Himachal Pradesh Election Result over all updates…
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ 2022 ನೇ ಸಾಲಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಬಹುತೇಕ ಹೊರಬಿದ್ದಿದೆ..
ಬೆಳಿಗ್ಗೆ ಇಂದಲೇ ಮತ ಎಣಿಕೆ ನಡೆಯುತ್ತಿತ್ತು.. ಮಧ್ಯಾಹ್ನ 12 ಗಂಟೆಯ ನಂತರವೇ ಕಾಂಗ್ರೆಸ್ ಬಹುತೇಕ ಮುನ್ನಡೆ ಸಾಧಿಸಿತ್ತು.. ಹೀಗಾಗಿ ಸ್ಪಷ್ಟ ಬಹುಮತ ಕಾಂಗ್ರೆಸ್ ಸಿಕ್ಕಿದ್ದು , ಮಧ್ಯಾಹ್ನದಿಂದಲೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು , ಕಾರ್ಯಕರ್ತರ ಸಂಭ್ರಾಮಾಚರಣೆ ನಡೆಯುತ್ತಿದೆ..
ಬಿಜೆಪಿ – 26
ಕಾಂಗ್ರೆಸ್ – 39
ಆಪ್ -0
ಇತರೇ – 3
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮ್ಯಾಜಿಕ್ ನಂಬರ್ ಈಗಾಗಲೇ ಸಿಕ್ಕಾಗಿದೆ.. ಸ್ಪಷ್ಟ ಬಹುಮತ ಬರುತ್ತಿದ್ದಂತೆ ಶಾಸಕರನ್ನು ಛತ್ತೀಸ್ ಗಢಕ್ಕೆ ಶಿಫ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂಬ ಚರ್ಚೆಗಳೂ ನಡೆಯುತ್ತಿದೆ..
ಕಾಂಗ್ರೆಸ್ 40, ಬಿಜೆಪಿ 25, ಇತರರು 3 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ. 12 ಗಂಟೆಯ ನಂತರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿದ್ದು 35 ಸ್ಥಾನಗಳು ಸ್ಪಷ್ಟ ಬಹುಮತ..
ಮತ್ತೊಂದೆಡೆ ಆಪರೇಷನ್ ಕಮಲದ ಭೀತಿಯೂ ಕಾಂಗ್ರೆಸ್ ಗೆ ಇರಬಹುದು.. ಹೀಗಾಗಿ ಕಾಂಗ್ರೆಸ್ ಅಧಿಕಾರದ ಛತ್ತೀಸ್ ಗಢಕ್ಕೆ ಶಾಸಕರನ್ನು ಶಿಫ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗ್ತಿದೆ..
ಹಾಗೆ ನೋಡಿದ್ರೆ ಹಿಮಾಚಲ ಪ್ರದೇಶ ರಾಜಕೀಯ , ಎಲೆಕ್ಷನ್ ಇತಿಹಾಸ ವಿಶೇಷತೆ ನೋಡಿದ್ರೆ , ಹಿಮಾಚಲ ಪ್ರದೇಶದಲ್ಲಿ 37 ವರ್ಷಗಳಿಂದ ಯಾವ ಪಕ್ಷವೂ ಸತತವಾಗಿ ಎರಡು ಬಾರಿ ಅಧಿಕಾರದ ಗದ್ದುಗೇರಿಲ್ಲ.. ಈ ಟ್ರೆಂಡ್ ಬ್ರೇಕ್ ಮಾಡಲು ಬಿಜೆಪಿ ಮಿಷನ್ ರಿಪೀಟ್ ಅಲ್ಲ ಮಿಷನ್ ಇಪಾಸಿಬ್ ಆಗಿದೆ.. ಸ್ಪಷ್ಟ ಬಹುಮತ ಸಿಕ್ಕಿ ಕಾಂಗ್ರೆಸ್ ಈ ಬಾರಿ ಹಿಮಾಚಲ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗುತ್ತಿದೆ..
ಅಂದ್ಹಾಗೆ ಆಪ್ ಹಿಮಾಚಲ ಪ್ರದೇಶದಲ್ಲಿ ಖಾತೆಯನ್ನೇ ತೆರೆದಿಲ್ಲ… ಆಮ್ ಆದ್ಮಿ ಪಾರ್ಟಿಯ ಜಾದೂ ಗುಡ್ಡ ಗಾಡು ರಾಜ್ಯದಲ್ಲಿ ನಡೆಯಲಿಲ್ಲ….
ಇತ್ತ ಸಿಎಂ ಜೈರಾಮ್ ಠಾಕೂರ್ ಸೋಲನ್ನು ಒಪ್ಪಿಕೊಂಡಿದ್ದಾರೆ. ಜನರು ನೀಡಿದ ತೀರ್ಪನ್ನು ಗೌರವಿಸುವುದಾಗಿ ಹೇಳಿದರು. ಅಲ್ಲದೇ ರಾಜೀನಾಮೆ ಸಲ್ಲಿಸಲು ಶೀಘ್ರವೇ ರಾಜ್ಯಪಾಲರ ಕಚೇರಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ತನ್ನ ವಿಜೇತ ಶಾಸಕರನ್ನು ಚಂಡೀಗಢಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದೆ, ಅಲ್ಲಿ ಅವರು ತಮ್ಮ ಮುಂದಿನ ಕ್ರಮವನ್ನು ಚರ್ಚಿಸಲು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷವು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ – 68 ಸ್ಥಾನಗಳ ಅಸೆಂಬ್ಲಿಯ ಅರ್ಧದಷ್ಟು ಸ್ಥಾನಗಳನ್ನ ಕಾಂಗ್ರೆಸ್ ಗಳಿಸಿದೆ..
ಇದೇ ವೇಳೆ ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.. ಪಕ್ಷೇತರ ಅಭ್ಯರ್ಥಿಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು.
ಮೊದಲ ಹಂತದ ಫಲಿತಾಂಶ ಘೋಷಣೆಯಲ್ಲಿ, ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಮಂಡಿಯ ಸೆರಾಜ್ ಕ್ಷೇತ್ರದಿಂದ 37,007 ಮತಗಳ ಅಂತರದಿಂದ ಗೆದ್ದಿದ್ದಾಗಿ ತಿಳಿದುಬಂದಿತ್ತು..
ಒಟ್ಟಾರೆಯಾಗಿ ಗುಡ್ಡ ಗಾಡು ರಾಜ್ಯದಲ್ಲಿ ಕಮಲಕ್ಕೆ ಸೋಲಾಗಿದ್ದು , ಕಾಂಗ್ರೆಸ್ ಗೆಲುವಿನ ನಗೆ ಬೀರಿರುವುದು ಬಹುತೇಕ ಖಚಿತವಾಗಿದೆ.. ಒಂದೇ ಒಂದು ಸೀಟನ್ನೂ ಗೆಲ್ಲದೇ ಆಪ್ ಹಿನ್ನಡೆ ಅನುಭವಿಸಿದೆ..