ಅವಕಾಶ ಸಿಕ್ಕರೇ ಬಿಗ್ ಬಾಸ್ ಗೆ ಹೋಗ್ತೀನಿ : ದೊಡ್ಮನೆ ಸೇರಲು `ಹಳ್ಳಿಹಕ್ಕಿ’ ರೆಡಿ
ಬೆಂಗಳೂರು : ಅವಕಾಶ ಸಿಕ್ಕರೇ ಖಂಡಿತವಾಗಿಯೂ ನಾನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಅಂತಾ ಎಂಎಲ್ ಸಿ ಹೆಚ್.ವಿಶ್ವನಾಥ್ ದೊಡ್ಮನೆ ಸೇರುವ ಆಸೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಭಾಗಿ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ಅವಕಾಶ ಸಿಕ್ಕರೇ ಖಂಡಿತ ನಾನು ಬಿಗ್ ಬಾಸ್ ಗೆ ಹೋಗುತ್ತೇನೆ.
ಬಿಗ್ ಬಾಸ್ ಮನೆಗೆ ಹೋಗಲು ನಾನು ಆಸೆಪಟ್ಟಿದ್ದೇನೆ. ನನ್ನ ಅಭಿಮಾನಿಗಳು ಕೂಡ ಇದನ್ನೇ ಒತ್ತಾಯಿಸುತ್ತಿದ್ದಾರೆ.
ಇಂದು ವೇಳೆ ಕಾರ್ಯಕ್ರಮದ ಆಯೋಜಕರಿಂದ ವಿಶೇಷ ಆಹ್ವಾನ ಬಂದ್ರೆ ಬಿಗ್ ಬಾಸ್ ಮನೆಗೆ ನಾಲ್ಕೈದು ದಿನಗಳ ಮಟ್ಟಿಗೆ ಸ್ಪೆಷಲ್ ಗೆಸ್ಟ್ ರೀತಿಯಾಗಿ ಹೋಗುತ್ತೇನೆ ಅಂತಾ ಹೇಳುವ ಮೂಲಕ ದೊಡ್ಮನೆಗೆ ಎಂಟ್ರಿ ಕೊಡುವ ಆಸೆ ವ್ಯಕ್ತಪಡಿಸಿದರು.
ಬಿಗ್ ಬಾಸ್ ಸೀಸನ್ 6ಕ್ಕೆ ಪರಮೇಶ್ವರ್ ಗುಂಡ್ಕಲ್ ಅವರು ನನ್ನ ಆಹ್ವಾಸಿನಿಸಿದ್ದರು. ಆಗ ನನಗೆ ಅನಾರೋಗ್ಯದ ಕಾರಣದಿಂದಾಗಿ ಹೋಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಹೆಚ್ ವಿಶ್ವನಾಥ್,
ಒಂದು ವೇಳೆ ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋದರೇ ಅಲ್ಲಿ ರಾಜಕಾರಣದ ಸ್ಪಾರ್ಕ್ ಹೊತ್ತಿಸುತ್ತೇನೆ. ಅವಕಾಶ ಸಿಕ್ಕರೇ ಖಂಡಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಪುನರುಚ್ಚರಿಸಿದರು.+