ಅಭಿಷೇಕ್ ಬಚ್ಚನ್ ಐಶ್ವರ್ಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿದ್ದು ಹೇಗೆ ?
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ 14 ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿದ್ದಾರೆ. ಅಭಿಷೇಕ್ ಲಕ್ನೋದಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಮತ್ತು ಐಶ್ವರ್ಯಾ ಮುಂಬೈನಲ್ಲಿದ್ದರಿಂದ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ಅವರಿಗೆ ಒಟ್ಟಿಗೆ ದಿನ ಕಳೆಯಲು ಸಾಧ್ಯವಾಗಿಲ್ಲ.
ಆದಾಗ್ಯೂ, ಪರಸ್ಪರರ ಮೇಲಿನ ಅವರ ಪ್ರೀತಿ ಮತ್ತು ಗೌರವವು ಪ್ರಸ್ತುತ ಪೀಳಿಗೆಗೆ 14 ವರ್ಷದ ಬಳಿಕವೂ ಆಸಕ್ತಿದಾಯಕ ವಿಷಯವಾಗಿದೆ. ಆದರೆ ಅಭಿಷೇಕ್ ಐಶ್ವರ್ಯಾಗೆ ತಮ್ಮ ಪ್ರೀತಿಯನ್ನು ಹೇಗೆ ಪ್ರಸ್ತಾಪಿಸಿದರೆಂಬ ವಿಷಯವು ಕೂಡ ಅಷ್ಟೇ ಆಸಕ್ತಿದಾಯಕವಾಗಿದೆ.
ಅಭಿಷೇಕ್ ಐಶ್ವರ್ಯರಿಗೆ ತಮ್ಮ ಪ್ರೀತಿಯನ್ನು ಹೇಗೆ ಪ್ರಸ್ತಾಪಿಸಿದರು ?
ಅಭಿಷೇಕ್ ಬಚ್ಚನ್ ನ್ಯೂಯಾರ್ಕ್ನಲ್ಲಿ ಚಿತ್ರೀಕರಣದಲ್ಲಿದ್ದರು.
ಒಂದು ದಿನ ಅವರು ತನ್ನ ಹೋಟೆಲ್ ಕೋಣೆಯ ಬಾಲ್ಕನಿಯಲ್ಲಿ ನಿಂತು ತಾನು ಮತ್ತು ಐಶ್ವರ್ಯಾ ಮದುವೆಯಾಗಿದ್ದರೆ ಚೆನ್ನಾಗಿರುತ್ತದೆ ಎಂದು ಯೋಚಿಸಿದರು. ವರ್ಷಗಳ ನಂತರ, ಗುರು ಪ್ರೀಮಿಯರ್ ಗಾಗಿ ಅವರಿಬ್ಬರು ಅಲ್ಲಿದ್ದರು. ಪ್ರಥಮ ಪ್ರದರ್ಶನದ ನಂತರ, ಅವರು ಮತ್ತೆ ಹೋಟೆಲ್ ಗೆ ಬಂದರು. ಅಭಿಷೇಕ್ ಐಶ್ವರ್ಯಾ ರನ್ನು ಅದೇ ಬಾಲ್ಕನಿಗೆ ಕರೆದೊಯ್ದು, ಮದುವೆಯಾಗುವಂತೆ ಕೇಳಿಕೊಂಡರು.
ಅವರು ಐಶ್ವರ್ಯಾಗೆ ನೀಡಿದ ಉಂಗುರವು ಯಾವುದೇ ಬೆಲೆಬಾಳುವ ವಜ್ರ ವೈಡೂರ್ಯವೂ ಆಗಿರಲಿಲ್ಲ. ಅದು ಮಣಿರತ್ನಂ ಅವರ ಚಿತ್ರದಲ್ಲಿ ಅವರು ಪ್ರೀತಿ ನಿವೇದನೆ ಮಾಡಲು ಬಳಸಿದ ಉಂಗುರ.
ಭಾವನಾತ್ಮಕ ಕಾರಣಗಳಿಗಾಗಿ ಅವರು ಉಂಗುರವನ್ನು ತನ್ನ ಬಳಿ ಇಟ್ಟುಕೊಳ್ಳಬಹುದೇ ಎಂದು ನಿರ್ಮಾಪಕರನ್ನು ಕೇಳಿದ್ದರು.
ಅಭಿಷೇಕ್ ಬಚ್ಚನ್ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿದಾಗ ಐಶ್ವರ್ಯಾ ತಮ್ಮ ಒಪ್ಪಿಗೆಯನ್ನು ಸೂಚಿಸಿದರು ಮತ್ತು ಅವರು ಈಗ 14 ವರ್ಷಗಳ ಸುಂದರ ವೈವಾಹಿಕ ಜೀವನವನ್ನು ಅನುಭವಿಸುತ್ತಿದ್ದಾರೆ.
ಅಭಿಷೇಕ್ ಬಗ್ಗೆ ಐಶ್ವರ್ಯ ಏನು ಹೇಳುತ್ತಾರೆ?
ಐಶ್ವರ್ಯ ಬಚ್ಚನ್ 2010 ರಲ್ಲಿ ಪತ್ರಿಕೆಯೊಂದಕ್ಕೆ ಮಾತನಾಡುತ್ತಾ, ಅವರು ನಮ್ಮ ಸಂಬಂಧದಂತೆ ರಿಯಲ್ ಮತ್ತು ಒರಿಜಿನಲ್. ನಮ್ಮ ಜೀವನದ ಬಗ್ಗೆ ಕುತೂಹಲಕಾರಿ ಅಥವಾ ನೀರಸವಾಗಿ ಏನೂ ಇಲ್ಲ. ನಾವು ಪರಸ್ಪರ ಕಾಳಜಿ ವಹಿಸುತ್ತೇವೆ. ದೇವರ ದಯೆ ನಮ್ಮ ಮೇಲಿದೆ ಎಂದು ಹೇಳಿದ್ದರು.
ಯಾವುದೇ ಸಾಮಾನ್ಯ ದಂಪತಿಗಳಂತೆ, ಅಭಿಷೇಕ್ ಮತ್ತು ಐಶ್ವರ್ಯಾ ಅವರ ಸಂಬಂಧವೂ ಕಾದಾಟಗಳಿಂದ ಕೂಡಿದೆ. ನಾವು ಕೆಲವು ಕ್ಷುಲ್ಲಕ ವಿಷಯಗಳ ಬಗ್ಗೆ ವಾದಿಸುತ್ತೇವೆ ಮತ್ತು ಹೋರಾಡುತ್ತೇವೆ. ದೊಡ್ಡದಾಗಿ ಏನೂ ಇಲ್ಲ. ನನಗೆ ಹೆಚ್ಚು ಸಮಯದವರೆಗೆ ಕಾದಾಟವನ್ನು ಒಯ್ಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಯಾವುದೇ ವಾದದ ನಂತರ, ಅಭಿಷೇಕ್ ಅವರನ್ನು ಕೆಲವು ಸಲಹೆಗಳನ್ನು ಅಥವಾ ಏನಾದರೂ ಕೇಳುವ ಮೂಲಕ ಮೌನವನ್ನು ಮುರಿಯುತ್ತೇನೆ. ಅಲ್ಲದೆ, ತಂತ್ರಜ್ಞಾನವು ಈ ವಿಷಯಗಳನ್ನು ತುಂಬಾ ಸುಲಭವಾಗಿಸಿದೆ ಎಂದು ಐಶ್ವರ್ಯಾ ಹೇಳಿದರು.
ಅಭಿಷೇಕ್ ಬಚ್ಚನ್, ಇತ್ತೀಚಿನ ಸಂದರ್ಶನದಲ್ಲಿ, ಐಶ್ವರ್ಯಾ ಅವರು ತಮ್ಮ ಚಲನಚಿತ್ರಗಳನ್ನು ಬಿಡುಗಡೆಯಾಗುವ ಮೊದಲು ನೋಡಲು ಇಷ್ಟಪಡುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದರು. ಮಾಧ್ಯಮಗಳ ಗಮನವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ತಮ್ಮ ಮಗಳಿಗೆ ತರಬೇತಿ ನೀಡಿದ್ದಕ್ಕಾಗಿ ಅವರು ಐಶ್ವರ್ಯಾ ರನ್ನು ಶ್ಲಾಘಿಸಿದರು. ಅಭಿಷೇಕ್ ಮತ್ತು ಐಶ್ವರ್ಯಾ ಅವರು ಧಾಯ್ ಅಕ್ಷರ್ ಪ್ರೇಮ್ ಕೆ (2000), ಕುಚ್ ನಾ ಕಹೋ (2003), ಉಮ್ರಾವ್ ಜಾನ್ (2006) ಮತ್ತು ಧೂಮ್ 2 (2006), ಗುರು (2007) ಮತ್ತು ರಾವನ್ (2010) ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಇಮ್ಯುನಿಟಿ ಬೂಸ್ಟರ್ ಡ್ರಿಂಕ್ಸ್#Saakshatv #healthtips #ImmunityBoosterDrinks https://t.co/T9iVoNZHuW
— Saaksha TV (@SaakshaTv) April 16, 2021
ಬೂದುಕುಂಬಳಕಾಯಿ ಮಜ್ಜಿಗೆ ಹುಳಿ#Saakshatv #cookingrecipe #Boodukumbalakayi #majjigehuli https://t.co/HGcFk6L8E7
— Saaksha TV (@SaakshaTv) April 16, 2021
ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ#Maharashtracurfew #DeepikaPadukone https://t.co/kxvhIRddmi
— Saaksha TV (@SaakshaTv) April 16, 2021
ಕರ್ನಾಟಕದಲ್ಲಿ ನಾಳೆಯಿಂದ ಹೊಸ ರೂಲ್ಸ್ – ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಕಠಿಣ ಕ್ರಮ#Nightcurfew #weekendcurfew https://t.co/Ve8H4ciFe1
— Saaksha TV (@SaakshaTv) April 20, 2021
#AbhishekBachchan #propose #AishwaryaRai