ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೌದ್ರಯ್ಯ ನಾವು ಕನ್ನಡಿಗರು ವಿಶಾಲ ಹೃದಯದವರು ಆದರೆ ಜಗಳಗಂಟರು-ಕರಣಂ ಪವನ್ ಪ್ರಸಾದ್

admin by admin
August 31, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೆಲ ವರ್ಷಗಳ ಹಿಂದೆ ಉತ್ತರಾಖಾಂಡ್ ಪ್ರವಾಸದಲ್ಲಿದ್ದಾಗ ಇಲ್ಲಿ ಬೆಂಗಳೂರಿನಲ್ಲಿ ತಮಿಳರ ಜೊತೆ ಗಲಾಟೆ ಏರ್ಪಟಿತ್ತು, ಅಲ್ಲಿನ ಚಾನೆಲ್ಲುಗಳಲ್ಲಿ, ಡೆಲ್ಲಿಯಲ್ಲೂ ಸಹ ಕನ್ನಡಿಗರು ಜಗಳಗಂಟರು ಎಂಬ ನರೇಟಿವ್ ಕಟ್ಟುಕೊಡುತ್ತಿದ್ದರು. ಹೌದು ಮರಾಠರ ಜೊತೆ ಜಗಳ ಆಡಿದ್ದೇವೆ, ತಮಿಳರ ಜೊತೆ ಇದ್ದೇ ಇದೆ, ಕೇರಳಿಗರ ಜೊತೆಯೂ ಗುದ್ದಾಡಿದ್ದೇವೆ, ತೆಲುಗರ ಜೊತೆಯೂ ಜಗಳವೆತ್ತಿದ್ದು ಇದೆ. ಏಕೆಂದರೆ ನಮ್ಮ ಭೌಗೋಳಿಕ ಸ್ಥಾನ ಆ ರೀತಿ ಇದೆ, ಸುತ್ತಲೂ ಪಿಶ್ ಪೀಡೆಗಳಂತೆ ಜನ ಸುತ್ತುವರಿದಾಗ ಬದುಕಬೇಕಾದರೆ ಜಗಳಗಂಟರಾಗಬೇಕಾಗುತ್ತದೆ. ಇದು ನೆನ್ನೆ ಇವತ್ತಿನದಲ್ಲ, ಸದಾ ಕಾಲ ನಮ್ಮನ್ನು ಕೆಣಕುತ್ತಾ ಬಂದಿದ್ದಾರೆ ಇವರೆಲ್ಲಾ, ಕನೋಜನ ಹರ್ಷನ ವರಸೆ ಬಿಡಿ, ನಮ್ಮಿಂದಲೇ ಬೆಳೆದು, ನಮ್ಮದೇ ಆಶ್ರಯ ಪಡೆದು, ಪ್ರಥಮ ಶಾಸನವೂ ಶ್ರವಣಬೆಳಗೊಳದಲ್ಲಿರುವ ಮರಾಠರು ನಮಗೆ ಬೆದರಿಸಿದ್ದಾರೆ, ಏಕೀಕರಣ ಹೋರಾಟದ ಕಿಡಿ ಬಂದಿದ್ದೇ ಅಲ್ಲಿಂದ, ಬಲಪಂಥೀಯ, ಗಿಂಥೀಯ, ಗೊಂಥೀಯ ಎಲ್ಲರೂ ಮರಾಠರ ಕುಚೋದ್ಯ ಕಂಡೇ ಬೇಸತ್ತು ಕರ್ನಾಟಕದ ಕೂಗಿಗೆ ಬಂದದ್ದು, ಈ ವಿಚಾರವಾಗಿ ಆಲೂರರನ್ನೇ ತೆಗೆದುಕೊಳ್ಳಬಹುದು, ಇನ್ನು ತಮಿಳರಂತೂ ವಾತಾಪಿಗೆ ನುಗ್ಗಿ ಬೆನ್ನಿಗೆ ಚೂರಿ ಹಾಕಿದ ಪರಂಪರೆಯವರು. ಬ್ರಿಟಿಷರ ಜೊತೆ ಕೂಡಿಕೆಯಲ್ಲಿ ಕರ್ನಾಟಕದ ಇತಿಹಾಸವನ್ನೇ ತಿರುಚಿಬಿಟ್ಟವರು. ತೆಲುಗರು ಮುಂದೆ ಮುಂದೆ ನಿಂತು ಹೊಡೆದಾಡಿದವರಲ್ಲ, ಅವರದ್ದು ಒಳಗಿನ ಆಟ. ಇನ್ನು ಕೇರಳದವರು ತಮಿಳರ ಸಾಮಂತ ಜನರಾಗಿದ್ದವರು.

ರಾಜಕೀಯವಾಗಿ ಇಂಥಾ ವಿಷಣ್ಣ ಭೂಭಾಗವನ್ನು ಹೊಂದಿ, ಇವರನ್ನೆಲ್ಲಾ ಸವರಿಸಿಕೊಂಡು, ಈ ಮಧ್ಯೆ ಡೆಲ್ಲಿ, ಲಂಡನ್ನುಗಳಿಗೂ ಎದೆ ಕೊಟ್ಟು, ತಲೆ ಕೊಟ್ಟು ಅದೆಷ್ಟು ಸವೆದಿದ್ದೇವೆ ನಾವು ಕನ್ನಡಿಗರು! ಆಗಾಗ ಈ ನೋವು ತಾಳಲಾರದೇ ಏಳುತ್ತೇವೆ, ಎದ್ದಾಗ ಓಹ್ ಜಗಳಗಂಟರು, ಯಾರ ಜೊತೆಯೂ ಸೌಹಾರ್ದವಿಲ್ಲ ಇವರಿಗೆ ಎಂಬಂಥ ನರೇಟಿವ್.

Related posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

July 3, 2026
ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

July 3, 2026

ನಾವು ಹುಟ್ಟಿದ ನಾಡು ಎಂಬ ಭಾವನಾತ್ಮಕ ನಿಲುವು ಬಿಡಿ, ತಾರ್ಕಿಕವಾಗಿ ನಾವು ಈ ಸುತ್ತಲಿನವರಿಂದ ತೆಗೆದುಕೊಂಡದ್ದಕ್ಕಿಂತ ಕೊಟ್ಟದ್ದೇ ಹೆಚ್ಚು. ಅವರ ಮುಖಗಳಲ್ಲಿ ಎಂದಾದರು ಒಮ್ಮೆ ಆ ಋಣಭಾರ ಕಂಡಿದೆಯಾ? ಭಾಷೆಯ ವಿಚಾರದಲ್ಲಿ ಸಂಸ್ಕೃತವನ್ನು ಒಪ್ಪಿಕೊಂಡದ್ದಿದೆ, ತಮಿಳನ್ನು ಒಪ್ಪಿಕೊಂಡದ್ದಿದೆ, ಪ್ರಾಕೃತವನ್ನು ಬಿಟ್ಟುಕೊಂಡದ್ದಿದೆ, ಹೊಸ ಭಾಷೆಗಳನ್ನು ಕೊಡುತ್ತಾ ಬಂದದ್ದಿದೆ, ನೆರೆ ಭಾಷೆಗಳಿಗೆ ಬೆನ್ನು ಕೊಟ್ಟದ್ದು ಇದೆ. ಯಾವುದೂ ಬೇಡವೆನ್ನದ, ಎಲ್ಲವನ್ನೂ ಒಳಗೊಂಡ ಏಕೈಕ ರಾಜ್ಯ ಭಾರತದಲ್ಲಿದೆ/ಭರತ ವರ್ಷದಲ್ಲಿದೆ ಎಂದರೆ ಅದು ಕರ್ನಾಟಕ. ಬಾಂಬೆಯನ್ನು ಈ ವಿಚಾರವಾಗಿ ಹೊಗಳುವ ಕೊಂಕಣ ಸಾಹಿತಿಯನ್ನು ಕಂಡಿದ್ದೇವೆ. ಕೊಂಕಣರೇ ನಿಮಗೆ ಪೋರ್ಚುಗೀಸರು ಬಡಿದಾಗ ನೆಲ ಕೊಟ್ಟದ್ದು ಈ ಕನ್ನಡ ಭೂಮಿ ಎಂಬುದು ಮರೆಯಬೇಡಿರಯ್ಯಾ.

ಅಸಲಿಗೆ ಕೊಂಕಣದಲ್ಲೇ ಕನ್ನಡದ ಮೂಲಸ್ರೋತವಿದೆ. ಹೌದು ನಾವು ಜಗಳಗಂಟರು, ಮಿರ್ಜಾ ಇಸ್ಮಾಯಿಲ್ಲರೇ ಶಿವಾಜಿ ಪ್ರತಿಮೆ ಜೆಸಿ ರೋಡಲ್ಲಿ ಅನಾವರಣ ಮಾಡಿದಾಗ ಚಪ್ಪಾಳೆ ಹೊಡೆದವರು, ಬಿಳೇಕಳ್ಳಿಯನ್ನು, ಬ್ರಿಟಿಷರು ಬ್ಲಾಕ್ ಪಲ್ಲಿ ಎಂದು, ನಂತರ ಕಾಂಗ್ರೆಸ್ಸಿಗರೇ ಅದಕ್ಕೆ ಶಿವಾಜಿ ನಗರ ಎಂದು ನಾಮಕರಣ ಮಾಡಿದಾಗ, ಇಲ್ಲಿರುವ ಮರಾಠರನ್ನು ತಬ್ಬಿ “ಇರಲಿ ಬಿಡಯ್ಯಾ ಹೇಗಿದ್ದರೂ ಶಿವಾಜಿ ಬೆಂಗಳೂರಿಗೆ ಬಂದಿದ್ದನಲ್ಲ, ಒಂದು ನಂಟು ಇರಲಿ” ಎಂದವರು, ಹೌದು ನಾವು ಜಗಳಗಂಟರು!

ಲೇಖನ:- ಕರಣಂ ಪವನ್ ಪ್ರಸಾದ್
ಖ್ಯಾತ ನಾಟಕಕಾರ, ಕಾದಂಬರಿಕಾರ

Tags: #saakshatv.comKaranam Pawan Prasadಕರಣಂ ಪವನ್ ಪ್ರಸಾದ್ನಾವು ಕನ್ನಡಿಗರು
ShareTweetSendShare
Join us on:

Related Posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

by Shwetha
July 3, 2026
0

ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಯೂಟರ್ನ್ ತೆಗೆದುಕೊಂಡಿದ್ದಾರೆ. ಗ್ರೇಟರ್ ಬೆಂಗಳೂರು...

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

by Shwetha
July 3, 2026
0

ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಮಾತ್ರ ಹಿಂದೂ ವಿವಾಹವು ಕಾನೂನುಬದ್ಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆ‌ರ್.ಟಿ. ವಚ್ಛಾನಿ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು: ಲೇಔಟ್ ರಸ್ತೆಗಳ ಮೇಲೆ ಖಾಸಗಿ ಹಕ್ಕಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

by Shwetha
July 3, 2026
0

ಬೆಂಗಳೂರು: ರಾಜ್ಯದ ರಿಯಲ್ ಎಸ್ಟೇಟ್ ಮತ್ತು ನಗರ ಪ್ರದೇಶದ ಪಾದಚಾರಿ ಹಿತದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇನ್ಮುಂದೆ ಖಾಸಗಿ...

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

by Shwetha
July 3, 2026
0

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಮಹತ್ವದ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ವಿಧಾನಸಭೆಯ ಸ್ಪೀಕರ್ ವಿರುದ್ಧದ ಅವಿಶ್ವಾಸ...

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram