ಬೆಂಗಳೂರು : ಡಿ.ಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬೆಳಿಗ್ಗೆ 11.30ಕ್ಕೆ ಬರೋಬ್ಬರಿ 10 ಲಕ್ಷ ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ಕಟ್ಟಪ್ಪ ಶಿವಕುಮಾರ್ ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
ಇಂದು ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. ಇನ್ನು ಕಾರ್ಯಕ್ರಮದ ವಿವರಗಳನ್ನು ನೋಡುವುದಾದ್ರೆ..
ಬೆಳಿಗ್ಗೆ 10.45 ಗಂಟೆಗೆ ಸೇವಾದಳ ತಂಡದಿಂದ ಗೌರವ ರಕ್ಷೆ ಕಾರ್ಯಕ್ರಮ
ಬೆಳಿಗ್ಗೆ 11.00 ಗಂಟೆಗೆ ಸಾಮೂಹಿಕ ವಂದೇ ಮಾತರಂ ಗೀತೆ ಹಾಡುವುದು
ಬೆಳಿಗ್ಗೆ 11.03 ಗಂಟೆಗೆ ಸ್ವಾಗತ ಭಾಷಣ, 11.07ಕ್ಕೆ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಂದ ಕಾರ್ಯಕ್ರಮ ಉದ್ಘಾಟನೆ.
ಬೆಳಿಗ್ಗೆ 11.10ಕ್ಕೆ ವಿವಿಧ ತಂಡಗಳಿಂದ ಜ್ಯೋತಿ ಬೆಳಗುವ ಕಾರ್ಯಕ್ರಮ
11.15ಕ್ಕೆ ಹಿರಿಯ ಮುಖಂಡರಿಂದ ಸಂವಿಧಾನ ಪೀಠಿಕೆಯ ಪಠಣ, 11.20ಕ್ಕೆ ಕೆ.ಸಿ. ವೇಣುಗೋಪಾಲ್ ಅವರಿಂದ ಉದ್ಘಾಟನಾ ಭಾಷಣ.
ಬೆಳಿಗ್ಗೆ 11.30ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಸಾಮೂಹಿಕ ಪ್ರತಿಜ್ಞೆ. ಬಳಿಕ 11.35ಕ್ಕೆ ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಹಸ್ತಾಂತರ ನಡೆಯುವುದು.
ಇದಾದ ಬಳಿಕ 11.45ಕ್ಕೆ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಷಣ ಮಾಡಲಿದ್ದಾರೆ.
11.55 ರಿಂದ ಮಧ್ಯಾಹ್ನ 12.25ಯವರೆಗೆ ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಹಾಗೂ ಎಸ್.ಆರ್. ಪಾಟೀಲ್ ಭಾಷಣ.
ಹಿರಿಯ ನಾಯಕರ ಭಾಷಣದ ಬಳಿಕ, ಮಧ್ಯಾಹ್ನ 12.25ಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಅಧ್ಯಕ್ಷೀಯ ಭಾಷಣ. ಮಧ್ಯಾಹ್ನ 12.55ಕ್ಕೆ ವಂದನಾರ್ಪಣೆ ಮಾಡಿ, 12.58ಕ್ಕೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.