ಮಳೆಗಾಲ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ. ಅದು ಈಗಿನ ಮಳೆಯಲ್ಲಿ ಸಂಜೆಯ ಹೊತ್ತಲ್ಲಿ, ಚುಮು ಚುಮು ಚಳಿಯಲ್ಲಿ, ಛಾ ಜೊತೆ ಬಿಸಿ ಬಿಸಿಯಾಗಿ ಏನಾದ್ರು ತಿನ್ಬೇಕಂತ ಮನಸ್ಸು ಹೇಳುವುದಂತೂ ಸಹಜ.
ಇನ್ನು ಕೆಲವರಿಗಂತೂ ಮಳೆಯಲ್ಲಿ ಐಸ್ ಕ್ರೀಮ್ ತಿನ್ನೋದು ಒಂದು ರೀತಿಯ ಖುಷಿ ಕೊಡುತ್ತೆ.
ಹಾಗೂ ಕೆಲವರಿಗಂತೂ ಮಳೆಗಾಲ ಬಂದ್ರೆ ಸಾಕು ಕುರುಕಲ್ಲು ತಿಂಡಿಗಳನ್ನು ತಿನ್ನುವುದು ಬಹಳ ಇಷ್ಟ.
ಆದರೆ ಈ ಮಳೆಗಾಲದಲ್ಲಿ ನಾವು ಅನುಸರಿಸುವ ಲೈಫ್ ಸ್ಟೈಲ್ ಎಷ್ಟು ಉತ್ತಮ.? ಎಷ್ಟು ಆರೋಗ್ಯಕರ.? ಎಂದು ಯಾವಾಗ್ಲಾದ್ರೂ ಯೋಚಿಸಿದ್ದೀರಾ..?
ಮಳೆಗಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾದರೆ ಕೆಲವೊಂದಿಷ್ಟು ಮನೆಗೆ ಮದ್ದುಗಳನ್ನು ಅನುಸರಿಸುವುದು ಅತ್ಯವಶ್ಯಕವಾಗಿರುತ್ತದೆ.
ಅದರಂತೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದಿಷ್ಟು ವಸ್ತುಗಳನ್ನು ದೈನಂದಿನ ಸೇವನೆಯ ಪಟ್ಟಿಗೆ ಸೇರಿಸಿಕೊಳ್ಳುವುದು ಉತ್ತಮ.
ಆ ರೀತಿ ಆಹಾರ ಪಟ್ಟಿಯ ಬಗ್ಗೆ ನಿಮಗೆ ಮಾಹಿತಿ ತಿಳಿದಿಲ್ಲವಾದರೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಹೆಚ್ಚಾಗಿ ಪ್ರೋಟೀನ್ ಅಂಶ ಇರುವ ಆಹಾರಗಳ ಸೇವನೆ.
ನಾವು ಸೇವಿಸುವ ಆಹಾರಗಳಲ್ಲಿ ಆರೋಗ್ಯಕ್ಕೆ ಬೇಕಾದ ಪ್ರೋಟೀನ್ ಅಂಶವಿರುವ ಆಹಾರ ಪದಾರ್ಥಗಳನ್ನುಹೆಚ್ಚು ಸೇವಿಸಿ.
ಮಳೆಗಾಲದಲ್ಲಿ ಈ ರೀತಿ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಕೋಳಿ ಮಾಂಸ ಹಾಗೂ ಹೆಸರು ಬೇಳೆ, ಕೆಂಪು ಬೇಳೆ, ಅಲಸಂದಿ ಕಾಳು, ಕೆಂಪು ಬಳ್ಳಿ ಹುರುಳಿ, ಸೋಯಾ ಅವರೆ ಕಳು ಅಂತಹ ದ್ವಿದಳ ಧಾನ್ಯಗಳು ಆರೋಗ್ಯಕ್ಕೆ ಪ್ರೋಟೀನ್ ಗಳನ್ನು ಉತ್ತಮವಾಗಿ ಒದಗಿಸುತ್ತವೆ.
ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು.
ಸೋರೆಕಾಯಿಗಳ ಋತು ಎಂದೇ ಕರೆಯುವ ಮಳೆಗಾಲದಲ್ಲಿ ಈ ಹಸಿರು ತರಕಾರಿಯನ್ನು ಹೇರಳವಾಗಿ ನೋಡಬಹುದಾಗಿದೆ. ಈ ತರಕಾರಿಯ ಸೇವನೆ ಉತ್ತಮ.
ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನಿಮ್ಮ ಆಹಾರಗಳಲ್ಲಿ ಹೆಚ್ಚಾಗಿ ಬಳಸಿರಿ
ದೈನಂದಿನ ಅಡುಗೆಯಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸುವುದ ಉತ್ತಮ.
ಮಳೆಗಾಲದಲ್ಲಿ ಆಗಾಗ ಬರುವಂತಹ ಶೀತ,ಕೆಮ್ಮು,ಜ್ವರಗಳ ವಿರುದ್ಧ ನಮ್ಮ ದೇಹ ಹೋರಾಡಲು ಸಹಾಯ ಮಾಡುತ್ತದೆ.
ಮೂಗು ಮತ್ತು ಗಂಟಲಿನ ಸೋಂಕು ನಿವಾರಿಸುವಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಹೆಚ್ಚು ಪರಿಣಾಮಕಾರಿಯಾಗಿದೆ.
ಒಮೆಗಾ-3 ಕೊಬ್ಬಿನಾಮ್ಲಗಳಿರುವ ಪದಾರ್ಥಗಳನ್ನು ಸೇವಿಸಿರಿ
ಒಮೆಗಾ-3 ಯು ಪ್ರತಿರಕ್ಷಣಾ ಮಾಡ್ಯುಲೇಟರಿ ಪರಿಣಾಮವನ್ನು ಹೊಂದಿದೆ. ಮಳೆಗಾಲದಲ್ಲಿ, ಆಹಾರ ಮತ್ತು ನೀರಿನ ನಿಂದ ಸೋಂಕಿನ ಅಪಾಯವು ಹೆಚ್ಚಾವ ಸಮಯದಲ್ಲಿ,ರೋಗ ನಿರೋಧಕ ಶಕ್ತಿಯನ್ನುದೇಹದಲ್ಲಿ ಹೆಚ್ಚಿಸಲು ಈ ಅಂಶ ಸಹಾಯ ಮಾಡುತ್ತದೆ.
ಮೀನುಗಳು, ಸೀಗಡಿಗಳು, ಸಿಂಪಿಗಳು, ಬೀಜಗಳು, ಮತ್ತು ವಾಲ್ನಟ್ ಗಳು, ಪಿಸ್ತಾ, ಚಿಯಾ ಬೀಜಗಳು, ಅಗಸೆ ಬೀಜಗಳು ಮುಂತಾದ ಎಣ್ಣೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಾಗಿಕಂಡು ಬರುತ್ತವೆ..
ಅಡುಗೆಯಲ್ಲಿ ಹಸಿರು ಕಾಳು ಮೆಣಸಿನ ಬಳಕೆ.
ಪೈಪರಿನ್ ಎಂಬ ಅಂಶವನ್ನು ಹಸಿರು ಕಾಳು ಮೆಣಸು ಹೊಂದಿರುತ್ತದೆ. ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಲ್ಕಲಾಯ್ಡ್ ಅನ್ನು ಹೊಂದಿದೆ.
ಇದರಲ್ಲಿ ವಿಟಮಿನ್ ಸಿ ಮತ್ತು ಕೆ ಯನ್ನುಹೊಂದಿದೆ.ಉತ್ಕರ್ಷಣ ನಿರೋಧಕ ಅಂಶಗಳನ್ನು ಹಸಿರು ಕಾಳು ಮೆಣಸುಗಳು ಹೊದಿರುತ್ತವೆ. ಇದು ಫ್ರೀ ರ್ಯಾಡಿಕಲ್ ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಮೆಂತ್ಯೆ ಬೀಜಗಳನ್ನು ಮತ್ತು ಮೆಂತ್ಯೆ ಸೊಪ್ಪನ ಬಳಕೆ.
ಮೆಂತ್ಯವು ಶಕ್ತಿ ವರ್ಧಕವಾಗಿದೆ. ಸಾಮಾನ್ಯವಾಗಿ ಬರುವ ಜ್ವರ ಮತ್ತು ಅಜೀರ್ಣತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಕಾಳುಗಳು ಖನಿಜಗಳನ್ನ ಒಳಗೊಂಡಿರುತ್ತವೆ
ಹೆಚ್ಚು ಹಣ್ಣುಗಳನ್ನು ಸೇವನೆ.
ವಿಟಮಿನ್ ಎ ಮತ್ತು ಸಿ ಹೊಂದಿರುವ ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಹಣ್ಣು ಗಳು ಫೈಬರ್ ಮತ್ತು ಹೇರಳವಾದ ನಿರೋಧಕಗಳಿಂದ ತುಂಬಿರುತ್ತವೆ.
ರಸ್ತೆ ಬದಿ ವ್ಯಾಪಾರಿಗಳಿಂದ ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನುವುದನ್ನು ಮತ್ತು ಹಣ್ಣುಗಳ ರಸ ಅಥವಾ ಜ್ಯೂಸ್ ಗಳನ್ನು ಕುಡಿಯುವುದನ್ನು ನಿಲ್ಲಿಸಿರಿ.
ಮನೆಯಲ್ಲಿ ತಾಜಾ ಕತ್ತರಿಸಿದ ಹಣ್ಣುಗಳು ,ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವಾಗಿರಬಹುದು.
ದ್ರವ ಪದಾರ್ಥಗಳ ಹೆಚ್ಚಾಗಿ ಸೇವನೆ.
ಸೂಪ್, ಮಸಾಲಾ ಚಹಾ, ಹಸಿರು ಚಹಾ (ಗ್ರೀನ್ ಟೀ), ಸಾರು, ಇತ್ಯಾದಿಗಳಂತಹ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
ಮರುಜಲೀಕರಣಕ್ಕೆ ಒಳ್ಳೆಯದು ಮತ್ತು ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ.
ಅರಿಶಿಣ ಮಿಶ್ರಿತ ಹಾಲಿನಲ್ಲಿ ಸೇವನೆ.
ಅರಿಶಿನವು ಕರ್ಕ್ಯುಮಿನ್ ಆಂಶವನ್ನು ಹೊಂದಿರುತ್ತದೆ.
ಇದರಲ್ಲಿಉತ್ಕಕೃಷ್ಟ ಪ್ರಮಾಣದ ನಿರೋಧಕ, ಆಂಟಿಮೈಕ್ರೊಬಿಯಲ್ ಪರಿಣಾಮಗಳನ್ನು ಹೊಂದಿದೆ.
ಎಚ್. ಪೈಲೋರಿ, ಎಂ.ಆರ್.ಎಸ್.ಎ. ಮುಂತಾದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ.
ಗ್ಯಾಸ್ಟ್ರಿಕ್, ಹುಣ್ಣುಗಳನ್ನು ತಡೆಯುತ್ತದೆ, ರೋಗ ನಿರೋಧಕ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.
ಇತರ ರಕ್ಷಣಾತ್ಮಕ ಮತ್ತು ತಡೆಗಟ್ಟುವ ಕಾರ್ಯಗಳು ಮಲೇರಿಯಾ ವಿರೋಧಿ ಹೋರಾಡಲು ಸಹಾಯ ಮಾಡುತ್ತದೆ.








