ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

Mahesh M Dhandu by Mahesh M Dhandu
November 14, 2021
in Newsbeat, Politics, ರಾಜಕೀಯ
saakshatv
Share on FacebookShare on TwitterShare on WhatsappShare on Telegram

ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ವರ್ಕ್‌ ಮೆಷಿನ್‌ಗಳು,
ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

saakshatv ಈ ಮಂತ್ರಿ ಮಹೋದಯರಿಗೆ ಹೆಂಡ್ತಿ ಮಕ್ಕಳು ಆಪ್ತರಾಗಿ ಜತೆಯಲ್ಲಿ ಇರ್ತಾರೋ ಬಿಡ್ತಾರೋ ಆದರೆ ಆಪ್ತ ಸಹಾಯಕರು ಮಾತ್ರ ಕಡ್ಡಾಯ ಇರಲೇಬೇಕು. ತಾಳಿಯೊಂದು ಕಟ್ಟಿಸಿಕೊಳ್ಳದ ಆದರೆ ಹೆಂಡತಿಗಿಂತ ಹೆಚ್ಚು ನಂಬಿಗಸ್ತರಾದ ಈ ಆಪ್ತ ಸಹಾಯಕರು ಅತ್ಯಂತ ತಾಳ್ಮೆಯ ಸಹನಾಜೀವಿಗಳು.
ವಿಧಾನಸೌಧದ ಕಡತಗಳ ನೆನಪಿನ ಕೀಲಿ ಕೈಗಳಿವರು. ಇವರಿಲ್ಲದೇ ಮಂತ್ರಿಗಳ ಮಾವಿನಕಾಯಿ ಉದುರುವುದಿಲ್ಲ. ದೂರವಾಣಿ ಕಲರವ ನಿಲ್ಲುವುದಿಲ್ಲ. ಪೆನ್ನಿನ ಕ್ಯಾಪು ಒಪನ್ ಆಗೋಲ್ಲ; ಫೈಲುಗಳು ಚಲಿಸುವುದಿಲ್ಲ. ಕಛೇರಿ ಸಹಾಯಕರು ಹತ್ತಾರು ಮಂದಿ ಇದ್ದರೂ ಆಪ್ತರು ಒಬ್ಬರೋ ಇಬ್ಬರೋ ಮಾತ್ರ. ಎಲ್ಲಾ ಕೆಲಸಕ್ಕೂ ಅವರೇ ಹೆಣಗಬೇಕು, ಏಗಬೇಕು, ಶ್ರಮಿಸಬೇಕು, ದುಡಿದು ಬಳಿದು ಸಾಯಬೇಕು.!

Related posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

September 19, 2026
ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

September 19, 2026

ದೇವೇಗೌಡರ ಕುಟುಂಬದ ವರ್ಕೋಹಾಲಿಕ್ ಸಕ್ಸಸ್‌ಗೆ ಕಾರಣರಾದ ಆಪ್ತಸಹಾಯಕ ತಿಪ್ಪೇಸ್ವಾಮಿ ಮೇಲ್ಮನೆ ಸದಸ್ಯರಾಗಿದ್ದಾರೆ. ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಯಾನೆ ವೈಎಸ್‌ವಿ ದತ್ತಾ ಮೇಸ್ಟ್ರು ಕಡೂರಿನ ಯಶಸ್ವಿ ಶಾಸಕರಾದರು. ಸಿದ್ದರಾಮಣ್ಣಂಗೆ ಚಿನ್ನಪ್ಪ, ಗಣೇಶ, ವೆಂಕಟೇಶ, ವಿಜಯಕುಮಾರ್, ಈಗ ದ್ವೇಷ ಕಟ್ಟಿಕೊಂಡಿರುವ ಅಣ್ಣೇಚಾಕನಹಳ್ಳಿ ಪುಟ್ಸಾಮಿ ಆಪ್ತ ಸಹಾಯಕರಿದ್ದರು. ಕುಮಾರಣ್ಣಂಗೆ ಸತೀಶ, ರಘು.. ಮಲ್ಲಿಕಾರ್ಜುನ ಖರ್ಗೆಯವರಿಗೆ ಪಿಎ ಶಿವಣ್ಣ, ಬೊಮ್ಮಾಯಿಯವರಿಗೆ ಮೋಹನ್, ಬಂಗಾರಪ್ಪಂಗೆ ಶ್ರೀಧರ, ತುಕ್ಕೋಜಿ ಆಪ್ತ ಸಹಾಯಕರಾಗಿ ಹಗಲಿರುಳು ದುಡಿದರು. ಜೆ.ಹೆಚ್‌ ಪಟೇಲರಿಗೆ ಶಂಕರಲಿಂಗಪ್ಪ, ಹಾಗೂ ಫೇಮಸ್ ಗನ್ ಮನ್ ತಿಮ್ಮೇಗೌಡ ಆಪ್ತರಾಗಿದ್ದರೇ, ನಾಗೇಗೌಡರ ಯಶವಂತ್, ದೇವಿಶೆಟ್ಟಿಗೌಡ್ರು, ಮಂಡ್ಯದ ಶರ್ಮಾ, ಗೊವಿಂದೇಗೌಡರಿಗೆ ಮಂಜುನಾಥ್, ರಮಾನಾಥ ರೈಗೆ ಇಬ್ರಾಹಿಮ್ ಗೂನಡ್ಕ, ಈಶ್ವರಪ್ಪಗೆ ಕರೆಂಟ್ ಮಂಜು ಹಾಗೂ ಅಡಗೂರು ವಿಶ್ವನಾಥ್‌ರೊಂದಿಗೆ ಬರೋಬ್ಬರಿ ನಲ್ವತ್ತು ವರ್ಷ ಸವೆಸಿರುವ
ನಟರಾಜ್ ಜವಾಬ್ದಾರಿಯುತ ಆಪ್ತ ಸಿಬ್ಬಂದಿಗಳು.

ದಿವಂಗತ ಜಾರ್ಜ್ ಫರ್ನಾಂಡಿಸ್‌ಗೆ ಅನಿಲ್ ಹೆಗಡೆ ಮತ್ತು ದಿವಂಗತ ರಾಮಕೃಷ್ಣ ಹೆಗಡೆಗೆ ರಾಮಪ್ಪ ಎಂಬ ಅತ್ಯಾಪ್ತ ಸಿಬ್ಬಂದಿಗಳಿದ್ದರು. ಮಾಜಿ ಸಿಎಂ ಎಸ್.ಎಂ ಕೃಷ್ಣರಿಗೆ ಶಿವಣ್ಣ ಹಾಗೂ ಎಲ್ಲೋ ಪೇಜಸ್ ಶಾಸ್ತ್ರೀ ಎಂಬ ನಂಬಿಕಸ್ತರಿದ್ದರೇ, ಇಲ್ಲಿಂದ ಹೆಚ್.ಕೆ ಪಾಟೀಲರನ್ನು ಹಾದು ಡಿಕೆಶಿಗೆ ಆಪ್ತರಾಗಿ ಇಡಿ ತನಿಖೆ ಎದುರಿಸಿದ ಶ್ರೀಧರ್ ಮತ್ತು ಶಿವಶಂಕರ್, ಪಿ.ಜಿ.ಆರಚ್‌ ಸಿಂಧ್ಯಾರಿಗೆ ಗಾಯಕ್ವಾಡ್ ಮತ್ತು ಲಕ್ಮೀಶ, ಎಂ.ಪಿ ಪ್ರಕಾಶ್‌ರಿಗೆ ಹನುಮಂತು, ಸಗೀರ್ ಅಹ್ಮದ್‌ಗೆ ಮುಸ್ತಫಾ ಬೇಗ್, ನಫೀಜಾ ಫಜಲ್ ಹಾಗೂ ಖೇಣಿ ಬಳಿ ಇರುವ ನಾಗರಾಜ್ ಮತ್ತು ಹಾರ್ನಳ್ಳಿ ಪಿಎಗಳಾಗಿ ದುಡಿದರು.

ಜಾರ್ಜ್, ಅವರಿಂದ ಯಲಹಂಕ ವಿಶ್ವನಾಥ್‌ವರೆಗೆ ದುಡದು ಆಪ್ತ ಸಹಾಯಕ ಸತ್ಯನಾರಾಯಣ್. ಬಚ್ಚೇಗೌಡರಿಗೆ ಶ್ರೀನಿವಾಸಲು, ದಿವಂಗತ ಅನಂತ್ ಕುಮಾರ್‌ ಅವರಿಗೆ ಶ್ರೀನಿವಾಸ್‌ (ಈಗ ಗೋವಿಂದ ಕಾರಜೋಳ ಅವರ ಆಪ್ತ ಸಹಾಯಕರಾಗಿದ್ದಾರೆ) ಮತ್ತು ನಾರಾಯಣ್‌ ಗಂಭೀರ್, ಮನೋರಮ ಮದ್ವರಾಜ್ ಬಳಿ ಗಮಕಿ ಪ್ರಸನ್ನ, ಧರ್ಮಸಿಂಗ್ ಹತ್ತಿರ ಹನುಮಂತರಾವು ಪ್ರಸಾದೂ ಮೂಗನೂರು  ಸ್ವಾಮಿ, ಯಡೂರಪ್ಪನೋರಿಗೆ ಕುಂಕುಮಬೊಟ್ಟು ಸ್ವಾಮಿ ನಿಷ್ಟೆಯಿಂದ ದುಡಿದರು. ದೇಶಪಾಂಡೆ ಕಛೇರಿಯಲ್ಲಿ ಡಿಸೋಜಾ ಆಪ್ತ ಕಾರ್ಯದರ್ಶಿಯಾಗಿ ಟೈಪಿಸ್ಟ್‌ ಕೆಲಸವನ್ನೂ ಮಾಡುತ್ತಿದ್ದರು. ಈಗ
ರಿಟೈರ್ಡ್ ಆಗಿರುವ ಸಚ್ಚಿದಾನಂದಮೂರ್ತಿ, ಬಾಲು ಬಾಪುಗೌಡ್ರಿದ್ದರು. ಬಸವಲಿಂಗಪ್ಪನವರಿಗೆ ಶ್ರೀವತ್ಸ, ಚಂದ್ರೇಗೌಡರ ರಾಮಪ್ರಿಯ ಹಾಗೂ ಈಗಲೂ ಬಿಟ್ಟಿರದ ಶ್ರೀನಾಥ್ ಶೇಖರ್‌ಗಳು ಹತ್ತಿರದ ಪಿಎಗಳು.

ಇಷ್ಟೇ ಅಲ್ಲ ಜೀವರಾಜ್ ಆಳ್ವ ಹಾಗೂ ಶ್ರೀನಿವಾಸ್ ಪ್ರಸಾದ್ ಅವರಿಗೆ ರಘೂ ಎಂಬ ನೀಯತ್ತಿನ ಆಪ್ತ ಸಹಾಯಕರಿದ್ದರು, ಹಾಗೆಯೇ ಜನತಾದಳ ಕಛೇರಿಯ ಬೋರ್ಕರ್, ದೇವರಾಜ್, ಸೋಮು ಎಂಬುವವರು ಕೆಲಸ ಮಾಡಿದ್ದರು. ಬಿಜೆಪಿಯ ಗಡ್ಡ ಶ್ರೀಧರ್, ಕಾಂಗ್ರೆಸ್ ಕಚೇರಿಯಿಂದ ಪರಮೇಶ್ವರ್‌ಗೆ ತಗಲಿಕೊಂಡ ಆತ್ಮಾಹುತಿ ರಮೇಶ ಇವರನ್ನೂ ಇಲ್ಲಿ ನೆನಸಿಕೊಳ್ಳಲೇಬೇಕು. ಆದರೆ ಆಪ್ತ ಸಹಾಯಕರಿಗೆ ಅಂಟಿಕೊಳ್ಳದೇ ತಮ್ಮ ಭಾಷಣವನ್ನು, ಕಾರ್ಯಕ್ರಮದ ಪಟ್ಟಿಯನ್ನು ತಾವೇ ತಯಾರಿಸಿ ಕಿಸೆಯಲ್ಲಿಟ್ಟುಕೊಳ್ಳುವ ಯಡಿಯೂರಪ್ಪ, ರಾಮಲಿಂಗಾರೆಡ್ಡಿ, ಸುರೇಶ್ ಕುಮಾರ್ ಮುಂತಾದವರು ಕೆಲವರಿದ್ದಾರೆ.

ರಾಜಕೀಯ ಪಡಸಾಲೆಯಲ್ಲಿ ಪತ್ರಿಕೋದ್ಯಮದ ಕೊಡುಗೆಗಳೂ ಇವೆ. ಹರಿಶ್ಚಂದ್ರಭಟ್,
ಶೇಷಚಂದ್ರಿಕಾ. ಎಂ.ಎನ್ ವಿಜಯೇಂದ್ರ, ವಿಶ್ವೇಶ್ವರ ಭಟ್, ಹೆಚ್ ಬಿ ದಿನೇಶ್, ರಾಜು ಅಡಕಳ್ಳಿ, ಸದಾನಂದ, ಅಮೀನ್ ಮಟ್ಟು, ಕೆ.ವಿ ಪ್ರಭಾಕರ್, ಪಿ. ತ್ಯಾಗರಾಜ್, ಮುಂತಾದವರು ಕೆಲವು ಕಾಲದಿಂದಲೂ ನಂಬಿಕಸ್ತರಾಗಿ ಕೆಲಸ ಮಾಡಿದ್ದಾರೆ. ಈಗಲೂ ನಾಗಮಂಗಲದ ಪ್ರಕಾಶ್‌, ಚೇತನ್‌ ಮುಂತಾದವರು ಆಪ್ತ ಸಲಹಾಗಾರರಾಗಿ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಲವಾರು ಕೋಟ್ಯಾಧೀಶ ಆಪ್ತ ಸಹಾಯಕರುಗಳು ಅಬ್ಬೇಪಾರಿಗಳಾಗಿ ಬೀದಿಗೆ ಬಿದ್ದವರಿದ್ದಾರೆ. ಶಾಸಕರು ಮಂತ್ರಿಗಳ ರಹಸ್ಯ ಕಾರ್ಯಾಚರಣೆಗಳು, ವೈಯುಕ್ತಿಕ ತೆವಲುಗಳಲ್ಲಿ ಇನ್ವಾಲ್ವ್ ಆದ ಆಪ್ತಸಹಾಯಕರು, ಗನ್ ಮನ್‌ಳು ಇದ್ದಾರೆ. ತಮ್ಮ ಪಾಡಿಗೆ ಹತ್ತೂವರೆ ಐದೂವರೆ ಕಾಯಕ ಮುಗಿಸಿ ಎದ್ದು ಹೊರಡುವವರೂ ಇದ್ದಾರೆ. ಪಿಎ ರಮೇಶ್ ಎಂಬ ಆಪ್ತ ಸಹಾಯಕನಂತೆಯೇ ಎಷ್ಟೋ ಸಹಾಯಕರು, ಈ ನಾಯಕರ ಕುಟುಂಬದವರ ಕೆಲವು ಸೀಕ್ರೇಟ್ ಕಾರಣಗಳಿಗೆ ಜೀವ ಕಳೆದುಕೊಂಡ ಮ್ಯಾಟರ್‌ಗಳು ಮಣ್ಣಾಗಿ ಹೋಗಿವೆ. ಮಂತ್ರಿಗಳ ಆಂಟೀ ಚೇಂಬರ್‌ಗಳಲ್ಲಿ ಕೇವಲ ಕಡತಗಳು ಮಾತ್ರ ಚಲಿಸುವುದಿಲ್ಲ ಎಂಬ ವಿಚಾರಗಳು ಬಹುತೇಕ ಆಪ್ತ ಸಹಾಯಕರಿಗೆ ಗೊತ್ತಿರುತ್ತದೆ. ವಿಧಾನಸೌಧ,
ರಾಜಕಾರಣದ ಇತಿಹಾಸ, ಸದನದ ಕಡತಗಳಲ್ಲಿ ಕೇವಲ ನಾಯಕರ ಹೆಸರುಗಳು ಮಾತ್ರ ಉಳಿಯುತ್ತವೆ.

ಆದರೆ ಈ ನಾಯಕರಿಗಾಗಿ ಹಗಲು ರಾತ್ರಿ ಎನ್ನದೆ ಅವಿರತವಾಗಿ ದುಡಿಯುವ ವರ್ಕೋಹಾಲಿಕ್‌ಗಳ ಹೆಸರು ಯಾರಿಗೂ ನೆನಪಿರುವುದಿಲ್ಲ, ಯಾರಿಗೂ ಬೇಡ, ಯಾವ ಮಾಧ್ಯಮಗಳು ಇವರ ಬಗ್ಗೆ ಬರೆಯುವುದೂ ಇಲ್ಲ. ಇದಲ್ಲವೇ ದುರಂತ..

ಕೃಪೆ – ಹಿಂದವೀ ಸ್ವರಾಜ್ಯ –

ವೈ.ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು, ಬೆಂಗಳೂರು

Tags: bengalurucm bsydeve gowdaDK Shivakumarex cm Siddaramaiahex pm devegowdaHDKkarnatakakarnataka govtpolitics
ShareTweetSendShare
Join us on:

Related Posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

by Shwetha
September 19, 2026
0

ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

by Shwetha
September 19, 2026
0

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ ₹3...

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

by Shwetha
September 19, 2026
0

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್...

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

by Shwetha
September 19, 2026
0

ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಮೃತದೇಹದ ಬಳಿ ಪ್ರಯಾಣದ ಟಿಕೆಟ್ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು...

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

by Shwetha
September 19, 2026
0

ಬೆಂಗಳೂರು: ರಾಜ್ಯದಲ್ಲಿ 'ವಂದೇ ಮಾತರಂ' ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram