ ಈ ದೋಷ ಪರಿಹರಿಸಿಕೊಳ್ಳಬಹುದು. ನಾಗಪಂಚಮಿಯ ದಿನದಂದು ಪೂಜೆ ಮಾಡುವುದರಿಂದ ರಾಹು ಕೂಡ ಶಾಂತನಾಗುತ್ತಾನೆ.