ಬೆಂಗಳೂರು: ರಾಜಕೀಯ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಮತ್ತೊಮ್ಮೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ನಾಲ್ಕು ದಿನ ಬಾಕಿಯಿದ್ದು, ಪ್ರಚಾರ ಬಿರುಸುಗೊಂಡಿದೆ. ಈ ಸಂದರ್ಭದಲ್ಲಿಯೇ ಶಾ ಆಗಮಿಸುತ್ತಿದ್ದಾರೆ.
ಮೊದಲ ಹಂತದ ಚುನಾವಣೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಮೈತ್ರಿ ನಾಯಕರು ಕೂಡ ಹಿಂದೆ ಬಿದ್ದಿಲ್ಲ. ಇದರ ನಡುವೆ ರಾಜ್ಯದ ಎರಡನೇ ಹಂತದ ಕ್ಷೇತ್ರಗಳತ್ತ ಅಮಿತ್ ಶಾ ಮುಖ ಮಾಡಿದ್ದಾರೆ.
ಈಗ ಬಿಜೆಪಿಯು 2ನೇ ಹಂತದ ಪ್ರಚಾರಕ್ಕೆ ನೇಹಾ ಹಿರೇಮಠ್ ಪ್ರಕರಣವನ್ನೇ ಬೂಸ್ಟ್ ಮಾಡಿಕೊಂಡಂತಿದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದಲೇ ಚಾಣಕ್ಯ ಕ್ಯಾಂಪೇನ್ ಆರಂಭಿಸಲಿದ್ದಾರೆ. ಹಳೇ ಮೈಸೂರು ನಂತರ ಈಗ ಉತ್ತರ ಕರ್ನಾಟಕ ಹಾಟ್ ಟಾರ್ಗೆಟ್, ಉತ್ತರ ಕ್ಷೇತ್ರಗಳ ಪಿಚ್ ರಿಪೋರ್ಟ್ ತರಿಸಿಕೊಂಡಿರುವ ಅಮಿತ್ ಶಾ ಅಲ್ಲಿ ಮತಬೇಟೆ ಆರಂಭಿಸಲಿದ್ದಾರೆ.
ಮಂಗಳವಾರ ಇಡೀ ದಿನ ರಾಜಧಾನಿಯಲ್ಲಿ ಅಮಿತ್ ಶಾ ನಾಲ್ಕು ರೋಡ್ ಶೋ ನಡೆಸಲಿದ್ದಾರೆ. ಬುಧವಾರ ಉಡುಪಿ-ಚಿಕ್ಕಮಗಳೂರು, ತುಮಕೂರು, ಹುಬ್ಬಳ್ಳಿ ಧಾರವಾಡದಲ್ಲಿ ಪ್ರಚಾರ ಮಾಡಲಿದ್ದಾರೆ. ಅಲ್ಲದೇ ಬುಧವಾ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿ ಉತ್ತರ ಕ್ಷೇತ್ರಗಳತ್ತ ಅಮಿತ್ ಶಾ ತಂತ್ರ ಹೆಣೆಯಲಿದ್ದಾರೆ. ಅಲ್ಲದೇ, ಉತ್ತರ ಕರ್ನಾಟಕದ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಕೂಡ ಇದೆ.