ಐ ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ – ಅರ್ಜುನ್ ಸರ್ಜಾ
ಬೆಂಗಳೂರು, ಜೂನ್ 10 : ಮೊನ್ನೆಯಷ್ಟೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಅವರ ಕುಟುಂಬ ವರ್ಗಕ್ಕೆ, ಸ್ನೇಹಿತರಿಗೆ ಅಭಿಮಾನಿಗಳಿಗೆ ಇನ್ನೂ ಕೂಡ ಸಾಧ್ಯವಾಗುತ್ತಿಲ್ಲ. ಚಿರು ಸರ್ಜಾ ಅವರ ಸೋದರ ಮಾವ ಅರ್ಜುನ್ ಸರ್ಜಾ, ಆಳಿಯನ ಸಾವಿನ ಸುದ್ದಿ ಕೇಳಿದ ನಂತರ ತಮ್ಮ ಫೇಸ್ಬುಕ್ ಪ್ರೊಫೈಲ್ಗೆ ಕಪ್ಪು ಬಣ್ಣ ಹಾಕುವ ಮೂಲಕ ದುಃಖವನ್ನು ವ್ಯಕ್ತಪಡಿಸಿದ್ದರು.
ಮುದ್ದಿನ ಸೋದರ ಆಳಿಯನ ಸಾವಿನ ಅಘಾತದಿಂದ ಇನ್ನೂ ಹೊರಬಾರದ ಅರ್ಜುನ್ ಸರ್ಜಾ ವಿಧಿಯ ಮೇಲೆ ತಮಗಿರುವ ಆಕ್ರೋಶವನ್ನು ಫೇಸ್ಬುಕ್ ನಲ್ಲಿ ಹೊರಹಾಕಿದ್ದಾರೆ. ಚಿರಂಜೀವಿ ಸರ್ಜಾ ಅವರ ಜೊತೆಗಿರುವ ಪೋಟೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಅರ್ಜುನ್ ಸರ್ಜಾ ಐ ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ ಎಂದು ಬರೆದು ಕೊಂಡಿದ್ದಾರೆ. ಆ ನಾಲ್ಕು ಸಾಲಿನ ಬರಹದಲ್ಲಿ ಅರ್ಜುನ್ ಸರ್ಜಾ ತಮ್ಮ ಮನಸ್ಸಿನಲ್ಲಿ
ಮಡುಗಟ್ಟಿರುವ ದುಃಖ, ವಿಧಿಯ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮೊದಲು ಹಾಕಿದ್ದ ಕಪ್ಪು ಬಣ್ಣದ ಪ್ರೊಫೈಲ್ ಬದಲಾಯಿಸಿ ಗುದ್ದಾಟಕ್ಕೆ ಸಿದ್ಧವಾಗಿರುವ ಫೋಟೋವನ್ನು ಹಾಕಿದ್ದಾರೆ.