ADVERTISEMENT
Monday, April 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

Shwetha by Shwetha
February 26, 2021
in Health, Newsbeat, ಆರೋಗ್ಯ, ನ್ಯೂಸ್ ಬೀಟ್
Saakshatv healthtips remedies burns
Share on FacebookShare on TwitterShare on WhatsappShare on Telegram

ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು Saakshatv healthtips remedies burns

ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕೈ ಸುಡುವುದು ಅಥವಾ ಬಿಸಿ ಪದಾರ್ಥಗಳಿಂದ ಸುಟ್ಟಗಾಯಗಳು ಉಂಟಾಗುವುದು ಸಾಮಾನ್ಯ. ಸಣ್ಣಪುಟ್ಟ ಸುಟ್ಟುಕೊಳ್ಳುವಿಕೆಯು ಕೂಡ ಬಹಳಷ್ಟು ನೋವನ್ನು ಉಂಟು ಮಾಡುತ್ತದೆ. Saakshatv healthtips remedies burns

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

April 6, 2026

ಸುಟ್ಟಗಾಯಗಳನ್ನು ಅವುಗಳ ತೀವ್ರತೆಯಿಂದ ವರ್ಗೀಕರಿಸಲಾಗುತ್ತದೆ. ‌ಮೊದಲ ಹಂತದ ಸುಟ್ಟಗಾಯಗಳನ್ನು ಕಡಿಮೆ ತೀವ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಚರ್ಮದ ಹೊರ ಪದರದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
ಎರಡನೇ ಹಂತದ ಸುಡುವಿಕೆಯು ಚರ್ಮದ ಆಳವಾದ ಪದರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗುಳ್ಳೆಗಳ ಉಂಟುಮಾಡುತ್ತದೆ.

Saakshatv healthtips remedies burns
ಮೂರನೇ ಹಂತದ ಸುಡುವಿಕೆಯು ಚರ್ಮದ ಎಲ್ಲಾ ಪದರಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಆದರೆ ನಾಲ್ಕನೇ ಹಂತದ ಸುಟ್ಟಗಾಯಗಳು ಕೀಲುಗಳು ಮತ್ತು ಮೂಳೆಗಳನ್ನು ಒಳಗೊಂಡಿರಬಹುದು. ಮೂರನೇ ಮತ್ತು ನಾಲ್ಕನೇ ಹಂತದ ಸುಟ್ಟಗಾಯಗಳನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ನೀವು ಮನೆಯಲ್ಲಿ ಪ್ರಥಮ ದರ್ಜೆಯ ಸುಟ್ಟಗಾಯಗಳು ಮತ್ತು ಎರಡನೇ ಹಂತದ ಸುಟ್ಟಗಾಯಗಳಿಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಟೊಮೆಟೋ ರಸ

ನಿಂಬೆ ಮತ್ತು ಟೊಮೆಟೋ ರಸವು ಸುಟ್ಟ ಗಾಯಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನಿಧಾನವಾಗಿ ಸುಟ್ಟ ಗಾಯದ ಮೇಲಿನ ಸತ್ತ ಚರ್ಮವನ್ನು ತೆಗೆದು, ಹೊಸ ಚರ್ಮದ ಹುಟ್ಟುವಿಕೆಗೆ ನೆರವಾಗುತ್ತದೆ. ನಿಂಬೆಯಲ್ಲಿರುವ ಆಸಿಡಿಕ್ ಗುಣ ಕಲೆ ನಿವಾರಕವಾಗಿ ಕೆಲಸ ಮಾಡುತ್ತದೆ. ತಾಜಾ ಟೊಮೆಟೋ ರಸ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ಸುಟ್ಟ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ. ಸಹಜವಾದ ನೀರಿನಿಂದ ಸುಟ್ಟ ಗಾಯವನ್ನು ನಿಧಾನವಾಗಿ ತೊಳೆಯಿರಿ. ನಿಮಗೆ ಎರಡು ಸ್ವಚ್ಛವಾಗಿರುವ ಬಟ್ಟೆಗಳು ಬೇಕು.

ಬಳಸುವ ವಿಧಾನ
ಮೊದಲಿಗೆ ಸುಟ್ಟ ಗಾಯವನ್ನು ತಣ್ಣನೆಯ ನೀರಿನಿಂದ ಸುಟ್ಟ ಜಾಗವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ.
ನಂತರ ಒಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ನಿಂಬೆಯ ರಸದಲ್ಲಿ ಮತ್ತು ಮತ್ತೊಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ಟೊಮೆಟೋ ರಸದಲ್ಲಿ ನೆನೆಸಿ.
ಸುಟ್ಟ ಗಾಯದ ಮೇಲೆ ನಿಂಬೆಯ ರಸದಲ್ಲಿ ‌ನೆನೆಸಿದ ಬಟ್ಟೆಯನ್ನು ನಿಧಾನವಾಗಿ ಇಟ್ಟು ಸ್ವಲ್ಪ ಸಮಯ ಹಾಗೆ ಬಿಡಿ.
ಅದು ಒಣಗಿದ ಬಳಿಕ ತಾಜಾ ಟೊಮೆಟೋ ರಸದಲ್ಲಿ ನೆನೆಸಿದ ಬಟ್ಟೆಯನ್ನು ಸುಟ್ಟ ಗಾಯದ ಮೇಲೆ ಇಡಿ. ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ ಮತ್ತು ಗರಿಷ್ಟ ಮಟ್ಟದ ಬ್ಲೀಚಿಂಗ್ ಪರಿಣಾಮದಿಂದ ಸುಟ್ಟ ಗಾಯದ ಕಲೆಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
ಮೊಡವೆ ಕಲೆಗಳ ನಿವಾರಣೆಗೆ ಕೂಡ ನಿಂಬೆ ರಸವನ್ನು ಇದೇ ರೀತಿಯಾಗಿ ಬಳಸಬಹುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಕಲೆಯ ಮೇಲೆ ಮಸಾಜ್ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಅನುಸರಿಸುವುದರಿಂದ ಕಲೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಬಾದಾಮಿ ಎಣ್ಣೆಯು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ.

ಮೆಂತ್ಯೆ

ಸುಟ್ಟ ಕಲೆಗಳನ್ನು ನಿವಾರಿಸಲು ಮೆಂತ್ಯೆ ಕಾಳುಗಳು ಪರಿಣಾಮಕಾರಿಯಾಗಿದೆ . ಒಂದು ಇಡೀ ರಾತ್ರಿ ಮೆಂತ್ಯೆಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಮರುದಿನ ಅದನ್ನು ಪೇಸ್ಟ್ ಮಾಡಿ. ಇದನ್ನು ಸುಟ್ಟ ಗಾಯದ ಮೇಲೆ ಹಚ್ಚಿ, ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ.
ಮೆಂತ್ಯೆ ಪೇಸ್ಟ್ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಸುಟ್ಟ ಗಾಯದ ಕಲೆಯ ಮೇಲೆ ಇದನ್ನು ಆಗಾಗ್ಗೆ ಹಚ್ಚಿ. ತಣ್ಣನೆಯ ನೀರಿನ ಜೊತೆಗೆ ಅರಿಶಿನವನ್ನು ಬಳಸುವುದರಿಂದ ಕೂಡ ಸೋಂಕನ್ನು ನಿವಾರಿಸಬಹುದಾಗಿದೆ. ಕೂದಲು ಉದುರುವುದು, ತಲೆ ಹೊಟ್ಟು, ಮೊಡವೆ, ಚರ್ಮ ಸಂಬಂಧಿ ಸಮಸ್ಯೆಗಳು ಕೂಡ ಮೆಂತ್ಯೆ ಕಾಳುಗಳಿಂದ ನಿವಾರಣೆಯಾಗುತ್ತದೆ.

ಆಲೂಗಡ್ಡೆ ಸಿಪ್ಪೆಗಳು

ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಮತ್ತೊಂದು ವಿಧಾನವೆಂದರೆ ಆಲೂಗಡ್ಡೆ ಸಿಪ್ಪೆಯನ್ನು ಸುಟ್ಟ ಗಾಯಕ್ಕೆ ಬಳಸುವುದು. ಆಲೂಗಡ್ಡೆ ಸಿಪ್ಪೆಗಳಲ್ಲಿ ನೀರಿನಂಶವಿದ್ದು, ಇದರಲ್ಲಿನ ಆಂಟಿ ಬ್ಯಾಕ್ಟೀರಿಯಾ ಗುಣಗಳು ಸುಟ್ಟ ಗಾಯಗಳನ್ನು ಗುಣ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಸಣ್ಣಪುಟ್ಟ ಗಾಯಗಳಿಗೆ ಉತ್ತಮ ಔಷಧಿಯಾಗಿದೆ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಅದನ್ನು ಗಾಯವಿರುವ ಜಾಗದ ಮೇಲೆ ಹಚ್ಚಿ ಅಥವಾ ಆಲೂಗಡ್ಡೆಯ ಸಿಪ್ಪೆಯನ್ನು ಗಾಯಕ್ಕೆ ಸುತ್ತಿ ಬ್ಯಾಂಡೇಜ್ ತರ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳ ನೋವು ಸಹ ನಿವಾರಣೆಯಾಗುತ್ತದೆ.
Saakshatv healthtips remedies burns

ಬಾರ್ಲಿ, ಅರಿಶಿನ ಮತ್ತು ಮೊಸರು
ಸುಟ್ಟ ಗಾಯಗಳಿಗೆ ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಬಳಸುವುದು ಕೂಡ ಅತ್ಯುತ್ತಮ ಮನೆಮದ್ದಾಗಿದೆ. ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ‌ಅದನ್ನು ಸುಟ್ಟ ಗಾಯವಾದ ಜಾಗಕ್ಕೆ ಹಚ್ಚುವುದರಿಂದ ನೋವು ನಿವಾರಣೆಯಾಗಿ ಗಾಯವೂ ವಾಸಿಯಾಗುತ್ತದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

https://twitter.com/SaakshaTv/status/1364050176080449537?s=19

https://twitter.com/SaakshaTv/status/1364011052598403074?s=19

ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌ https://t.co/YOgFatzho4

— Saaksha TV (@SaakshaTv) February 23, 2021

Tags: remedies burnsSaakshatv healthtipsSaakshatv healthtips remedies burns
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

by Shwetha
April 6, 2026
0

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram