ADVERTISEMENT
Saturday, December 6, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭವಿಷ್ಯ ಸುಂದರಗೊಳಿಸುವ ಆಶಾಜ್ಯೋತಿಯೊಂದಿಗೆ ಬಂದಿದೆ ಮತ್ತೊಮ್ಮೆ ದೀಪಾವಳಿ…

Shwetha by Shwetha
November 14, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv deepavali 2020
Share on FacebookShare on TwitterShare on WhatsappShare on Telegram

ಭವಿಷ್ಯ ಸುಂದರಗೊಳಿಸುವ ಆಶಾಜ್ಯೋತಿಯೊಂದಿಗೆ ಬಂದಿದೆ  ಮತ್ತೊಮ್ಮೆ ದೀಪಾವಳಿ… Saakshatv deepavali 2020

ಮಂಗಳೂರು, ನವೆಂಬರ್ 14: ದೀಪದಿಂದ ದೀಪವ ಹಚ್ಚಬೇಕು ಮಾನವ…
ಪ್ರೀತಿಯಿಂದ ಪ್ರೀತಿ ಹಂಚಿರೋ….
ಮಣ್ಣಿನಿಂದ ಹಣತೆಯಾದರೇ…
ಬೀಜದಿಂದ ಎಣ್ಣೆಯಾಯಿತು….
ಅರಳೆಯಿಂದ ಬತ್ತಿಯಾದರೇ….
ಸುಡುವ ಬೆಂಕಿ ಜ್ಯೋತಿಯಾಯಿತು… Saakshatv deepavali 2020

Related posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

December 5, 2025
ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025

ದೀಪಗಳ ಹಬ್ಬ ದೀಪಾವಳಿ ಮತ್ತೊಮ್ಮೆ ಬಂದಿದೆ… ದೈನಂದಿನ ಜೀವನದ ಒತ್ತಡ ಜಂಜಾಟಗಳಿಂದ ಬಸವಳಿದಿದ್ದ ನೀರಸ ಬದುಕನ್ನು ಸುಂದರಗೊಳಿಸಲು ಮನೆ ಮನಗಳಲ್ಲಿ ಬೆಳಕಿನ ಸಂಭ್ರಮವನ್ನು ಹೊತ್ತು ತಂದಿದೆ.

Saakshatv deepavali

ದೀಪಾವಳಿ ಎಂದರೆ ಅದು ಕೇವಲ ಹಬ್ಬವಷ್ಟೇ ಅಲ್ಲ.. ಅದು ನೆನಪಿನ ಮೆರವಣಿಗೆ…
ನಮ್ಮ ಸಂಸ್ಕೃತಿ ಸಂಪ್ರದಾಯದ ಪ್ರತೀಕವಾಗಿರುವ ದೀಪಾವಳಿ ಎಂದರೆ ನೆನಪಾಗುವುದು ಬ್ರಾಹ್ಮಿಮುಹೂರ್ತದಲ್ಲಿನ ಎಣ್ಣೆ ಸ್ನಾನದ ಸಂಭ್ರಮ.. ನೆಲಕ್ಕೂ ಮೈಯಿಗೂ ಎಣ್ಣೆಯ ಅಭಿಷೇಕ… ಹೊಸ ಬಟ್ಟೆ ತೊಟ್ಟು ಸಾಲು ಸಾಲು ಹಣತೆಗಳನ್ನು ಬೆಳಗುವ, ಪಟಾಕಿ ಹಚ್ಚುವ ಸಂಭ್ರಮ ಸಡಗರ…

ದೀಪಾವಳಿಯ ದೀಪ ಎಂದರೆ ಅದು ಬರೀ ಬೆಳಕಲ್ಲ.. ಹೊಸತನದ ದ್ಯೋತಕ…
ಬದುಕಲ್ಲಿನ ಕತ್ತಲು ಕರಗಿ ಬೆಳಕು ಮೂಡಬಹುದೆಂಬ ಭರವಸೆ.. ಏಕತಾನತೆಯಿಂದ ಮಡುಗಟ್ಟಿದ ಬದುಕಿಗೆ ಚೈತನ್ಯವನ್ನು ನೀಡುವ ಬೆಳಕು…

ತುಳುನಾಡಿನಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗುವುದು ನೀರು ತುಂಬುವ ಹಬ್ಬದಿಂದ.. ಹಿಂದಿನ ದಿನ ನೀರು ಕಾಯಿಸುವ ಹಂಡೆಯನ್ನು ಶುಚಿಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಿಸಿಟ್ಟು ಪೂಜಿಸಿ, ಮರುದಿನ ಇನ್ನೂ ಸೂರ್ಯ ಮೂಡುವ ಮೊದಲೇ ಮಾಡುವ ಎಣ್ಣೆ ಸ್ನಾನದಿಂದ…
ದೀಪಾವಳಿ ಹಬ್ಬದ ಜೊತೆಗೆ ಬಾಲ್ಯದ ನೆನಪಿನ ಬುತ್ತಿಯೂ ಬಿಚ್ಚಿಕೊಳ್ಳುತ್ತದೆ… ಹಬ್ಬಕ್ಕಾಗಿ ದೂರದೂರಿನಲ್ಲಿರುವ ಕುಟುಂಬ ಸದಸ್ಯರ ಆಗಮನ.. ಮನೆ ತುಂಬಾ ಜನ.. ಬೆಳಗಿನ ಜಾವ 4 ಗಂಟೆಗೆ ಇನ್ನೂ ನಿದ್ದೆಯ ಮಡಿಲಿನಲ್ಲಿ ಬೆಚ್ಚಗೆ ಮಲಗಿರುತ್ತಿದ್ದ ನಮ್ಮನೆಲ್ಲಾ ಎಣ್ಣೆ ಸ್ನಾನಕ್ಕೆ ಎಬ್ಬಿಸುತ್ತಿದ್ದ ಅಜ್ಜನ ನೆನಪು ಸದಾ ಹಸಿರು…

ಎಣ್ಣೆ ಸ್ನಾನದ ಬಳಿಕ ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆದು ಸಿಹಿ ಅವಲಕ್ಕಿ ಪ್ರಸಾದ ಜೊತೆಗೆ ಬಿಸಿ ಬಿಸಿ ಉದ್ದಿನ ದೋಸೆಯ ಉಪಹಾರ.. ಸಂಜೆಯಾಗುತ್ತಿದ್ದಂತೆ ಗೂಡು ದೀಪ ಏರಿಸಿ ಸಾಲು ಸಾಲು ಹಣತೆಗಳನ್ನು ಬೆಳಗುವ ಸಂಭ್ರಮ. ಬಳಿಕ ಸುರು ಸುರು ಕಡ್ಡಿ, ಮಾಲೆ ಪಟಾಕಿ, ಮಳೆ ದುರ್ಸುಗಳ ಅಬ್ಬರ..

Saakshatv deepavali 2020

ಎರಡನೇ ದಿನ ಅಮಾವಾಸ್ಯೆ. ಧನ ದೇವತೆ ಲಕ್ಷ್ಮೀಯನ್ನು ಇದೇ ಸಮಯದಲ್ಲಿ ಪೂಜಿಸಲಾಗುತ್ತದೆ. ಅಂಗಡಿ, ಉದ್ಯಮ, ವರ್ತಕರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡಿ, ಅಂಗಡಿ ಪೂಜೆ ನೆರವೇರಿಸುತ್ತಾರೆ. ‌
ತುಳುನಾಡಿನಲ್ಲಿ ಹಿರಿಯರಿಗೆ ದೇವರ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಕುಟುಂಬದಲ್ಲಿ ದೈವಾಧೀನರಾದ ಹಿರಿಯರನ್ನು ನೆನಪಿಸಿಕೊಂಡು ಈ ದಿನ ಹಿರಿಯರ ನೆನಪಿನಲ್ಲಿ ಕೆಲವು ವಿಧಿಗಳನ್ನು (ಪರ್ಬಗು ಬಳಸುನ) ಆಚರಿಸಲಾಗುತ್ತದೆ.
ಮರುದಿನ ಬಲಿಪಾಡ್ಯಮಿ.

ಅಂದು ವಿಶೇಷವಾಗಿ ಬಲೀಯೇಂದ್ರನನ್ನು ಕರೆಯಲಾಗುತ್ತದೆ ಹಾಗೂ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಬೆಳಗ್ಗೆ ಮನೆಯ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಕೃಷಿ ಉಪಕರಣಗಳನ್ನು ಶುಚಿಗೊಳಿಸಿ ಜೋಡಿಸಲಾಗುತ್ತದೆ. ಬಳಿಕ ಅಂಗಳ ಅಥವಾ ಗದ್ದೆ ಬದಿಯಲ್ಲಿ ಪಾಲೆ (ಹಾಲೆ) ಮರದ ಕಂಬವನ್ನು ನೆಟ್ಟು, ಕಂಬದ ತುದಿಯ ಕವಲಿಗೆ ಕೋಲು ಕಟ್ಟಿ ಅಲಂಕರಿಸಲಾಗುತ್ತದೆ. ಬಳಿಕ ಮೇಲೊಂದು ಹಣತೆ ಹಚ್ಚಿ, ಬಲೀಂದ್ರ (ಬಲೀಂದ್ರ ಮರ)ವನ್ನು ಪ್ರತಿಷ್ಠಾಪಿಸಲಾಗುತ್ತದೆ.

Saakshatv deepavali balipadyami

ಕತ್ತಲೆಯಾಗುತ್ತಿದ್ದಂತೆಯೇ ಮನೆಯ ಅಂಗಳದ ಸುತ್ತಲೂ ದೀಪವನ್ನು ಬೆಳಗಿಸಲಾಗುತ್ತದೆ. ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಜಾನುವಾರುಗಳಿಗೆ ದೀಪ ಬೆಳಗಿ ಹಬ್ಬದ ಬೆಳಕು ನೋಡು ಎಂದು ಪ್ರಾರ್ಥಿಸಿ, ಬಗೆ ಬಗೆಯ ಖಾದ್ಯಗಳನ್ನು ತಿನ್ನಿಸಲಾಗುತ್ತದೆ.
ನಂತರ ಎಲ್ಲರೂ ಬಲೀಂದ್ರ ಮರದ ಬಳಿ ಸೇರಿ ಆರತಿ ಬೆಳಗಿ, ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ‘ಬಲೀಂದ್ರ ಬಲೀಂದ್ರ ಕೂ…ಕೂ…’ ಎಂದು ಎಲ್ಲರೂ ಸೇರಿ ಮೂರು ಬಾರಿ ಕೂಗುತ್ತಾರೆ. ಇದು ಬಲೀಂದ್ರನನ್ನು ಭೂಮಿಗೆ ಸ್ವಾಗತಿಸುವ ಕ್ರಮ ಎಂದು ಇಲ್ಲಿನ ‌ಹಿರಿಯರ ನಂಬಿಕೆ.
ಹಿಂದೆ ತುಳುನಾಡನ್ನು ಆಳಿದ ಬಲೀಂದ್ರ ಎಂಬ ಸತ್ಯಸಂಧನೂ ಧರ್ಮದುರಂಧರನೂ ಆಗಿದ್ದ ಅಸುರ ಚಕ್ರವರ್ತಿ ನಾಡಿನ ಜನರ ಯೋಗಕ್ಷೇಮ, ಮಳೆ ಬೆಳೆ, ಜಾನುವಾರುಗಳನ್ನು ನೋಡಿಕೊಂಡು ಹೋಗಲು ಪಾತಾಳದಿಂದ ಬರುತ್ತಾನೆ ಎಂಬುವುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ದೀಪಾವಳಿಯಂದು ತನ್ನ ನಾಡನ್ನು ನೋಡಲು ಬರುವ ಬಲಿ ಚಕ್ರವರ್ತಿಗೆ ದೀಪವನ್ನು ಬೆಳಗಿ ಈ ರೀತಿಯಲ್ಲಿ ತುಳುನಾಡಿನ ಜನತೆ ಸ್ವಾಗತ ಕೋರುತ್ತಾರೆ.

ಒಟ್ಟಿನಲ್ಲಿ ದೀಪಾವಳಿಯೆಂದರೆ, ತುಳುವರ ಬದುಕಿನ ಹೊಸ ಪುಟವನ್ನು ತಿರುವಿ ಹಾಕುವ, ಪ್ರೀತಿ ಸ್ನೇಹ ಸಹಬಾಳ್ವೆ ಮಮಕಾರ ಹಿರಿಯರ ಮೇಲಿನ ಗೌರವ ಮಿಳಿತವಾಗಿರುವ, ಎಲ್ಲರೂ ಒಟ್ಟಾಗಿ ಖುಷಿಯಿಂದ ಅರ್ಥಪೂರ್ಣವಾಗಿ ಸಂಭ್ರಮಿಸುವ ಆಚರಣೆ.

ಪುರಾಣದಲ್ಲಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ಶ್ರೀ ರಾಮನನ್ನು ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ದೀಪವನ್ನು ಹಚ್ಚಿ ಸ್ವಾಗತಿಸಿದರು. ಆ ಸಂಭ್ರಮವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಎಂದು ಒಂದು ಪುರಾಣದ ಕಥೆ ಹೇಳುತ್ತದೆ. ‌

Saakshatv deepavali

ಶ್ರೀಕೃಷ್ಣ, ನರಕಾಸುರನನ್ನು ವಧಿಸಿ, ಆತನ ಸೆರೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಿಡುಗಡೆ ಮಾಡುತ್ತಾನೆ.
ಆ ದಿನವನ್ನು ನರಕ ಚತುರ್ದಶಿ ಎಂದು ಆಚರಣೆ ಮಾಡಲಾಗುತ್ತದೆ ಎಂದು ಪುರಾಣದ ಮತ್ತೊಂದು ಕಥೆ ಹೇಳಿದರೆ, ಅಮವಾಸ್ಯೆಯ ದಿನ ಧನ ಹಾಗೂ ಭಾಗ್ಯದೇವತೆಯಾದ ಲಕ್ಷ್ಮಿ ದೇವಿಯು ಭೂಮಿಗೆ ಆಗಮಿಸುತ್ತಾಳೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಹಾಗಾಗಿ ಹಣತೆ ದೀಪ, ಗೂಡುದೀಪಗಳಿಂದ ಮನೆ ಬೆಳಗಿಸಲಾಗುತ್ತದೆ ಎಂದು ಮಗದೊಂದು ಕಥೆ ತಿಳಿಸುತ್ತದೆ.
ವಿಷ್ಣುಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಬಲಿಪಾಡ್ಯದಂದು ಎತ್ತಿದ್ದು, ಹಾಗಾಗಿ ಅಂದು ಗೋಪೂಜೆ ಹಾಗೂ ಗೋವರ್ಧನನ ಪೂಜೆ ಮಾಡಲಾಗುತ್ತದೆ.

Saakshatv deepavali 2020

ದೀಪಾವಳಿ ಹಬ್ಬ ಮನೆ ಮನೆಗಳನ್ನು ಬೆಳಗಲಿ. ಕತ್ತಲಿನಿಂದ ಬೆಳಕಿನೆಡೆಗೆ.. ಅಜ್ಞಾನದಿಂದ ಸುಜ್ಞಾನದೆಡೆಗೆ ದೀಪಾವಳಿಯ ಬೆಳಕು ಪಸರಿಸಲಿ…ಕೊರೋನಾ ಮುಕ್ತ ವಿಶ್ವವಾಗಲಿ ಎಂಬ ಆಶಯದೊಂದಿಗೆ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಿಸೋಣ..
ಓದುಗರಿಗೆಲ್ಲಾ ಸಾಕ್ಷಾಟಿವಿ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು…

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1325123272652910606?s=19

Tags: Deepavalideepavali festivalSaakshatv deepavali 2020
ShareTweetSendShare
Join us on:

Related Posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

by admin
December 5, 2025
0

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram