ಬಾಗಲಕೋಟೆ : ಮಾನಸಿಕ ಅಸ್ವಸ್ಥನಿಗೆ ಕಟಿಂಗ್ ಹಾಗೂ ಸೇವ್ ಮಾಡುವ ಮೂಲಕ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಮುಖ್ಯಾಧಿಕಾರಿ ರವೀಂದ್ರ ಅಂಗಡಿ, ಸಮುದಾಯ ಸಂಘಟನಾಧಿಕಾರಿ ಸಿ.ಎಸ್.ಮಠಪತಿ ಹಾಗೂ ಸಿಬ್ಬಂದಿಯಿಂದ ಮಾನಸಿಕ ಅಸ್ವಸ್ಥನಿಗೆ ಕ್ಷೌರ ಸೇವೆ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಎಲ್ಲಿಯೂ ಕಟಿಂಗ್ ಶಾಪ್ ತೆರೆದಿರಲಿಲ್ಲ. ಕೊಳೆಯಾದ ಬಟ್ಟೆ, ಕೂದಲು ಬಿಟ್ಟುಕೊಂಡು ತಿರುಗಾಡುತ್ತಿದ್ದ
ಮಾನಸಿಕ ಅಸ್ವಸ್ಥನನ್ನು ಕರೆತಂದು ಪುರಸಭೆ ಸಿಬ್ಬಂದಿ ಆತನಿಗೆ ನೀಟಾಗಿ ಕ್ಷೌರ, ದಾಡಿ ಮಾಡಿ ಹೊಸಬಟ್ಟೆ ಕೊಡೆಸಿದರು. ಹೊಸಬಟ್ಟೆಯಲ್ಲಿ ಮಾನಸಿಕ ಅಸ್ವಸ್ಥ ಲಕಲಕ ಕಾಣಿಸುತ್ತಿದ್ದಾನೆ. ಪುರಸಭೆ ಸಿಬ್ಬಂದಿಯ ಮಾನವಿಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








