ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯವು, ಉದ್ಯಾನ ನಗರಿಯಾದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಗೊಂಡಿದೆ. 1902ರಲ್ಲಿ ಬೆಂಗಳೂರು ನಗರಾಭಿವೃದ್ಧಿಯಾಗಲು ಈ ದೇವಾಲಯವು ಅದ್ಭುತವಾದ ಸ್ಮಾರಕವಾಗಿ ಬೆಳಗುತ್ತದೆ. ಮಲ್ಲೇಶ್ವರದ ಮಧ್ಯ ಭಾಗದಲ್ಲಿರುವುದು ವಿಶೇಷವೇ ಸರಿ. ಮಲ್ಲೇಶ್ವರ ಪ್ರದೇಶದ ರಚನೆಯಾಗುವ ಕಾಲದಲ್ಲಿ ಅಂದರೆ 20ನೇ ಶತಮಾನದಲ್ಲಿ ವೈದಿಕ ಪಂಡಿತರು, ಗೌರವಾನ್ವಿತ ಮಲ್ಲೇಶ್ವರದ ನಿವಾಸಿಗಳು ಮತ್ತು ಭಕ್ತಾಧಿಗಳಿಂದ ಈ ದೇವಸ್ಥಾನವು ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯವು ಶ್ರೀ ಪಾಂಚರಾತ್ರಾಗಮದ ಮತ್ತು ವೈಧಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಇಂದಿಗೂ ಇದೇ ಸಂಪ್ರದಾಯಕ್ಕನುಗುಣವಾಗಿ ಪೂಜಾದಿ ಕೈಂಕರ್ಯಗಳು ನೆರವೇರುತ್ತದೆ. ಈ ದೇವಾಲಯವು ದಿನೇ ದಿನೇ ಖ್ಯಾತಿಯನ್ನು ಪಡೆಯುತ್ತಿದ್ದು, ದಶಕಗಳಿಂದ ಅಸಂಖ್ಯಾತ ಭಕ್ತರ ಆಕರ್ಷಣೀಯ ಸ್ಥಳವಾಗಿರುತ್ತದೆ. ದೇವಾಲಯದಲ್ಲಿ ನಡೆಯುವ ದೈನಂದಿನ ಸೇವೆಗಳು ಮತ್ತು ಸಂವತ್ಸರಕ್ಕೊಮ್ಮೆ ನಡೆಯುವ ವೈಭವದ ಉತ್ಸವಾಧಿಗಳೇ ಇದರ ವಿಶೇಷ. ಮಲ್ಲೇಶ್ವರದ ಕಿರು ಪರಿಚಯವನ್ನು ನೀಡಬೇಕಾದರೆ ಈ ಪ್ರದೇಶವು 19ನೇ ಶತಮಾನದಲ್ಲಿ ರಚನೆಯಾಗಿದ್ದು, ಹಲವು ಸಂಪ್ರದಾಯ ನಂಬಿಕೆ ಸಂಸ್ಕೃತಿಗೆ ಸೇರಿದ ಹಲವಾರು ಜನರು ಸಾಮರಸ್ಯದಿಂದ ಜೀವಿಸುವ ಸ್ಥಳವಾಗಿರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮಲ್ಲೇಶ್ವರದ ನಿವಾಸಿಗಳಾಗಿದ್ದ ಹಲವು ಪ್ರಭಾವಶಾಲಿ ವ್ಯಕ್ತಿಗಳಾದ ಶೇಟ್ಲೂರು ಶ್ರೀ ವೆಂಕಟರಂಗ ಐಯ್ಯಂಗಾರ್, ಶ್ರೀ ಫ್ರೊಫೆಸರ್ ಶ್ರೀ ಎಂ.ಟಿ. ನಾರಾಯಣ ಅಯ್ಯಂಗಾರ್, ಶ್ರೀ ರಾವ್ ಬಹದ್ದೂರು ನರಸಿಂಹಚಾರ್ಯ ಶ್ರೀ ಎಂ.ಟಿ. ನರಸಿಂಹ ಐಯ್ಯಂಗಾರ್ ಮತ್ತು ಶ್ರೀ ಆಸೂರಿ ಆನಂದಾಳ್ವಾರ್ ಸ್ವಾಮಿಗಳು ಮತ್ತು ಇತರ ವಿದ್ವಾಂಸರು ಈ ದೇವಾಲಯದ ಸ್ಥಾಪನೆಗೆ ಕೊಡುಗೆಯನ್ನು ನೀಡಿರುತ್ತಾರೆ. ಮುಖ್ಯ ಸನ್ನಿಧಿ ಸಾಂಸ್ಕೃತಿಕ ರಚನೆ ಮತ್ತು ಸ್ವರೂಪ, ಉತ್ಸವಾದಿ ಸೇವೆಗಳು, ಅಭಿವೃದ್ಧಿ ಇತ್ಯಾದಿಗಳಲ್ಲಿ ಈ ದೇವಾಲಯವು ಸ್ಮರಣೀಯವಾದದ್ದು. ವಿಶಿಷ್ಠಾದ್ವೈತ ಮತ್ತು ಶ್ರೀ ಪಾಂಚರಾತ್ರಾಗಮ ಸಿದ್ಧಾಂತ ಸಾಂಪ್ರದಾಯಕ್ಕೆ ಅನುಗುಣವಾದ ವಿಷ್ಣುವಿನ ಆಲಯವನ್ನು ನಿರ್ಮಿಸುವ ಆಲೋಚನೆಯು ನಿವಾಸಿಗಳಲ್ಲಿ ಬಂದು, ಇದಕ್ಕೆ ಸರಿಹೊಂದುವ ಸ್ಥಳದ ಹುಡುಕಾಟದಲ್ಲಿ ತೊಡಗಿದಾಗವರು. ಈ ದಿವ್ಯವಾದ, ಭವ್ಯವಾದ ಮಂದಿರ ನಿರ್ಮಾಣದ ಸೇವೆಗಾಗಿ ಮೈಸೂರಿನ ಶ್ರೀಮಾನ್ ಮಹಾರಾಜರ ಮೊರೆ ಹೊಕ್ಕಿದರು. ಜನರ ಬೆಂಬಲಕ್ಕೆ ಮೈಸೂರಿನ ಅರಸರು ಈ ಆಲಯದ ನಿರ್ಮಾಣಕ್ಕೆ ಜಾಗವನ್ನು ಹಾಗೂ 3750 ವರಾಹಗಳನ್ನು ನೀಡಿ ಉಪಕರಿಸಿದ್ದಾರೆ. ಈ ಪ್ರದೇಶದ ನಿವಾಸಿಗಳು 11794 ವರಾಹಗಳನ್ನು ಈ ಮಂದಿರ ನಿರ್ಮಾಣಕ್ಕೆ ಕೊಡುಗೆಯಾಗಿ ನೀಡಿರುವುದು ಸ್ಮರಣೀಯ.
ಮೂಲ ಗರ್ಭಗುಡಿಯಲ್ಲಿರುವ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿಯ ಸುಂದರ ಮೂರ್ತಿಯನ್ನು 22ನೇ ಆಗಸ್ಟ್ 1902 ಅಂದರೆ ಸಿಂಹ ಮಾಸದ, ಶುಭಕೃತನಾಮಸಂವತ್ಸರದ, ಬಹುಳ ತೃತೀಯ ಉತ್ತರಾಭಾದ್ರ ನಕ್ಷತ್ರದಲ್ಲಿ ಕೂಡಿದ ಶುಭದಿನದಂದು ತುಳಸೀ ತೋಟದ ಪ್ರಸನ್ನ ಕೃಷ್ಣ ಸ್ವಾಮಿ ದೇವಸ್ಥಾನ ಬೆಂಗಳೂರು ಈ ದೇವಸ್ಥಾನದ ಪ್ರಧಾನ ಅರ್ಚರಾದ ಶ್ರೀ ಪಾಂಚರಾತ್ರಾಗಮ ವಿದ್ವಾನ್ ಶ್ರೀಧರ ಶೇಷ ಭಟ್ಟರ್ ರವರ ನೇತೃತ್ವದಲ್ಲಿ ಆಗಮ ವಿದ್ವಾಂಸರಿಂದ ಪ್ರತಿಷ್ಠಾಪನೆ ಮಾಡಿರುತ್ತಾರೆ. ಶ್ರೀಮಾನ್ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕದ ಮಹೋತ್ಸವದ ದಿನದಂದೆ ಈ ದೇವಸ್ಥಾನದ ಪ್ರತಿಷ್ಠಾಪಿಸಿರುವುದ ಗಮನೀಯ ವಿಷಯವಾಗಿರುತ್ತದೆ. ಮೈಸೂರು ಅರಸರು ಯದುವಂಶದವರು ಅದೇ ವಂಶದಲ್ಲಿಅವತರಿಸಿದವನು ಶ್ರೀ ಕೃಷ್ಣ ಪರಮಾತ್ಮ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ “ರಾಜಮಹರ್ಷಿ” ಎಂದು ಖ್ಯಾತಿಯನ್ನು ಪಡೆದವರು.
ಈ ದೇವಸ್ಥಾನವು ಸ್ಥಾಪನೆಯಾಗಲು ಮುಖ್ಯ ಕಾರಣ 1898 ರಲ್ಲಿ ಈ ಪ್ರಾಂತ್ಯದಲ್ಲಿ ಪ್ಲೇಗ್ ಎಂಬ ಮಹಾಮಾರಿಯು ಬಂದು ಹಲವಾರು ಜನರನ್ನು ಬಲಿತೆಗೆದುಕೊಂಡಿತು. ಈ ಮಹಾಮಾರಿಯ ನಿವಾರಣೆಗೆಂದು ಈ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನವನ್ನು 22 ಆಗಸ್ಟ್ 1902 ರಲ್ಲಿ ಸ್ಥಾಪಿಸಲಾಯಿತು.
ಈ ದೇವಾಲಯದಲ್ಲಿ ಪ್ರತೀ ವರ್ಷ ಶ್ರೀ ಕೃಷ್ಣಜಯಂತಿ ಉತ್ಸವ, ಬ್ರಹ್ಮೋತ್ಸವ, ನರಸಿಂಹ ಜಯಂತಿ, ಪವಿತ್ರೋತ್ಸವ, ಊಂಜಲೋತ್ಸವ, ವೈಕುಂಠ ಏಕಾದಶಿ, ಹನುಮಜಯಂತಿ, ಧನರ್ಮಾಸ ಪೂಜೆ, ಆಳ್ವಾರ್ ಆಚಾರ್ಯರುಗಳ ತಿರುನಕ್ಷತ್ರ, ರಾಮರ ಬ್ರಹ್ಮೋತ್ಸವ, ಕೊಠಾರೋತ್ಸವ, ಪಾದುಕ ಪಟ್ಟಾಭಿಷೇಕ, ದಶಾವತಾರೋತ್ಸವ, ನವರಾತ್ರಿ ಉತ್ಸವ, ದೀಪಾವಳಿ ಉತ್ಸವ, ಪಂಚಗರುಡ ವಾಹನೋತ್ಸವ, ರಥ ಸಪ್ತಮಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಗವಂತನ ವಿಷಯವಾಗಿ ಉಪನ್ಯಾಸಗಳು ನಡೆಯುತ್ತಿರುತ್ತದೆ. ಈ ದೇವಾಲಯದಲ್ಲಿ ವಿವಾಹ ಅಪೇಕ್ಷೆಯಿರುವ ವಧು ಅಥವಾ ವರರು ಬಂದು ಕಲ್ಯಾಣೊತ್ಸವದ ಸಮಯದಲ್ಲಿ ದೇವರ ಕಂಕಣವನ್ನು ಧರಿಸಿ ಪ್ರದಕ್ಷಿಣೆ ಮಾಡಿದ ಪಕ್ಷದಲ್ಲಿ ಅವರಿಗೆ ಬೇಗನೆ ವಿವಾಹವಾಗುತ್ತದೆ. ಹಾಗೂ ಸಂತಾನ ಭಾಗ್ಯಕ್ಕಾಗಿ ಸಂತಾನ ಗೋಪಾಲಕೃಷ್ಣ ಪೂಜೆ ನೆರವೇರಿಸಿದಲ್ಲಿ ಫಲ ಉಂಟಾಗುತ್ತದೆ. ಹಾಗೂ ಇಲ್ಲಿ ವಿಶೇಷವಾಗಿ ಪ್ರದಕ್ಷಣೆಗಳನ್ನು ಹಾಕಿದ ಭಕ್ತಾಧಿಗಳಿಗೆ ಅವರವರ ಇಷ್ಠಾರ್ಥಗಳು ನೆರವೇರುತ್ತದೆ.
ಬಾಗಿಲು ತೆರೆಯುವ ಸಮಯ
07:30 AM IST – 12:00 PM IST
06:00 PM IST – 09:00 PM IST
ಬಾಗಿಲು ಮುಚ್ಚುವ ಸಮಯ
12:30 PM IST – 09:00 PM IST
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}](https://saakshatv.com/wp-content/uploads/2025/04/Picsart_25-04-12_18-07-19-184-750x500.jpg)







