ಜೆಡಿಎಸ್ ನಲ್ಲಿ ಜಿ.ಟಿ.ದೇವೇಗೌಡ ಚಾಪ್ಟರ್ ಕ್ಲೋಸ್ : ಹೆಚ್ ಡಿಕೆ ( H D Kumaraswamy )
ಬಸವಕಲ್ಯಾಣ : ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿಷಯ ಜೆಡಿಎಸ್ ನಲ್ಲಿ ಕ್ಲೋಸ್ಡ್ ಚಾಪ್ಟರ್ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಜಿಟಿದೇವೇಗೌಡ ವಿಚಾರವಾಗಿ ಪ್ರತಿಕ್ರಿಯಿಸಿದರು. ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿಷಯ ಜೆಡಿಎಸ್ ನಲ್ಲಿ ಕ್ಲೋಸ್ಡ್ ಚಾಪ್ಟರ್. ಸಾ.ರಾ.ಮಹೇಶ್ ನನಗಿಂತಲೂ ಭಾವನಾ ಜೀವಿ ಹಾಗಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದನ್ನೆಲ್ಲಾ ಮರೆತು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಾ.ರಾ.ಮಹೇಶ್ ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ರು.
ಮೈಮುಲ್ ಚುನಾವಣೆ ಬಗ್ಗೆ ಮಾತನಾಡಿ, ಮೈಮುಲ್ ಚುನಾವಣೆಗೂ ಸಾರ್ವತ್ರಿಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. 500 ಓಟ್ ಗಳಿರುವ ಆ ಚುನಾವಣೆ ಹೇಗೆ ನಡೆಯುತ್ತೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಜಿ.ಟಿ.ದೇವೇಗೌಡರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮತದಾರರು ಕ್ರಮ ಏನು ಎಂದು ತೋರಿಸುತ್ತಾರೆ ಎಂದು ಹೇಳಿದ್ರು.