Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

Shwetha by Shwetha
February 26, 2021
in Health, Newsbeat, ಆರೋಗ್ಯ, ನ್ಯೂಸ್ ಬೀಟ್
Saakshatv healthtips remedies burns
Share on FacebookShare on TwitterShare on WhatsappShare on Telegram

ಸುಟ್ಟಗಾಯಗಳ ನೋವಿಗೆ ಮತ್ತು ‌ಕಲೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು Saakshatv healthtips remedies burns

ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕೈ ಸುಡುವುದು ಅಥವಾ ಬಿಸಿ ಪದಾರ್ಥಗಳಿಂದ ಸುಟ್ಟಗಾಯಗಳು ಉಂಟಾಗುವುದು ಸಾಮಾನ್ಯ. ಸಣ್ಣಪುಟ್ಟ ಸುಟ್ಟುಕೊಳ್ಳುವಿಕೆಯು ಕೂಡ ಬಹಳಷ್ಟು ನೋವನ್ನು ಉಂಟು ಮಾಡುತ್ತದೆ. Saakshatv healthtips remedies burns

Related posts

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

September 22, 2023
ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

September 20, 2023

ಸುಟ್ಟಗಾಯಗಳನ್ನು ಅವುಗಳ ತೀವ್ರತೆಯಿಂದ ವರ್ಗೀಕರಿಸಲಾಗುತ್ತದೆ. ‌ಮೊದಲ ಹಂತದ ಸುಟ್ಟಗಾಯಗಳನ್ನು ಕಡಿಮೆ ತೀವ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಚರ್ಮದ ಹೊರ ಪದರದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
ಎರಡನೇ ಹಂತದ ಸುಡುವಿಕೆಯು ಚರ್ಮದ ಆಳವಾದ ಪದರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗುಳ್ಳೆಗಳ ಉಂಟುಮಾಡುತ್ತದೆ.

Saakshatv healthtips remedies burns
ಮೂರನೇ ಹಂತದ ಸುಡುವಿಕೆಯು ಚರ್ಮದ ಎಲ್ಲಾ ಪದರಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಆದರೆ ನಾಲ್ಕನೇ ಹಂತದ ಸುಟ್ಟಗಾಯಗಳು ಕೀಲುಗಳು ಮತ್ತು ಮೂಳೆಗಳನ್ನು ಒಳಗೊಂಡಿರಬಹುದು. ಮೂರನೇ ಮತ್ತು ನಾಲ್ಕನೇ ಹಂತದ ಸುಟ್ಟಗಾಯಗಳನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ನೀವು ಮನೆಯಲ್ಲಿ ಪ್ರಥಮ ದರ್ಜೆಯ ಸುಟ್ಟಗಾಯಗಳು ಮತ್ತು ಎರಡನೇ ಹಂತದ ಸುಟ್ಟಗಾಯಗಳಿಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಟೊಮೆಟೋ ರಸ

ನಿಂಬೆ ಮತ್ತು ಟೊಮೆಟೋ ರಸವು ಸುಟ್ಟ ಗಾಯಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನಿಧಾನವಾಗಿ ಸುಟ್ಟ ಗಾಯದ ಮೇಲಿನ ಸತ್ತ ಚರ್ಮವನ್ನು ತೆಗೆದು, ಹೊಸ ಚರ್ಮದ ಹುಟ್ಟುವಿಕೆಗೆ ನೆರವಾಗುತ್ತದೆ. ನಿಂಬೆಯಲ್ಲಿರುವ ಆಸಿಡಿಕ್ ಗುಣ ಕಲೆ ನಿವಾರಕವಾಗಿ ಕೆಲಸ ಮಾಡುತ್ತದೆ. ತಾಜಾ ಟೊಮೆಟೋ ರಸ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ಸುಟ್ಟ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ. ಸಹಜವಾದ ನೀರಿನಿಂದ ಸುಟ್ಟ ಗಾಯವನ್ನು ನಿಧಾನವಾಗಿ ತೊಳೆಯಿರಿ. ನಿಮಗೆ ಎರಡು ಸ್ವಚ್ಛವಾಗಿರುವ ಬಟ್ಟೆಗಳು ಬೇಕು.

ಬಳಸುವ ವಿಧಾನ
ಮೊದಲಿಗೆ ಸುಟ್ಟ ಗಾಯವನ್ನು ತಣ್ಣನೆಯ ನೀರಿನಿಂದ ಸುಟ್ಟ ಜಾಗವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ.
ನಂತರ ಒಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ನಿಂಬೆಯ ರಸದಲ್ಲಿ ಮತ್ತು ಮತ್ತೊಂದು ಸ್ವಚ್ಛವಾಗಿರುವ ಬಟ್ಟೆಯನ್ನು ತಾಜಾ ಟೊಮೆಟೋ ರಸದಲ್ಲಿ ನೆನೆಸಿ.
ಸುಟ್ಟ ಗಾಯದ ಮೇಲೆ ನಿಂಬೆಯ ರಸದಲ್ಲಿ ‌ನೆನೆಸಿದ ಬಟ್ಟೆಯನ್ನು ನಿಧಾನವಾಗಿ ಇಟ್ಟು ಸ್ವಲ್ಪ ಸಮಯ ಹಾಗೆ ಬಿಡಿ.
ಅದು ಒಣಗಿದ ಬಳಿಕ ತಾಜಾ ಟೊಮೆಟೋ ರಸದಲ್ಲಿ ನೆನೆಸಿದ ಬಟ್ಟೆಯನ್ನು ಸುಟ್ಟ ಗಾಯದ ಮೇಲೆ ಇಡಿ. ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ ಮತ್ತು ಗರಿಷ್ಟ ಮಟ್ಟದ ಬ್ಲೀಚಿಂಗ್ ಪರಿಣಾಮದಿಂದ ಸುಟ್ಟ ಗಾಯದ ಕಲೆಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
ಮೊಡವೆ ಕಲೆಗಳ ನಿವಾರಣೆಗೆ ಕೂಡ ನಿಂಬೆ ರಸವನ್ನು ಇದೇ ರೀತಿಯಾಗಿ ಬಳಸಬಹುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಕಲೆಯ ಮೇಲೆ ಮಸಾಜ್ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಅನುಸರಿಸುವುದರಿಂದ ಕಲೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಬಾದಾಮಿ ಎಣ್ಣೆಯು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ.

ಮೆಂತ್ಯೆ

ಸುಟ್ಟ ಕಲೆಗಳನ್ನು ನಿವಾರಿಸಲು ಮೆಂತ್ಯೆ ಕಾಳುಗಳು ಪರಿಣಾಮಕಾರಿಯಾಗಿದೆ . ಒಂದು ಇಡೀ ರಾತ್ರಿ ಮೆಂತ್ಯೆಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಮರುದಿನ ಅದನ್ನು ಪೇಸ್ಟ್ ಮಾಡಿ. ಇದನ್ನು ಸುಟ್ಟ ಗಾಯದ ಮೇಲೆ ಹಚ್ಚಿ, ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ.
ಮೆಂತ್ಯೆ ಪೇಸ್ಟ್ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಸುಟ್ಟ ಗಾಯದ ಕಲೆಯ ಮೇಲೆ ಇದನ್ನು ಆಗಾಗ್ಗೆ ಹಚ್ಚಿ. ತಣ್ಣನೆಯ ನೀರಿನ ಜೊತೆಗೆ ಅರಿಶಿನವನ್ನು ಬಳಸುವುದರಿಂದ ಕೂಡ ಸೋಂಕನ್ನು ನಿವಾರಿಸಬಹುದಾಗಿದೆ. ಕೂದಲು ಉದುರುವುದು, ತಲೆ ಹೊಟ್ಟು, ಮೊಡವೆ, ಚರ್ಮ ಸಂಬಂಧಿ ಸಮಸ್ಯೆಗಳು ಕೂಡ ಮೆಂತ್ಯೆ ಕಾಳುಗಳಿಂದ ನಿವಾರಣೆಯಾಗುತ್ತದೆ.

ಆಲೂಗಡ್ಡೆ ಸಿಪ್ಪೆಗಳು

ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಮತ್ತೊಂದು ವಿಧಾನವೆಂದರೆ ಆಲೂಗಡ್ಡೆ ಸಿಪ್ಪೆಯನ್ನು ಸುಟ್ಟ ಗಾಯಕ್ಕೆ ಬಳಸುವುದು. ಆಲೂಗಡ್ಡೆ ಸಿಪ್ಪೆಗಳಲ್ಲಿ ನೀರಿನಂಶವಿದ್ದು, ಇದರಲ್ಲಿನ ಆಂಟಿ ಬ್ಯಾಕ್ಟೀರಿಯಾ ಗುಣಗಳು ಸುಟ್ಟ ಗಾಯಗಳನ್ನು ಗುಣ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಸಣ್ಣಪುಟ್ಟ ಗಾಯಗಳಿಗೆ ಉತ್ತಮ ಔಷಧಿಯಾಗಿದೆ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಅದನ್ನು ಗಾಯವಿರುವ ಜಾಗದ ಮೇಲೆ ಹಚ್ಚಿ ಅಥವಾ ಆಲೂಗಡ್ಡೆಯ ಸಿಪ್ಪೆಯನ್ನು ಗಾಯಕ್ಕೆ ಸುತ್ತಿ ಬ್ಯಾಂಡೇಜ್ ತರ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳ ನೋವು ಸಹ ನಿವಾರಣೆಯಾಗುತ್ತದೆ.
Saakshatv healthtips remedies burns

ಬಾರ್ಲಿ, ಅರಿಶಿನ ಮತ್ತು ಮೊಸರು
ಸುಟ್ಟ ಗಾಯಗಳಿಗೆ ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಬಳಸುವುದು ಕೂಡ ಅತ್ಯುತ್ತಮ ಮನೆಮದ್ದಾಗಿದೆ. ಬಾರ್ಲಿ, ಅರಿಶಿನ ಮತ್ತು ಮೊಸರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ‌ಅದನ್ನು ಸುಟ್ಟ ಗಾಯವಾದ ಜಾಗಕ್ಕೆ ಹಚ್ಚುವುದರಿಂದ ನೋವು ನಿವಾರಣೆಯಾಗಿ ಗಾಯವೂ ವಾಸಿಯಾಗುತ್ತದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/oWAdASicQQ

— Saaksha TV (@SaakshaTv) February 23, 2021

ಎಲ್‌ಐಸಿ(LIC)ಯಿಂದ ತನ್ನ ಗ್ರಾಹಕರಿಗಾಗಿ ಮಾರ್ಚ್ 6 ರವರೆಗೆ ವಿಶೇಷ ಸೌಲಭ್ಯ https://t.co/H6UI5Ixv2K

— Saaksha TV (@SaakshaTv) February 23, 2021

ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌ https://t.co/YOgFatzho4

— Saaksha TV (@SaakshaTv) February 23, 2021

Tags: remedies burnsSaakshatv healthtipsSaakshatv healthtips remedies burns
ShareTweetSendShare
Join us on:

Related Posts

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

by Honnappa Lakkammanavar
September 22, 2023
0

ಭಾರತ ಹಾಗೂ ಕೆನಡಾ (India vs Canada) ನಡುವೆ ಉದ್ವಿಗ್ನತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹತ್ವದ ನಿರ್ಧಾರವೊಂದನ್ನು ಕೈಗೊಂಡು...

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

by Honnappa Lakkammanavar
September 20, 2023
0

ಬೆಂಗಳೂರು: ಪೊಲೀಸರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಾಗರಾಜ್(47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಇವರು ಸನಾವುಲ್ಲಾ ಒಡೆತನದ...

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

by admin
September 17, 2023
0

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

by admin
September 17, 2023
0

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿದಿನ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೈಚೀಲವನ್ನು ಮೀರಿ ಹಣ...

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ…

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ…

by admin
September 16, 2023
0

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ... Gill's step towards becoming No.1 in ODI batsmen's ranking ಏಷ್ಯಾಕಪ್‌-2023ರಲ್ಲಿ ಭರ್ಜರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram