ಪುರುಷನ ಜೀವನ ವಿವಾಹವಾಗುವವರೆಗಷ್ಟೇ, ಅವನ ಪಾಪ ಪುಣ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೇ ವಿವಾಹವಾದ ಬಳಿಕ, ಪತ್ನಿ ಮಾಡಿದ ಪಾಪ ಪುಣ್ಯಗಳಲ್ಲಿ ಅವನೂ ಭಾಗಿಯಾಗುತ್ತಾನೆ. ಏಕೆಂದರೆ, ಸಪ್ತಪದಿ ತುಳಿದ ಬಳಿಕ, ದೇಹವೆರಡು ಜೀವವೊಂದು ಅನ್ನೋ ರೀತಿ ಇರುತ್ತದೆ.
ಹಾಗಾದ್ರೆ ಪತಿಯು ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಪತಿವ್ರತೆ (ಕುಲವಧು) ಪದವು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ತನ್ನ ಪತಿಗೆ ನಿಷ್ಠಾವಂತ ಹಾಗೂ ಪ್ರಾಮಾಣಿಕಳಾದ ವಿವಾಹಿತ ಮಹಿಳೆಯನ್ನು ಸೂಚಿಸಲು ಬಳಸಲಾಗುವ ಪದವಾಗಿದೆ. ಪತಿವ್ರತೆ ಪದದ ಅರ್ಥ ಅಕ್ಷರಶಃ ತನ್ನ ಪತಿಗೆ ತನ್ನ ಭಕ್ತಿ ಮತ್ತು ರಕ್ಷಣೆಯ ವ್ರತ ಮಾಡಿದವಳು ಎಂದು. ಹೆಂಡತಿಯು ತನ್ನನ್ನು ತನ್ನ ಪತಿಗೆ ಅರ್ಪಿಸಿಕೊಂಡರೆ ಮತ್ತು ಅವನನ್ನು ರಕ್ಷಿಸಿದರೆ, ಅವನು ಏಳಿಗೆಯಾಗಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾನೆ ಎಂಬುದು ನಂಬಿಕೆಯಾಗಿದೆ. ಇಲ್ಲವಾದರೆ, ದುರಾದೃಷ್ಟ ಮತ್ತು ಮರಣವಾಗಬಹುದು. ಪತಿವ್ರತೆಯು ತನ್ನ ಪತಿಯನ್ನು ಎರಡು ರೀತಿಗಳಲ್ಲಿ ರಕ್ಷಿಸುತ್ತಾಳೆ. ಮೊದಲನೆಯದಾಗಿ, ಅವಳು ಅವನ ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಾಳೆ ಮತ್ತು ಅವನು ತನ್ನ ಕರ್ತವ್ಯವನ್ನು (ಧರ್ಮ) ಮಾಡುವಂತೆ ಪ್ರೋತ್ಸಾಹಿಸುತ್ತಾಳೆ. ಎರಡನೆಯದಾಗಿ, ದೇವತೆಗಳು ಹಾನಿಯಿಂದ ತನ್ನ ಪತಿಯನ್ನು ರಕ್ಷಿಸುವರು ಮತ್ತು ಅವನಿಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವರು ಎಂಬ ಭರವಸೆಯಿಂದ, ದೇವತೆಗಳನ್ನು ಸಂತೋಷಗೊಳಿಸಲು ಅವಳು ವಿವಿಧ ಕ್ರಿಯಾವಿಧಿಗಳು ಮತ್ತು ಉಪವಾಸಗಳನ್ನು ಕೈಗೊಳ್ಳುತ್ತಾಳೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೊದಲನೇಯದಾಗಿ ಪತ್ನಿಯಾದವಳು ಪ್ರತಿದಿನ ತುಳಸಿ ಪೂಜೆ ಮಾಡಬೇಕು. ಕನ್ಯೆಯಾಗಿದ್ದಾಗ, ಯಾರು ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೋ, ಅಂಥವರಿಗೆ ಆರೋಗ್ಯವಾಗಿರುವ, ಉತ್ತಮವಾಗಿರುವ ವರ ಸಿಗುತ್ತಾನೆಂಬ ನಂಬಿಕೆ ಇದೆ. ಅದೇ ರೀತಿ ವಿವಾಹವಾದ ಬಳಿಕವೂ, ಅದೇ ಭಕ್ತಿಯಿಂದ ನೀವು ಪ್ರತಿದಿನ ತುಳಸಿ ದೇವಿಗೆ ಪೂಜಿಸಿ ನೀರೆರೆದರೆ, ಪತಿಯ ಆರೋಗ್ಯ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನವೂ ಉತ್ತಮವಾಗಿರುತ್ತದೆ.
ಎರಡನೇಯದಾಗಿ ಮನೆಯನ್ನು ಸದಾ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಅದರಲ್ಲೂ ಮೊದಲನೇಯದಾಗಿ ಅವಳು ಹೆಚ್ಚಾಗಿ ಸಮಯ ಕಳೆಯುವ ಅಡುಗೆ ಮನೆ ಕ್ಲೀನ್ ಆಗಿರಬೇಕು. ಬಳಿಕ ದೇವರ ಕೋಣೆ ಸ್ವಚ್ಛವಾಗಿರಿಸಬೇಕು. ಅಂಗಳ, ರೂಮ್ ಎಲ್ಲವೂ ಕ್ಲೀನ್ ಆಗಿರಬೇಕು. ಆಗ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ಮತ್ತು ಸ್ವಚ್ಛತೆ ಇರುವ ಜಾಗದಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ.
ಮೂರನೇಯದಾಗಿ ಅಡುಗೆ ಮಾಡುವಾಗ, ಒಳ್ಳೆಯ ಮನಸ್ಸಿನಿಂದ ಅಡುಗೆ ಮಾಡಬೇಕು. ಏಕೆಂದರೆ, ನಮ್ಮ ಮನಸ್ಸು ಉತ್ತಮವಾಗಿದ್ದಾಗ, ಅಡುಗೆ ರುಚಿಯಾಗಿ, ಆರೋಗ್ಯಕರವಾಗಿ ಇರುತ್ತದೆ. ಅದೇ ಕೋಪದಲ್ಲಿ, ಅಸೂಯೆಯಲ್ಲಿ ಅಡುಗೆ ಮಾಡಿದಾಗ, ಅಡುಗೆ ರುಚಿಸುವುದಿಲ್ಲ. ಅಂಥ ಊಟ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಮನಸ್ಸಿನ ನೆಮ್ಮದಿಯನ್ನೂ ಹಾಳು ಮಾಡುತ್ತದೆ.
ನಾಲ್ಕನೇಯದಾಗಿ ಮುಸ್ಸಂಜೆ ಹೊತ್ತಿಗೆ ಮನೆ ಸ್ವಚ್ಛ ಮಾಡಿ, ಕೈ ಕಾಲು ತೊಳೆದು, ದೇವರಿಗೆ ದೀಪ ಹಚ್ಚಿಸಿ, ಮನೆಯ ಒಳಿತಿಗಾಗಿ ಪ್ರಾರ್ಥಿಸಬೇಕು. ಮನೆದೇವರು, ಇಷ್ಟ ದೇವರು ಎಲ್ಲರಿಗೂ ಪೂಜಿಸಿ ಪ್ರಾರ್ಥಿಸಬೇಕು. ವರ್ಷಕ್ಕೊಮ್ಮೆಯಾದರೂ, ಕುಲದೇವರ ದರ್ಶನಕ್ಕೆ ಹೋಗಬೇಕು.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍