ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕೋವಿಡ್ ನಿಯಂತ್ರಣ ಮಾಡಲೇಬೇಕಿದ್ದ ಸಮಯದಲ್ಲಿ ಹಬ್ಬ, ಜಾತ್ರೆ ರ್ಯಾಲಿ ಮಾಡಿದ ಹೊಣೆಗೇಡಿ ಸರ್ಕಾರಗಳಿಂದಲೇ ಅಮಾಯಕ ಪ್ರಜೆಗಳ ಸಾಮೂಹಿಕ ಕಗ್ಗೊಲೆ

Shwetha by Shwetha
May 1, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Covid victims bodies
Share on FacebookShare on TwitterShare on WhatsappShare on Telegram

ಕೋವಿಡ್ ನಿಯಂತ್ರಣ ಮಾಡಲೇಬೇಕಿದ್ದ ಸಮಯದಲ್ಲಿ ಹಬ್ಬ, ಜಾತ್ರೆ ರ್ಯಾಲಿ ಮಾಡಿದ ಹೊಣೆಗೇಡಿ ಸರ್ಕಾರಗಳಿಂದಲೇ ಅಮಾಯಕ ಪ್ರಜೆಗಳ ಸಾಮೂಹಿಕ ಕಗ್ಗೊಲೆ ನಡೆಯಿತು: Marjala manthana Covid control

“ಭಾರತ ಕೋವಿಡ್ ಸಂಗ್ರಾಮದಲ್ಲಿ ಗೆದ್ದೇ ಬಿಟ್ಟಿತು ಎಂದು ಮೀಸೆ ತಿರುವಿದ ಸಮಸ್ತರ ಗಮನಕ್ಕೆ ಒಂದಷ್ಟು ಅಂಕಿ ಅಂಶ ಮಾಹಿತಿ ಸಹಿತ ಲೇಖನ; ಹಗಲೂ ರಾತ್ರಿ ಭಜನೆ ಮಾಡುವ ನಡುವೆ ಕೊಂಚ ಬಿಡುವು ಮಾಡಿಕೊಂಡು ಇದನ್ನು ದಯವಿಟ್ಟು ಓದಿ” Marjala manthana Covid control
Covid positive

Related posts

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

March 6, 2026
ಖಾಸಗಿ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ – ಸಾನಿಯಾ ವಿವಾಹ; ಫೋಟೋಗಳು ವೈರಲ್

ಖಾಸಗಿ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ – ಸಾನಿಯಾ ವಿವಾಹ; ಫೋಟೋಗಳು ವೈರಲ್

March 6, 2026

ಕೋವಿಡ್‌ ಮೊದಲನೇ ಅಲೆಯು ಕಳೆದ ಜನವರಿ ಸಮಯದಲ್ಲೇ ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಪೂರ್ತಿ ಮುಗಿದಿರಲಿಲ್ಲ. ಆಗ ಅದರ ಪೂರ್ಣ ನಿರ್ಮೂಲನೆಗೆ ಸಾಕಷ್ಟು ಎಚ್ಚರ ವಹಿಸಬೇಕಿತ್ತು. ಭಾರತಕ್ಕೆ ಕೋವಿಡ್ ಎರಡನೇ ಅಲೆಯ ದಾಳಿ ಸಾಧ್ಯತೆ ಇದೆ. ಏಪ್ರಿಲ್ ಮೇ ವೇಳೆಗೆ ಇದು ವಿಕೋಪಕ್ಕೆ ಹೋಗಲಿದೆ ಎಂದು ಪದೇ ಪದೇ ತಜ್ಞರು ಎಚ್ಚರಿಸಿದರೂ ನಮ್ಮ ಸರ್ಕಾರಗಳು ಅಲಕ್ಷಿಸಿದವು. ಸರ್ಕಾರವೇ ಮುಂದೆ ನಿಂತು ಹಬ್ಬ, ಜಾತ್ರೆ, ಮಹಾಕುಂಭ ಮತ್ತು ಸರಣಿ ಚುನಾವಣಾ ರ್ಯಾಲಿಗಳನ್ನು ನಡೆಸಿತಲ್ಲ ಅದರ ಪರಿಣಾಮವನ್ನೇ ಇಂದು ನಾವು ಅನುಭವಿಸುತ್ತಿರುವುದು. ಹೊಣೆಗೇಡಿ ದರಿದ್ರ ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಪ್ರಜೆಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ.

ದೆಹಲಿಯಲ್ಲಿ ಮಾರ್ಚ್ ಶುರುವಿನ ತನಕವೂ ಪ್ರತಿನಿತ್ಯ 200 ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು. ಮಾರ್ಚ್ 1ರ ವೇಳೆಯಲ್ಲಿ 1,404 ಸಕ್ರಿಯ ಪ್ರಕರಣಗಳಿದ್ದವು. ಆದರೆ ಮಾರ್ಚ್ 18ರ ನಂತರ ದೆಹಲಿ ಬೀದಿಗಳು ಹೋಳಿ ಹಬ್ಬದ ಬಣ್ಣದೋಕುಳಿಯಿಂದ ರಂಗೇರಿತು. ಅದರ ಪರಿಣಾಮ ಈಗ ಪ್ರತಿನಿತ್ಯ ದೆಹಲಿಯಲ್ಲಿ 20 ಸಾವಿರ ಪ್ರಕರಣ ವರದಿಯಾಗುತ್ತಿದೆ. ದೆಹಲಿಯ ಬೀದಿ ಬೀದಿಗಳಲ್ಲಿ ಮೂಗಿಗೆ ಆಕ್ಸಿಜನ್ ಹಾಕಿಕೊಂಡು ಮಲಗಿರುವ ರೋಗಿಗಳು ಕಂಡು ಬರುತ್ತಿದ್ದಾರೆ.

ಕೇರಳದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ಕೋವಿಡ್ ಕಂಪ್ಲೀಟ್ ಕಂಟ್ರೋಲ್ ನಲ್ಲಿತ್ತು. ಈಗ ನಿತ್ಯ ಸರಾಸರಿ 22 ಸಾವಿರ ಕೋವಿಡ್ ಪ್ರಕರಣಗಳು. ಕೇರಳವನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿದ ಬಿಜೆಪಿ, ಕಾಂಗ್ರೆಸ್ ಮತ್ತು ಲೆಫ್ಟ್ ಪಾರ್ಟಿಗಳ ಚುನಾವಣಾ ಪ್ರಚಾರ ಇದಕ್ಕೆ ನೇರ ಕಾರಣ. ಏಪ್ರಿಲ್ 26 ರಂದು ಕೇರಳದಂತ ಸಣ್ಣ ರಾಜ್ಯದಲ್ಲಿ ವರದಿಯಾದ ಸಕ್ರಿಯ ಕೋವಿಡ್ ಪ್ರಕರಣ 2.32 ಲಕ್ಷ.

ಪುದುಚೇರಿಯಲ್ಲಿಯೂ ಕೋವಿಡ್ ಎರಡನೇ ಅಲೆಯ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಚುನಾವಣೆಯ ಕಾರಣಕ್ಕೆ. ಇಲ್ಲಿ ಅತಿ ಹೆಚ್ಚು ಚುನಾವಣಾ ಸಭೆ ನಡೆಸಿದ್ದು ಬಿಜೆಪಿ ಮತ್ತು ಎಐಡಿಎಂಕೆ. ಏಪ್ರಿಲ್ 26ರ ವೇಳೆಗೆ 7750 ಸಕ್ರಿಯ ಪ್ರಕರಣ ಪುದುಚೆರಿಯಲ್ಲಿ ವರದಿಯಾಗಿದೆ.

ತಮಿಳುನಾಡು ಸಹ ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್‌, ಕಮಲ್ ಹಾಸನ್ ಪಕ್ಷಗಳ ನಿರಂತರ ಬೃಹತ್ ಜನಸಂಪರ್ಕ ರ್ಯಾಲಿಗಳ ಕಾರಣ ಕೋವಿಡ್ ದಾಳಿಗೆ ತುತ್ತಾಗಿದೆ. ಇಲ್ಲಿಯೂ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ಸಭೆ ನಡೆಸಿ ಕೋವಿಡ್ ಬಿತ್ತನೆ ಮಾಡಿದ್ದಾರೆ. ಫೆಬ್ರವರಿಯಲ್ಲಿ 4 ಸಾವಿರದಷ್ಟಿದ್ದ ಪ್ರಕರಣ ಏಪ್ರಿಲ್ ಅಂತ್ಯದ ವೇಳೆಗೆ 1.07 ಲಕ್ಷದಷ್ಟಾಗಿದೆ.

Election rally

ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಎರಡನೆಯ ಅಲೆಯ ಪರಾಕಾಷ್ಟೆಗೆ ನೇರ ಕಾರಣ ಪ್ರಧಾನಿಗಳ, ಕೇಂದ್ರ ಗೃಹಸಚಿವರ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್, ಮಮತಾ ದೀದಿ ಮತ್ತು ರಾಹುಲ್ ರ ಬಹಿರಂಗ ಪ್ರಚಾರ ಸಭೆಗಳು. ಫೆಬ್ರವರಿಯಲ್ಲಿ ಕೇವಲ 180 ನಿತ್ಯ ವರದಿಯಾಗುತ್ತಿದ್ದ ಕೋವಿಡ್ ಸಕ್ರಿಯ ಪ್ರಕರಣಗಳನ್ನು ಈಗ 15 ಸಾವಿರಕ್ಕೆ ಹೆಚ್ಚಳವಾಗಿದೆ ಇದರ ಸಂಪೂರ್ಣ ಶ್ರೇಯ ಈ ರಾಜಕೀಯ ಪಕ್ಷಗಳಿಗೆ ಸಲ್ಲಬೇಕು. ಬಿಜೆಪಿ ಮತ್ತು ಟಿಎಂಸಿ ಪ್ರತಿದಿನ 8 ಪ್ರಚಾರ ರ್ಯಾಲಿ ಮಾಡಿದೆ. ಬಿಜೆಪಿ 300 ಬಹಿರಂಗ ಪ್ರಚಾರ ಸಭೆ ಮತ್ತು 160 ರೋಡ್ ಶೋ ನಡೆಸಿದರೇ, ತೃಣಮೂಲ ಕಾಂಗ್ರೆಸ್ ಸಹ 180 ರ್ಯಾಲಿಗಳನ್ನು ನಡೆಸಿದೆ. ಏಪ್ರಿಲ್ 26ರಂದು 94 ಸಾವಿರ ಚಿಲ್ಲರೆ ಸಕ್ರಿಯ ಕೋವಿಡ್ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಅಘಾಡಿ ಘಟಬಂದನ್ ಸರ್ಕಾರ ಮಾರ್ಚ್ ಕೊನೆಯ ವಾರ ಹೋಳಿ ಆಚರಣೆಗೆ ಅವಕಾಶ ಮಾಡಿಕೊಟ್ಟಿತು. ಕಳೆದ ವರ್ಷಾಂತ್ಯದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು ಕೋವಿಡ್. ಈಗ ರಾಜ್ಯದಲ್ಲಿ ಪ್ರತಿದಿನ 55,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಮಾರ್ಚ್ 2ರಿಂದ ಏಪ್ರಿಲ್ 26ರ ವರೆಗೆ ಬರೋಬ್ಬರಿ 22 ಲಕ್ಷ ಸಕ್ರಿಯ ಕೋವಿಡ್ ಪ್ರಕರಣ ವರದಿಯಾಗಿದೆ.

ಉತ್ತರಾಖಂಡದ ವಿಚಾರದಲ್ಲಿ ಹೆಚ್ಚೇನು ಹೇಳಬೇಕಾಗಿಯೇ ಇಲ್ಲ. ಖುದ್ದು ಪ್ರಧಾನಿಗಳೇ ಮಹಾಕುಂಭಕ್ಕೆ ಸ್ವಾಗತ ಎಂದು ಟ್ವೀಟಿಸಿ ಕುಂಬಮೇಳ ನಡೆಸಲು ಅನುವು ಮಾಡಿಕೊಟ್ಟರು. ಸ್ವತಃ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಕುಂಭಸ್ನಾನ ಮಾಡಿದರು. ಪರಿಣಾಮ 2021ರ ಜನವರಿ 15ರವರೆಗೆ 94 ಸಾವಿರ ಕೋವಿಡ್‌ ಪ್ರಕರಣಗಳು ಈಗ ಲೆಕ್ಕ ಹಾಕಿ ಪ್ರಯೋಜನವಿಲ್ಲ. ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ 2000 ಸಾಧುಗಳಿಗೆ ಕೋವಿಡ್ ದೃಢವಾಯ್ತು. ಈಗ 39 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಅಲ್ಲಿ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೋವಿಡ್ ಹೆಚ್ಚಳಕ್ಕೆ ಕಾರಣ ರೈತ ಹೋರಾಟ. ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ರೈತರು ತಂಡೋಪ ತಂಡವಾಗಿ ವಾಪಾಸು ತಮ್ಮೂರಿಗೆ ತೆರಳುವಾಗ ಕೋವಿಡ್ ಗಿಫ್ಟ್ ಹಿಡಿದುಕೊಂಡೇ ಹೋದರು. ಪಂಜಾಬ್‌ನಲ್ಲಿ ಮಾರ್ಚ್‌ 1ರ ಹೊತ್ತಿಗೆ 1.80 ಲಕ್ಷ ಇದ್ದ ಪ್ರಕರಣಗಳು ಏಪ್ರಿಲ್ 26ರಂದು 3.45 ಲಕ್ಷ ಮುಟ್ಟಿದೆ.

Marjala manthana farmers protest

ಗುಜರಾತ್‌ ನ ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನೆಯಾಯ್ತು. ಹಿಂದೆಯೇ ಇಂಡೋ ಇಂಗ್ಲೆಂಡ್ ಟಿ-20 ಸರಣಿ ನಡೆಯಿತು. ಸಾವಿರಾರು ಜನ ಗ್ಯಾಲರಿಯಲ್ಲಿ ಸಾಮಾಜಿಕ ಅಂತರ ಪಾಲಿಸದೇ ತುಂಬಿ ತುಳುಕಿದರು. ನಂತರ ಕೆಲವು ಮ್ಯಾಚ್ ಗಳಿಗೆ ವೀಕ್ಷಕರನ್ನು ನಿರ್ಬಂಧಿಸಲಾಯಿತಾದರೂ ಆ ವೇಳೆಗೆ ಪರಿಸ್ಥಿತಿ ಕೈಮೀರಿತ್ತು. ಅದರ ಪರಿಣಾಮದಿಂದಲೇ ಕೋವಿಡ್ ಪೀಡಿತರ ಸಂಖ್ಯೆ 3 ಲಕ್ಷ ಮುಟ್ಟಿದೆ. ಮೋದಿಯವರ ತವರು ಗುಜರಾತ್ ನಲ್ಲಿ ಮಾರ್ಚ್ 1ರ ಹೊತ್ತಿಗೆ 2400 ಚಿಲ್ಲರೇ ಇದ್ದ ಸಕ್ರಿಯ ಪ್ರಕರಣಗಳ ಈಗ 1.26 ಲಕ್ಷದಷ್ಟಾಗಿದೆ.

ಇನ್ನು ಉತ್ತರ ಪ್ರದೇಶದ ವಿಚಾರಕ್ಕೆ ಬಂದರೆ ಇಲ್ಲೂ ಕೋವಿಡ್ ರುದ್ರತಾಂಡವಕ್ಕೆ ಕಾರಣ ಸಾರ್ವತ್ರಿಕ ಗ್ರಾಮ ಪಂಚಾಯತ್ ಚುನಾವಣೆ. ಚುನಾವಣಾ ಕರ್ತವ್ಯ ನಿರತ ಹಲವು ಶಿಕ್ಷಕರಿಗೆ ಸೋಂಕು ತಗುಲಿದ್ದ ಕಾರಣ ಚುನಾವಣೆ ಮುಂದೂಡುವಂತೆ ಶಿಕ್ಷಕರ ಸಂಘ ಮನವಿ ಮಾಡಿತ್ತು ಆದರೂ ಚುನಾವಣೆ ನಡೆಯಿತು. ಸದ್ಯ ಚುನಾವಣಾ ಆಯೋಗಕ್ಕೆ ಶಿಕ್ಷಕರ ಸಂಘ ನೀಡಿರುವ ಮಾಹಿತಿಯಂತೆ, ಚುನಾವಣಾ ಕರ್ತವ್ಯದಲ್ಲಿ ಹಾಜರಾಗಿದ್ದ ಸುಮಾರು 557 ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮೂರು ಹಂತದ ಗ್ರಾಮ ಪಂಚಾಯತ್ ಚುನಾವಣೆಯ ನಂತರ ಸಕ್ರಿಯ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

Covid 19 second wave

ಈ ಎಲ್ಲಾ ರಾಜ್ಯಗಳ ವಿದ್ಯಮಾನ ಗಮನಿಸಿ ನೋಡಿ. ಬಹುತೇಕ ಕಡೆ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಹಬ್ಬಲು ಕಾರಣ ಎಲೆಕ್ಷನ್. ಹೀನ ರಾಜಕೀಯ ನಮ್ಮೆಲ್ಲರ ಸಾಮೂಹಿಕ ಕಗ್ಗೊಲೆ ಮಾಡಿದೆ. ಹಾಗಿದ್ದರೇ ತಾತ್ಕಾಲಿಕವಾಗಿ ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದಿತ್ತು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಹೇಗೆ ವರ್ತಿಸಬೇಕಿತ್ತು? ನಿರೀಕ್ಷಿಸಿ ಮುಂದಿನ ಲೇಖನದಲ್ಲಿ ಇದರ ಬಗ್ಗೆ ಪಾಸಿಬಲ್ ಆಲ್ಟ್ರನೇಟಿವ್ ವಿಧಾನಗಳ ಬಗ್ಗೆ ಬರೆಯಬೇಕೆಂದಿದ್ದೇನೆ.

-ವಿಭಾ
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Tags: ಮಾರ್ಜಾಲ ಮಂಥನ ವಿಶ್ವಾಸ್ ಭಾರದ್ವಾಜ್ವಿಭಾ
ShareTweetSendShare
Join us on:

Related Posts

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

ಖಾಸಗಿ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ – ಸಾನಿಯಾ ವಿವಾಹ; ಫೋಟೋಗಳು ವೈರಲ್

ಖಾಸಗಿ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ – ಸಾನಿಯಾ ವಿವಾಹ; ಫೋಟೋಗಳು ವೈರಲ್

by Shwetha
March 6, 2026
0

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಎಂಬವರೊಂದಿಗೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ....

ಜಾಗತಿಕ ಶಾಂತಿಗೆ ಭಾರತದ ದೃಢ ಸಂದೇಶ: ಮಿಲಿಟರಿ ಸಂಘರ್ಷದಿಂದ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲ ಎಂದು ಗುಡುಗಿದ ಪ್ರಧಾನಿ ಮೋದಿ

ಜಾಗತಿಕ ಶಾಂತಿಗೆ ಭಾರತದ ದೃಢ ಸಂದೇಶ: ಮಿಲಿಟರಿ ಸಂಘರ್ಷದಿಂದ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲ ಎಂದು ಗುಡುಗಿದ ಪ್ರಧಾನಿ ಮೋದಿ

by Shwetha
March 6, 2026
0

ನವದೆಹಲಿ: ಪ್ರಸ್ತುತ ಜಗತ್ತು ಎದುರಿಸುತ್ತಿರುವ ತೀವ್ರ ಅಸ್ಥಿರತೆ ಮತ್ತು ಅನಿಶ್ಚಿತತೆಯ ನಡುವೆ, ಜಾಗತಿಕ ಶಾಂತಿಗಾಗಿ ಭಾರತ ತನ್ನ ಬದ್ಧತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್...

ರಾಜ್ಯ ಬಜೆಟ್‌ ನೇರ ಪ್ರಸಾರ: 230 ಬಸ್ ನಿಲ್ದಾಣಗಳಲ್ಲಿ ಟಿವಿಗಳಲ್ಲಿ ವೀಕ್ಷಣೆಗೆ ಅವಕಾಶ

ರಾಜ್ಯ ಬಜೆಟ್‌ ನೇರ ಪ್ರಸಾರ: 230 ಬಸ್ ನಿಲ್ದಾಣಗಳಲ್ಲಿ ಟಿವಿಗಳಲ್ಲಿ ವೀಕ್ಷಣೆಗೆ ಅವಕಾಶ

by Shwetha
March 6, 2026
0

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಇದು ಅವರ ರಾಜಕೀಯ ಜೀವನದಲ್ಲಿ 17ನೇ ಬಜೆಟ್ ಆಗಿರುವುದರಿಂದ ವಿಶೇಷ ಮಹತ್ವ ಪಡೆದಿದೆ. ಈ ಮೂಲಕ...

ದೇಶದ ಭದ್ರತೆ ಜೊತೆ ಮೋದಿ ರಾಜಿ: ಹಿಂದೂ ಮಹಾಸಾಗರದಲ್ಲಿ ಅಮೆರಿಕ ದಾಳಿ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

ದೇಶದ ಭದ್ರತೆ ಜೊತೆ ಮೋದಿ ರಾಜಿ: ಹಿಂದೂ ಮಹಾಸಾಗರದಲ್ಲಿ ಅಮೆರಿಕ ದಾಳಿ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

by Shwetha
March 6, 2026
0

ಶ್ರೀಲಂಕಾ ಸಮೀಪದ ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆಯ ಮೇಲೆ ಅಮೆರಿಕ ನಡೆಸಿದ ಭೀಕರ ದಾಳಿ ಹಾಗೂ ಹಡಗು ಮುಳುಗಡೆ ಪ್ರಕರಣವು ಇದೀಗ ಭಾರತದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram