ರಾಜ್ಯದ ಮಾಜಿ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ನಿಧನ ಹೊಂದಿದ್ದಾರೆ. ರಾಜ್ಯದಲ್ಲಿ 2009 ರಿಂದ 2014 ರವರೆಗೆ ರಾಜ್ಯಪಾಲರಾಗಿ ಸಮರ್ಥ ಆಡಳಿತ ನಡೆಸಿದ್ದರು. ಕಾನೂನಿನಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಕೇಂದ್ರ ಸರ್ಕಾರದ ಕಾನೂನು ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಕೇರಳ ರಾಜ್ಯದ ಹೆಚ್ಚುವರಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1973 ಮೇ 17 ರಂದು ಹರಿಯಾಣ ರಾಜ್ಯದ ರೋಹ್ಟಕ್ ನ ಗ್ರಹಿ ಸಂಪ್ಲಾದಲ್ಲಿ ಜನಿಸಿದ ಇವರು ರಾಜಕಾರಣದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದರು.
ಹಂಸರಾಜ್ ಭಾರಧ್ವಜ್ ರಾಜಕೀಯ ಹಾದಿ

ಹಂಸರಾಜ್ ಭಾರಧ್ವಜ್ ಅವರು 1982 ಎಪ್ರಿಲ್ ತಿಂಗಳಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ರಾಜ್ಯಸಭೆ ಪ್ರವೇಶ ಮಾಡಿದರು. 1984ರಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯಿಕ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು 1988 ಎಪ್ರಿಲ್ ನಲ್ಲಿ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದರು. ಈ ವೇಳೆ ಬೇರೆ ಬೇರೆ ಇಲಾಖೆಗಳ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದರು..1996 ಮತ್ತು 2004 ರಲ್ಲಿ ರಾಜ್ಯಸಭೆಗೆ ಮತ್ತೊಮ್ಮೆ ಆಯ್ಕೆಯಾಗಿದ್ದರು.2004 ರಲ್ಲಿ ಮನಮೋಹನ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಕೇಂದ್ರ ಕಾನೂನು ಮಂತ್ರಿಯಾಗಿ ಕೆಲಸ ಮಾಡಿದ್ದರು. ಈ ವೇಳೆಯಲ್ಲಿ ಗ್ರಾಮ ನ್ಯಾಯಲಯ ಎಂಬ ಹೊಸ ಪರಿಕಲ್ಪನೆ ಪರಿಚಯಿಸಿದ್ದರು. ಯಡಿಯೂರಪ್ಪ ನವರು 2009 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ರಾಜಕೀಯದಲ್ಲಿ ಗೊಂದಲ ಉಂಟಾಗಿತ್ತು. ರಾಜಕೀಯ ಅಸ್ಥಿರತೆಯ ಸಮಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಶಿಫಾರಸ್ಸು ಮಾಡಿದ್ದರು. ಆದರೆ ಇದಕ್ಕೆ ಅಂದಿನ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಆದರೆ ಯಡಿಯೂರಪ್ಪನವರ ವಿರುದ್ದ ಕೇಳಿ ಬಂದಿದ್ದ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ವಿಚಾರಣೆ ಮಾಡಲು ಒಪ್ಪಿಗೆ ನೀಡಿದ್ದರು.
ಅಗಲಿದ ಗ್ರಾಮ ನ್ಯಾಯಲಯ ಪರಿಕಲ್ಪನೆಯ ರೂವಾರಿ

ಹಂಸರಾಜ್ ಭಾರಧ್ವಜ್ ಕೇಂದ್ರ ಮಂತ್ರಿಯಾಗಿ, ರಾಜ್ಯಪಾಲರಾಗಿ ಕಾರ್ಯನಿರ್ವಾಹಿಸಿ,ಸಾಕಷ್ಟು ಬದ್ದತೆ ಯಿಂದ ನಡೆದುಕೊಂಡಿದ್ದರು.ಗ್ರಾಮ ನ್ಯಾಯಲಯ ಎಂಬ ಹೊಸ ಪರಿಕಲ್ಪನೆ ಪರಿಚಯಿಸಿದ್ದರು. ಕಾಂಗ್ರೆಸ್ ನ ಹಿರಿಯ ನಾಯಕ ಹಂಸರಾಜ್ ಭಾರಧ್ವಜ್ ಅವರು ಮೂತ್ರಕೋಶ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆಗಾಗಿ ನವದೆಹಲಿಯ ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಂಸರಾಜ್ ಭಾರಧ್ವಜ್ ತಮ್ಮ 83 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ








