Heavy rain in yadgir | ಶಾಲಾ ಕಟ್ಟಡ ಸೋರಿಕೆ : ಆತಂಕದಲ್ಲಿ ಮಕ್ಕಳು
ಯಾದಗಿರಿ : ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ.
ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಬದುಕು ಬರ್ಬಾದ್ ಆಗಿದೆ.
ಈ ನಡುವೆ ರೈತರು ಕೂಡ ಬೆಳೆ ಕಳೆದುಕೊಂಡು ಆತಂಕದಲ್ಲಿದ್ದಾರೆ.
ಇತ್ತ ಮಳೆರಾಯನ ಆರ್ಭಟಕ್ಕೆ ಶಾಲಾ ಮಕ್ಕಳು ಕೂಡ ಪರದಾಡುವ ಸ್ಥಿತಿಗೆ ಬಂದಿದೆ.
![Heavy rain in Yadgir School building leak: Children in worry saaksha tv](http://saakshatv.com/wp-content/uploads/2022/07/yadagiri-300x186.jpg)
ನಿರಂತರ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕದರಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಕಷ್ಟಕ್ಕೀಡಾಗಿದ್ದಾರೆ.
ಭಾರಿ ವರ್ಷಧಾರೆಯಿಂದಾಗಿ ಕದರಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ಸೋರುತ್ತಿದೆ.
ಇದರಿಂದಾಗಿ ಮಕ್ಕಳಿಗೆ ಶಾಲಾ ಆವರಣದಲ್ಲಿ ತರಗತಿಗಳು ನಡೆಯುತ್ತಿವೆ.
ಒಂದೇ ಕೊಣೆಯಲ್ಲಿ 1 ರಿಂದ 5 ತರಗತಿ ನಡೆಸಲಾಗುತಿತ್ತು.
ಶಾಲೆ ಕೊಣೆ ಸೋರಿಕೆಯಿಂದಾಗಿ ಬಯಲು ಪ್ರದೇಶದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಅನಿವಾರ್ಯವಾಗಿದೆ.
ಹೀಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.