ಮಲ್ಲೇಶ್ವರಂನಲ್ಲಿರುವ ಶ್ರೀ ಮಹಾಗಣಪತಿ ದೇವಾಲಯವು ಒಂದು ಪ್ರಮುಖವಾದ ಮತ್ತು ಭಕ್ತರಿಗೆ ಪವಿತ್ರವಾದ ಸ್ಥಳವಾಗಿದೆ. ಶ್ರೀ ಮಹಾಗಣಪತಿ ವಿಗ್ರಹವು ಶ್ರೀ ಮಾನ್ ಗಿರಿಯಪ್ಪಗೌಡರಿಗೆ ನೆಲಮಂಗಲದ ಹತ್ತಿರದ ಕೆರೆಯಲ್ಲಿ ದೊರಕಿದ್ದು ಅಂದಿನ ಭಕ್ತ ಮಹಾ ಜನಗಳು ಗುಡ್ಡದ ಮೇಲೆ ಚಿಕ್ಕದಾಗಿ ಗರ್ಭಗುಡಿಯನ್ನು ನಿರ್ಮಿಸಿ ದೇವಸ್ಥಾನವನ್ನು 1930ನೇ ಇಸುವಿಯಲ್ಲಿ ವರಮಹಾಲಕ್ಷೀ ಹಬ್ಬದಂದು ಸ್ಥಾಪಿಸಲಾಯಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ದೇವಾಲಯಕ್ಕೆ ಗುಡ್ಡದ ಗಣಪತಿ, ಸ್ವಯಂಬು ಗಣಪತಿ, ಶ್ರೀ ಮಹಾಗಣಪತಿ ಹಾಗೂ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಆಗಿನ ಶ್ರೀ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳಾದಂತಹ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಈ ದೇವಾಲಯಕ್ಕೆ ಗೋಪುರವಿಲ್ಲದಿದ್ದುದನ್ನು ಕಂಡು 1964ರಲ್ಲಿ ಜಗದ್ಗರುಗಳು ಗೋಪುರ ನಿರ್ಮಾಣ ಮಾಡಿಸಿ ಕುಂಭಾಭಿಷೇಕವನ್ನು ನೆರವೇರಿಸಿದರು.
ಶ್ರೀ ಮಹಾಗಣಪತಿ ವಿಶೇಷಗಳು:- ಈ ದೇವಾಲಯದ ಆವರಣದಲ್ಲಿ ಸುಮಾರು 90-100 ವರ್ಷಗಳ ಪುರಾತನವಾದ ಅಶ್ವಥ ವೃಕ್ಷ ಹಾಗೂ ಶಮಿ ವೃಕ್ಷಗಳು ಇರುತ್ತದೆ.ಲೋಕ ಕಲ್ಯಾಣಾರ್ಥವಾಗಿ ಎಲ್ಲಾ ಭಕ್ತಾರ ಇಷ್ಟಾರ್ಥಗಳನ್ನು ನೇರವೆರಿಸಲು ಎಲ್ಲಾ ಭಕ್ತಾದಿಗಳೊಂದಿಗೆ ಸುಮಾರು 50ವರ್ಷಗಳಿಂದಲೂ ಸಂಕಷ್ಟಹರ ಚರ್ತುಥಿಯ ಪೂಜೆಯನ್ನು ಶ್ರೀ ಸೂತ್ರಂ ಸುಬ್ರಮಹ್ಮಣ್ಯ ಶಾಸ್ತ್ರೀ ಗಳು ಪ್ರಾರಂಭ ಮಾಡಿ ಅಂದಿನಿಂದಲೂ ಸೇವೆಯನ್ನು ಸಲ್ಲಿಸುತ್ತಾ ಬರಲಾಗುತ್ತಿದೆ. ಹಾಗೂ ಇಷ್ಟಾರ್ಥಗಳನ್ನು ನೇರವೆಸಿಕೊಳ್ಳಲು ಎರಡು ತೆಂಗಿನಕಾಯಿಗಳನ್ನು ತಂದು ಶ್ರೀ ಮಹಾಗಣಪತಿಯಲ್ಲಿ ಪ್ರಾರ್ಥಿಸಿಕೊಂಡು ಸಮರ್ಪಣೆ ಮಾಡಿ ಇಷ್ಟಾರ್ಥಗಳು ನೇರವೇರಿದ ನಂತರದಲ್ಲಿ 21,54,108,1008, ಹೀಗೆ ಅವರವರ ಶಕ್ತಿಯನುಸಾರ ಈಡುಗಾಯಿಯನ್ನು ಒಡೆಯುವುದು ಇಲ್ಲಿನ ವಿಶೇಷ. ಈ ವಿಶೇಷತೆಯಿಂದ ಈಡುಗಾಯಿ ಗಣಪತಿ ಎಂದು ಪ್ರಸಿದ್ಧವಾಗಿದೆ. ಮತ್ತು ವಿವಾಹ ಮಂಗಳ ಕಾರ್ಯಗಳು ಶ್ರೀಘ್ರದಲ್ಲಿ ನೇರವೆರಿಸಲು 108 ಕಡಬಿನ ಹಾರದ ಸೇವೆ ವಿಶೇಷ, ಭಾದ್ರಪದ ಶುದ್ಧ ಚೌತಿಯಿಂದ ಶ್ರೀ ಆನಂತ ಪದ್ಮ ಸ್ವಾಮಿ ಹಬ್ಬದ ತನಕ ಗಣಪತಿ ಹಬ್ಬದ ವಿಶೇಷ ಪೂಜೆ ಅಲಂಕಾರ ಹಾಗೂ ಉತ್ಸವವನ್ನು ನಡೆಸಲಾಗುವುದು.
ಈ ದೇವಾಲಯದ ಆವರಣದಲ್ಲಿ ಒಟ್ಟು 6 ಸನ್ನಿಧಿಗಳು ಇರುತ್ತವೆ. ಇದರಲ್ಲಿ ಶ್ರೀ ಬನಶಂಕರಿ ಅಮ್ಮನವರಿಗೆ ಪ್ರತಿ ವರ್ಷ ಬನದ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗಿದೆ.ಕೊನೆಯ ದಿನ ದೇವರ ಅಭಿಷೇಕದ ನೀರನ್ನು ದೋಷ ನಿವಾರಣೆಗಾಗಿ ಸಂಪ್ರೋಕ್ಷಣೆ ಮಾಡಿಕೊಳ್ಳುವ ಪದ್ಧತಿ ಇದೆ.
ಬಾಗಿಲು ತೆರೆಯುವ ಸಮಯ
08:30 AM IST – 08:30 AM IST
06:00 AM IST – 08:30 AM IST
ಒಟ್ಟಾರೆಯಾಗಿ, ಶ್ರೀ ಮಹಾಗಣಪತಿ ದೇವಾಲಯವು ಮಲ್ಲೇಶ್ವರಂನ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಐತಿಹಾಸಿಕ ಹಿನ್ನೆಲೆ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಭಕ್ತರಿಗೆ ಆಶೀರ್ವಾದ ಮತ್ತು ನೆಮ್ಮದಿಯನ್ನು ನೀಡುವ ಪವಿತ್ರ ಸ್ಥಳವಾಗಿದೆ.







