ಪಂಚಭೂತಗಳಲ್ಲಿ ಲೀನವಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್…….
ತಮಿಳುನಾಡಿನ ಕೂನೂರು ಬಳಿ ನಡೆದಿದ್ದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.. ಅವರನ್ನ ಇಂದು ಸಂಪೂರ್ಣ ಸೇನಾ ಮತ್ತು ಸರ್ಕಾರಿ ಗೌರವಗಳೊಂದಿಗೆ ಭೋಪಾಲ್ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಶುಕ್ರವಾರ ತ್ರಿವರ್ಣ ಧ್ವಜಹೊದ್ದ ಪಾರ್ಥಿವ ಶರೀರವನ್ನು ಇಲ್ಲಿನ ಮಿಲಿಟರಿ ಆಸ್ಪತ್ರೆಯಿಂದ ಭೂಪಾಲ್ ನ ಬೈರಾಗರ್ ಪ್ರದೇಶದ ಸ್ಮಶಾನ ಭೂಮಿಗೆ ಸೇನಾ ಟ್ರಕ್ನಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಜನ ‘ಭಾರತ್ ಮಾತಾ ಕಿ ಜೈ’ ಮತ್ತು ‘ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಮರ್ ರಹೇ’ ಎಂಬ ಘೋಷಣೆಗಳನ್ನು ಕೂಗಿದರು.
ಪಾರ್ಥೀವ ಶರೀರ ಸ್ಮಶಾನ ಭೂಮಿ ತಲುಪುತ್ತಿದ್ದಂತೆ ರಕ್ಷಣಾ ಪಡೆ ಸಿಬ್ಬಂದಿಯಿಂದ ವಿಧ್ಯುಕ್ತ ಗೌರವ ವಂದನೆ ಸಲ್ಲಿಸಲಾಯಿತು,ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಂತರ ಹಿರಿಯ ಸೇನಾ ಅಧಿಕಾರಿಗಳು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ಪುಷ್ಪನಮನ ಸಲ್ಲಿಸಿದ್ದರು.
ಪುರೋಹಿತರು ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ, ಅವರ ಕಿರಿಯ ಸಹೋದರ, ವರುಣ್ ಸಿಂಗ್ ಅವರ ಮಗ ಚಿತೆಗೆ ಅಗ್ನಿ ಸ್ಪರ್ಶಮಾಡಿದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪತ್ನಿ ಮತ್ತು ಮಗಳು, ಅವರ ತಂದೆ (ನಿವೃತ್ತ), ಕರ್ನಲ್ ಕೆಪಿ ಸಿಂಗ್ ತಾಯಿ ಉಮಾ ಜೊತೆಗೆ ಇತರ ಬಂಧುಗಳು ಸಹ ಅವರಿಗೆ ಕಣ್ಣೀರಿನ ವಿದಾಯ ತಿಳಿಸಿದರು.