ರಾಯಚೂರು: ಕೃಷ್ಣಾ ನದಿಯಲ್ಲಿ ವೆಂಕಟೇಶ್ವರ ಹಾಗೂ ಶಿವಲಿಂಗ ಮೂರ್ತಿ ಪತ್ತೆಯಾಗಿವೆ.
ಜಿಲ್ಲೆಯ ದೇವಸುಗೂರು (Devarsugur) ಹತ್ತಿರದ ಕೃಷ್ಣಾ ನದಿಯಲ್ಲಿ (Krishna River) ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು (Idols) ಹಾಗೂ ಶಿವಲಿಂಗ ಪತ್ತೆಯಾಗಿದೆ. ವೆಂಕಟೇಶ್ವರನ ಮೂರ್ತಿ ಅಯೋಧ್ಯೆ (Ayodhya) ಬಾಲರಾಮನ (BalaRama) ವಿನ್ಯಾಸ ಹೊಂದಿಗೆ ಎನ್ನಲಾಗಿದೆ.
ಬತ್ತಿದ್ದ ನೀರಿನಲ್ಲಿಯೇ ಮೀನುಗಾರರು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಈ ಮೂರ್ತಿಗಳು ಪತ್ತೆಯಾಗಿವೆ. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿವೆ ಎನ್ನಲಾಗಿದೆ. ಒಟ್ಟು ಮೂರು ಮೂರ್ತಿಗಳು ಸಿಕ್ಕಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿವೆ. ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿ ಅಯೋಧ್ಯ ಬಾಲರಾಮನ ವಿನ್ಯಾಸ ಹೊಂದಿದೆ. ವಿಷ್ಣುವಿನ (Vishnu) ದಶವತಾರವನ್ನು ಅದರಲ್ಲಿ ಕೆತ್ತಲಾಗಿದೆ. ಇವು ಸಾವಿರಾರು ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ವಿಷ್ಣು ಮೂರ್ತಿಯನ್ನು ಸದ್ಯ ನದಿ ಪಕ್ಕದ ಕನಕಾದುರ್ಗ ದೇವಾಲಯ ಕಟ್ಟೆ ಮೇಲೆ ಇಡಲಾಗಿದ್ದು, ಪೂಜೆ ಸಲ್ಲಿಸಲಾಗುತ್ತಿದೆ. ಉಳಿದ ಎರಡು ನದಿ ದಂಡೆಯಲ್ಲಿಯೇ ಇವೆ.