ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

Mahesh M Dhandu by Mahesh M Dhandu
November 14, 2021
in Newsbeat, Politics, ರಾಜಕೀಯ
saakshatv
Share on FacebookShare on TwitterShare on WhatsappShare on Telegram

ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ವರ್ಕ್‌ ಮೆಷಿನ್‌ಗಳು,
ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

saakshatv ಈ ಮಂತ್ರಿ ಮಹೋದಯರಿಗೆ ಹೆಂಡ್ತಿ ಮಕ್ಕಳು ಆಪ್ತರಾಗಿ ಜತೆಯಲ್ಲಿ ಇರ್ತಾರೋ ಬಿಡ್ತಾರೋ ಆದರೆ ಆಪ್ತ ಸಹಾಯಕರು ಮಾತ್ರ ಕಡ್ಡಾಯ ಇರಲೇಬೇಕು. ತಾಳಿಯೊಂದು ಕಟ್ಟಿಸಿಕೊಳ್ಳದ ಆದರೆ ಹೆಂಡತಿಗಿಂತ ಹೆಚ್ಚು ನಂಬಿಗಸ್ತರಾದ ಈ ಆಪ್ತ ಸಹಾಯಕರು ಅತ್ಯಂತ ತಾಳ್ಮೆಯ ಸಹನಾಜೀವಿಗಳು.
ವಿಧಾನಸೌಧದ ಕಡತಗಳ ನೆನಪಿನ ಕೀಲಿ ಕೈಗಳಿವರು. ಇವರಿಲ್ಲದೇ ಮಂತ್ರಿಗಳ ಮಾವಿನಕಾಯಿ ಉದುರುವುದಿಲ್ಲ. ದೂರವಾಣಿ ಕಲರವ ನಿಲ್ಲುವುದಿಲ್ಲ. ಪೆನ್ನಿನ ಕ್ಯಾಪು ಒಪನ್ ಆಗೋಲ್ಲ; ಫೈಲುಗಳು ಚಲಿಸುವುದಿಲ್ಲ. ಕಛೇರಿ ಸಹಾಯಕರು ಹತ್ತಾರು ಮಂದಿ ಇದ್ದರೂ ಆಪ್ತರು ಒಬ್ಬರೋ ಇಬ್ಬರೋ ಮಾತ್ರ. ಎಲ್ಲಾ ಕೆಲಸಕ್ಕೂ ಅವರೇ ಹೆಣಗಬೇಕು, ಏಗಬೇಕು, ಶ್ರಮಿಸಬೇಕು, ದುಡಿದು ಬಳಿದು ಸಾಯಬೇಕು.!

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

ದೇವೇಗೌಡರ ಕುಟುಂಬದ ವರ್ಕೋಹಾಲಿಕ್ ಸಕ್ಸಸ್‌ಗೆ ಕಾರಣರಾದ ಆಪ್ತಸಹಾಯಕ ತಿಪ್ಪೇಸ್ವಾಮಿ ಮೇಲ್ಮನೆ ಸದಸ್ಯರಾಗಿದ್ದಾರೆ. ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಯಾನೆ ವೈಎಸ್‌ವಿ ದತ್ತಾ ಮೇಸ್ಟ್ರು ಕಡೂರಿನ ಯಶಸ್ವಿ ಶಾಸಕರಾದರು. ಸಿದ್ದರಾಮಣ್ಣಂಗೆ ಚಿನ್ನಪ್ಪ, ಗಣೇಶ, ವೆಂಕಟೇಶ, ವಿಜಯಕುಮಾರ್, ಈಗ ದ್ವೇಷ ಕಟ್ಟಿಕೊಂಡಿರುವ ಅಣ್ಣೇಚಾಕನಹಳ್ಳಿ ಪುಟ್ಸಾಮಿ ಆಪ್ತ ಸಹಾಯಕರಿದ್ದರು. ಕುಮಾರಣ್ಣಂಗೆ ಸತೀಶ, ರಘು.. ಮಲ್ಲಿಕಾರ್ಜುನ ಖರ್ಗೆಯವರಿಗೆ ಪಿಎ ಶಿವಣ್ಣ, ಬೊಮ್ಮಾಯಿಯವರಿಗೆ ಮೋಹನ್, ಬಂಗಾರಪ್ಪಂಗೆ ಶ್ರೀಧರ, ತುಕ್ಕೋಜಿ ಆಪ್ತ ಸಹಾಯಕರಾಗಿ ಹಗಲಿರುಳು ದುಡಿದರು. ಜೆ.ಹೆಚ್‌ ಪಟೇಲರಿಗೆ ಶಂಕರಲಿಂಗಪ್ಪ, ಹಾಗೂ ಫೇಮಸ್ ಗನ್ ಮನ್ ತಿಮ್ಮೇಗೌಡ ಆಪ್ತರಾಗಿದ್ದರೇ, ನಾಗೇಗೌಡರ ಯಶವಂತ್, ದೇವಿಶೆಟ್ಟಿಗೌಡ್ರು, ಮಂಡ್ಯದ ಶರ್ಮಾ, ಗೊವಿಂದೇಗೌಡರಿಗೆ ಮಂಜುನಾಥ್, ರಮಾನಾಥ ರೈಗೆ ಇಬ್ರಾಹಿಮ್ ಗೂನಡ್ಕ, ಈಶ್ವರಪ್ಪಗೆ ಕರೆಂಟ್ ಮಂಜು ಹಾಗೂ ಅಡಗೂರು ವಿಶ್ವನಾಥ್‌ರೊಂದಿಗೆ ಬರೋಬ್ಬರಿ ನಲ್ವತ್ತು ವರ್ಷ ಸವೆಸಿರುವ
ನಟರಾಜ್ ಜವಾಬ್ದಾರಿಯುತ ಆಪ್ತ ಸಿಬ್ಬಂದಿಗಳು.

ದಿವಂಗತ ಜಾರ್ಜ್ ಫರ್ನಾಂಡಿಸ್‌ಗೆ ಅನಿಲ್ ಹೆಗಡೆ ಮತ್ತು ದಿವಂಗತ ರಾಮಕೃಷ್ಣ ಹೆಗಡೆಗೆ ರಾಮಪ್ಪ ಎಂಬ ಅತ್ಯಾಪ್ತ ಸಿಬ್ಬಂದಿಗಳಿದ್ದರು. ಮಾಜಿ ಸಿಎಂ ಎಸ್.ಎಂ ಕೃಷ್ಣರಿಗೆ ಶಿವಣ್ಣ ಹಾಗೂ ಎಲ್ಲೋ ಪೇಜಸ್ ಶಾಸ್ತ್ರೀ ಎಂಬ ನಂಬಿಕಸ್ತರಿದ್ದರೇ, ಇಲ್ಲಿಂದ ಹೆಚ್.ಕೆ ಪಾಟೀಲರನ್ನು ಹಾದು ಡಿಕೆಶಿಗೆ ಆಪ್ತರಾಗಿ ಇಡಿ ತನಿಖೆ ಎದುರಿಸಿದ ಶ್ರೀಧರ್ ಮತ್ತು ಶಿವಶಂಕರ್, ಪಿ.ಜಿ.ಆರಚ್‌ ಸಿಂಧ್ಯಾರಿಗೆ ಗಾಯಕ್ವಾಡ್ ಮತ್ತು ಲಕ್ಮೀಶ, ಎಂ.ಪಿ ಪ್ರಕಾಶ್‌ರಿಗೆ ಹನುಮಂತು, ಸಗೀರ್ ಅಹ್ಮದ್‌ಗೆ ಮುಸ್ತಫಾ ಬೇಗ್, ನಫೀಜಾ ಫಜಲ್ ಹಾಗೂ ಖೇಣಿ ಬಳಿ ಇರುವ ನಾಗರಾಜ್ ಮತ್ತು ಹಾರ್ನಳ್ಳಿ ಪಿಎಗಳಾಗಿ ದುಡಿದರು.

ಜಾರ್ಜ್, ಅವರಿಂದ ಯಲಹಂಕ ವಿಶ್ವನಾಥ್‌ವರೆಗೆ ದುಡದು ಆಪ್ತ ಸಹಾಯಕ ಸತ್ಯನಾರಾಯಣ್. ಬಚ್ಚೇಗೌಡರಿಗೆ ಶ್ರೀನಿವಾಸಲು, ದಿವಂಗತ ಅನಂತ್ ಕುಮಾರ್‌ ಅವರಿಗೆ ಶ್ರೀನಿವಾಸ್‌ (ಈಗ ಗೋವಿಂದ ಕಾರಜೋಳ ಅವರ ಆಪ್ತ ಸಹಾಯಕರಾಗಿದ್ದಾರೆ) ಮತ್ತು ನಾರಾಯಣ್‌ ಗಂಭೀರ್, ಮನೋರಮ ಮದ್ವರಾಜ್ ಬಳಿ ಗಮಕಿ ಪ್ರಸನ್ನ, ಧರ್ಮಸಿಂಗ್ ಹತ್ತಿರ ಹನುಮಂತರಾವು ಪ್ರಸಾದೂ ಮೂಗನೂರು  ಸ್ವಾಮಿ, ಯಡೂರಪ್ಪನೋರಿಗೆ ಕುಂಕುಮಬೊಟ್ಟು ಸ್ವಾಮಿ ನಿಷ್ಟೆಯಿಂದ ದುಡಿದರು. ದೇಶಪಾಂಡೆ ಕಛೇರಿಯಲ್ಲಿ ಡಿಸೋಜಾ ಆಪ್ತ ಕಾರ್ಯದರ್ಶಿಯಾಗಿ ಟೈಪಿಸ್ಟ್‌ ಕೆಲಸವನ್ನೂ ಮಾಡುತ್ತಿದ್ದರು. ಈಗ
ರಿಟೈರ್ಡ್ ಆಗಿರುವ ಸಚ್ಚಿದಾನಂದಮೂರ್ತಿ, ಬಾಲು ಬಾಪುಗೌಡ್ರಿದ್ದರು. ಬಸವಲಿಂಗಪ್ಪನವರಿಗೆ ಶ್ರೀವತ್ಸ, ಚಂದ್ರೇಗೌಡರ ರಾಮಪ್ರಿಯ ಹಾಗೂ ಈಗಲೂ ಬಿಟ್ಟಿರದ ಶ್ರೀನಾಥ್ ಶೇಖರ್‌ಗಳು ಹತ್ತಿರದ ಪಿಎಗಳು.

ಇಷ್ಟೇ ಅಲ್ಲ ಜೀವರಾಜ್ ಆಳ್ವ ಹಾಗೂ ಶ್ರೀನಿವಾಸ್ ಪ್ರಸಾದ್ ಅವರಿಗೆ ರಘೂ ಎಂಬ ನೀಯತ್ತಿನ ಆಪ್ತ ಸಹಾಯಕರಿದ್ದರು, ಹಾಗೆಯೇ ಜನತಾದಳ ಕಛೇರಿಯ ಬೋರ್ಕರ್, ದೇವರಾಜ್, ಸೋಮು ಎಂಬುವವರು ಕೆಲಸ ಮಾಡಿದ್ದರು. ಬಿಜೆಪಿಯ ಗಡ್ಡ ಶ್ರೀಧರ್, ಕಾಂಗ್ರೆಸ್ ಕಚೇರಿಯಿಂದ ಪರಮೇಶ್ವರ್‌ಗೆ ತಗಲಿಕೊಂಡ ಆತ್ಮಾಹುತಿ ರಮೇಶ ಇವರನ್ನೂ ಇಲ್ಲಿ ನೆನಸಿಕೊಳ್ಳಲೇಬೇಕು. ಆದರೆ ಆಪ್ತ ಸಹಾಯಕರಿಗೆ ಅಂಟಿಕೊಳ್ಳದೇ ತಮ್ಮ ಭಾಷಣವನ್ನು, ಕಾರ್ಯಕ್ರಮದ ಪಟ್ಟಿಯನ್ನು ತಾವೇ ತಯಾರಿಸಿ ಕಿಸೆಯಲ್ಲಿಟ್ಟುಕೊಳ್ಳುವ ಯಡಿಯೂರಪ್ಪ, ರಾಮಲಿಂಗಾರೆಡ್ಡಿ, ಸುರೇಶ್ ಕುಮಾರ್ ಮುಂತಾದವರು ಕೆಲವರಿದ್ದಾರೆ.

ರಾಜಕೀಯ ಪಡಸಾಲೆಯಲ್ಲಿ ಪತ್ರಿಕೋದ್ಯಮದ ಕೊಡುಗೆಗಳೂ ಇವೆ. ಹರಿಶ್ಚಂದ್ರಭಟ್,
ಶೇಷಚಂದ್ರಿಕಾ. ಎಂ.ಎನ್ ವಿಜಯೇಂದ್ರ, ವಿಶ್ವೇಶ್ವರ ಭಟ್, ಹೆಚ್ ಬಿ ದಿನೇಶ್, ರಾಜು ಅಡಕಳ್ಳಿ, ಸದಾನಂದ, ಅಮೀನ್ ಮಟ್ಟು, ಕೆ.ವಿ ಪ್ರಭಾಕರ್, ಪಿ. ತ್ಯಾಗರಾಜ್, ಮುಂತಾದವರು ಕೆಲವು ಕಾಲದಿಂದಲೂ ನಂಬಿಕಸ್ತರಾಗಿ ಕೆಲಸ ಮಾಡಿದ್ದಾರೆ. ಈಗಲೂ ನಾಗಮಂಗಲದ ಪ್ರಕಾಶ್‌, ಚೇತನ್‌ ಮುಂತಾದವರು ಆಪ್ತ ಸಲಹಾಗಾರರಾಗಿ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಲವಾರು ಕೋಟ್ಯಾಧೀಶ ಆಪ್ತ ಸಹಾಯಕರುಗಳು ಅಬ್ಬೇಪಾರಿಗಳಾಗಿ ಬೀದಿಗೆ ಬಿದ್ದವರಿದ್ದಾರೆ. ಶಾಸಕರು ಮಂತ್ರಿಗಳ ರಹಸ್ಯ ಕಾರ್ಯಾಚರಣೆಗಳು, ವೈಯುಕ್ತಿಕ ತೆವಲುಗಳಲ್ಲಿ ಇನ್ವಾಲ್ವ್ ಆದ ಆಪ್ತಸಹಾಯಕರು, ಗನ್ ಮನ್‌ಳು ಇದ್ದಾರೆ. ತಮ್ಮ ಪಾಡಿಗೆ ಹತ್ತೂವರೆ ಐದೂವರೆ ಕಾಯಕ ಮುಗಿಸಿ ಎದ್ದು ಹೊರಡುವವರೂ ಇದ್ದಾರೆ. ಪಿಎ ರಮೇಶ್ ಎಂಬ ಆಪ್ತ ಸಹಾಯಕನಂತೆಯೇ ಎಷ್ಟೋ ಸಹಾಯಕರು, ಈ ನಾಯಕರ ಕುಟುಂಬದವರ ಕೆಲವು ಸೀಕ್ರೇಟ್ ಕಾರಣಗಳಿಗೆ ಜೀವ ಕಳೆದುಕೊಂಡ ಮ್ಯಾಟರ್‌ಗಳು ಮಣ್ಣಾಗಿ ಹೋಗಿವೆ. ಮಂತ್ರಿಗಳ ಆಂಟೀ ಚೇಂಬರ್‌ಗಳಲ್ಲಿ ಕೇವಲ ಕಡತಗಳು ಮಾತ್ರ ಚಲಿಸುವುದಿಲ್ಲ ಎಂಬ ವಿಚಾರಗಳು ಬಹುತೇಕ ಆಪ್ತ ಸಹಾಯಕರಿಗೆ ಗೊತ್ತಿರುತ್ತದೆ. ವಿಧಾನಸೌಧ,
ರಾಜಕಾರಣದ ಇತಿಹಾಸ, ಸದನದ ಕಡತಗಳಲ್ಲಿ ಕೇವಲ ನಾಯಕರ ಹೆಸರುಗಳು ಮಾತ್ರ ಉಳಿಯುತ್ತವೆ.

ಆದರೆ ಈ ನಾಯಕರಿಗಾಗಿ ಹಗಲು ರಾತ್ರಿ ಎನ್ನದೆ ಅವಿರತವಾಗಿ ದುಡಿಯುವ ವರ್ಕೋಹಾಲಿಕ್‌ಗಳ ಹೆಸರು ಯಾರಿಗೂ ನೆನಪಿರುವುದಿಲ್ಲ, ಯಾರಿಗೂ ಬೇಡ, ಯಾವ ಮಾಧ್ಯಮಗಳು ಇವರ ಬಗ್ಗೆ ಬರೆಯುವುದೂ ಇಲ್ಲ. ಇದಲ್ಲವೇ ದುರಂತ..

ಕೃಪೆ – ಹಿಂದವೀ ಸ್ವರಾಜ್ಯ –

ವೈ.ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು, ಬೆಂಗಳೂರು

Tags: bengalurucm bsydeve gowdaDK Shivakumarex cm Siddaramaiahex pm devegowdaHDKkarnatakakarnataka govtpolitics
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram