Haveri | ಪಂಚಮಸಾಲಿಗೆ 2ಎ ಮೀಸಲಾತಿ : ಸಿಎಂ ಮನೆ ಎದುರು ಹಕ್ಕೊತ್ತಾಯ
ಹಾವೇರಿ : ಇದೇ ಸೆಪ್ಟೆಂಬರ್ 20 ರಂದು ಸಿಎಂ ನಿವಾಸದ ಎದುರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹಕ್ಕೋತ್ತಾಯ ಪ್ರತಿಭಟನೆ ಮಾಡುವುದಾಗಿ ಜಯಮೃತ್ಯಂಜಯ ಸ್ವಾಮೀಜಿ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದೆ ಸೆಪ್ಟೆಂಬರ್ 20 ರಂದು ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುತ್ತೇವೆ.
ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು.
ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಪ್ರತಿಭಟನೆಯಲ್ಲಿ ಒಂದು ಲಕ್ಷ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ.
ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ.
ಯಾವುದೇ ಕಾರಣಕ್ಕೆ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡ ಹೋರಾಟದ ಕಾಲ ಹರಣ ಮಾಡಿದ್ದಾರೆ.

ಸಿಎಂ ಅವರು ಪದೇ ಪದೇ ಮಾತುಕೊಟ್ಟು ತಪ್ಪಿದ್ದಾರೆ. ಸಮಾಜದ ಬಂಧುಗಳಿಗೆ ಮಾತು ಕೊಟ್ಟಂತೆ ನಾವು, ಸತ್ಯಾಗ್ರಹದ ಹಾದಿ ತುಳಿದಿದ್ದೇವೆ.
ಪಂಚಮಸಾಲಿ ಸಮಾಜದ ಹೋರಾಟ, ದೇಶಾದ್ಯಂತ ಗಮನ ಸೆಳೆದಿದೆ. ಪಂಚಮಸಾಲಿ ಸಾಲಿ ಸಮಾಜಕ್ಕೆ ಸಿಎಂ ಅವರು ದ್ರೋಹ ಮಾಡಿದ್ದಾರೆ. ಅವರ ಮೇಲಿನ ವಿಶ್ವಾಸಕ್ಕೆ, ನಂಬಿಕೆಗೆ ಸಿಎಂ ಆಘಾತ ಮಾಡಿದ್ದಾರೆ.
ಇಂತಹ ಐತಿಹಾಸಿಕ ಹೋರಾಟಕ್ಕೆ ನಮ್ಮ ಮುಖ್ಯಮಂತ್ರಿಗಳು ಕರಗದಿದ್ದರೇ, ಅಕ್ಟೋಬರ್ 23 ಮತ್ತು 25 ರಣದಯ ಲಕ್ಷ ಸಮಾಜದ ಬಂಧುಗಳು ವಿಧಾನಸಭಾ ಮುತ್ತಿಗೆ ಹಾಕುತ್ತೇವೆ. ಅಂದು ಸಮಾಜದ ರಾಜಕೀಯ ನಿರ್ಣಯ ಕೈಗೊಳ್ಳಿದೆ ಎಂದು ಹೇಳಿದರು.