ಬಿಜೆಪಿ ದುಡ್ಡು ಹೊಡೆಯುವ ಬಗ್ಗೆ ಮಾತ್ರ ಚಿಂತನೆ ಮಾಡುತ್ತೆ: ಹೆಚ್ ಡಿಕೆ
ಮಂಡ್ಯ : ಬಿಜೆಪಿ ಸರ್ಕಾರಕ್ಕೆ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಬರಿ ದುಡ್ಡು ಹೊಡೆಯುವ ಕಾರ್ಯಕ್ರಮದ ಬಗ್ಗೆ ಮಾತ್ರ ಬಿಜೆಪಿ ಚಿಂತನೆ ಮಾಡುತ್ತೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಮಂಡ್ಯ ಜಿಲ್ಲೆಯ ಅಣ್ಣೂರು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕಾವೇರಿ ನಿಗಮದಲ್ಲಿ ನೀರಾವರಿ ಇಲಾಖೆಗೆ ಕೊಟ್ಟ ಯೋಜನೆಗಳನ್ನು ಈಗಿನ ಸರ್ಕಾರದವರು ವಾಪಸ್ ಪಡೆದಿದ್ದಾರೆ. ಸುಮಾರು 6 ಸಾವಿರ ಕೋಟಿ ಯೋಜನೆಯ ಕಾಮಗಾರಿ ನೀಡಲಾಗಿತ್ತು. ಆದ್ರೆ ಇದನ್ನ ವಾಪಸ್ ಪಡೆಯಲಾಗಿದೆ. ಇದೆಲ್ಲಾ ಅವರ ದ್ವೇಷದ ರಾಜಕೀಯ ಅಷ್ಟೇ. ಅವರು ದುಡ್ಡು ಹೊಡೆಯುವ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಅಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಗ್ರಾಮ ವಾಸ್ತವ್ಯ ಒಳ್ಳೆಯ ಕಾನ್ಸೆಪ್ಟ್. ಇದರ ಬಗ್ಗೆ ರಾಜಕೀಯವಾಗಿ ಟೀಕೆ ಮಾಡಲ್ಲ. ಮಾಡಿರುವ ಉದ್ದೇಶ ಒಳ್ಳೆಯದಾಗಿದ್ರೆ ಸರಿ. ಆದ್ರೆ ಅಧಿಕಾರಿಗಳಿಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸರ್ಕಾರದ ಆರ್ಥಿಕ ಸಹಕಾರ ಇಲ್ಲದಿದ್ದರೆ ಅಧಿಕಾರಿಗಳು ಏನು ಮಾಡೋಕಾಗುತ್ತೆ ಎಂದು ಪ್ರಶ್ನೆ ಮಾಡಿದರು.