ವಿವೇಕನಗರ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರಿಗೆ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗಾಗಿ ಚಿನ್ನದ ಪದಕ Rafeeq KM Gold Medal
ವಿಟ್ಲ, ನವೆಂಬರ್19: ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರಿಗೆ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಚಿನ್ನದ ಪದಕ ಪ್ರಧಾನ ಮಾಡಲಿದ್ದಾರೆ. Rafeeq KM Gold Medal
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೆಲಿಂಜ ನಿವಾಸಿ ಆಗಿರುವ ರಫೀಕ್ ಕೆ.ಎಂ ಅವರಿಗೆ ನವೆಂಬರ್ 20ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿಗಳು ಚಿನ್ನದ ಪದಕ ಪ್ರಧಾನ ಮಾಡಲಿದ್ದಾರೆ.
ಕೆಲಿಂಜ ನಿವಾಸಿ ಅಬ್ದುಲ್ ಖಾದರ್ ಮತ್ತು ನೆಬಿಸ ದಂಪತಿಗಳ ಪುತ್ರರಾಗಿರುವ ರಫೀಕ್ ಕೆ.ಎಂ ಅವರು ತಮ್ಮ ಸೇವೆಯನ್ನು ಮೈಸೂರು ಜಿಲ್ಲೆಯ ಹುಣಸೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪ್ರಾರಂಭಿಸಿದರು. ಬಳಿಕ ನಂಜನಗೂಡು, ಪಿರಿಯಾಪಟ್ಟಣ, ಮಂಡ್ಯ, ನಾಗಮಂಗಲ ಹಾಗೂ ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾದರು.
ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗೆ ಸಂಪುಟ ಅಸ್ತು
ನಂತರ ಮಂಗಳೂರು ಕಮೀಷನರ್ ಕಚೇರಿಗೆ ಮುಂಭಡ್ತಿ ಪಡೆದು ಸರ್ಕಲ್ ಇನ್ಸ್ಪೆಕ್ಟರ್ ಆದ ರಫೀಕ್ ಕೆ.ಎಂ ಬಳಿಕ ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರಿನ ವಿವೇಕನಗರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಪಣಂಬೂರು ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ದೀಪಕ್ ರಾವ್ ರವರ ಹತ್ಯೆಗೈದ ಆರೋಪಿಗಳನ್ನು ತಮ್ಮ ಪರಿಶ್ರಮ ಮತ್ತು ಚಾಣಾಕ್ಷತನದಿಂದ ಬೆನ್ನತ್ತಿ ಬಂಧಿಸಿದ್ದರು . ನಂತರ ಬೆಂಗ್ರೆಯ ಕೋಮು ಸಂಘರ್ಷ ಪರಿಸ್ಥಿತಿಯನ್ನು ತಹಬಂದಿಗೆ ತರಲು ಯಶಸ್ವಿಯಾಗಿದ್ದರು. ರೇಪ್ ಕೇಸ್ ಜಾಲವನ್ನು ಭೇದಿಸಿ ಯಾವುದೇ ಒತ್ತಡಕ್ಕೆ ಒಳಗಾಗದೆ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದರು.
ಇವರು ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಅತಂತ್ರರಾಗಿದ್ದ ಹೊರರಾಜ್ಯದ ನೂರಾರು ಕಾರ್ಮಿಕರ, ಬಡಜನರ ಹಿತಕ್ಕಾಗಿ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.
ಸರ್ಕಲ್ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರು ಜನಸ್ನೇಹಿಯಾಗಿದ್ದು, ಜನರಿಗೆ ಪೊಲೀಸ್ ಇಲಾಖೆಯ ಮೇಲೆ ಭರವಸೆ ಮೂಡಿಸುತ್ತಿರುವ ಕೆಲವೇ ಅಧಿಕಾರಿಗಳಲ್ಲಿ ಒಬ್ಬರು. ಈ ಬಾರಿಯ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗಾಗಿ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ ಜನರ ಹತ್ತಿರ ಪೊಲೀಸ್ ಇಲಾಖೆಯನ್ನು ತರಲು ಪ್ರಯತ್ನಿಸುತ್ತಿರುವ ಅರ್ಹ ವ್ಯಕ್ತಿಗೆ ಸಂದಿರುವುದು ಸಂತೋಷದ ವಿಷಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಸಿರು ಬಟಾಣಿಗಳ 5 ಬೆರಗುಗೊಳಿಸುವ ಆರೋಗ್ಯ ಪ್ರಯೋಜನಗಳು https://t.co/ApvMKdgXi1
— Saaksha TV (@SaakshaTv) November 18, 2020
ಕೆಲವೇ ನಿಮಿಷಗಳಲ್ಲಿ ತ್ವರಿತ ಆಧಾರ್ ಆಧಾರಿತ ಪ್ಯಾನ್ ಕಾರ್ಡ್ ಪಡೆಯಿರಿ – ಇಲ್ಲಿದೆ ಮಾಹಿತಿ https://t.co/otnB73hWAR
— Saaksha TV (@SaakshaTv) November 18, 2020