ರಾಜಸ್ಥಾನ, ಮೇ 18 : ವಲಸೆ ಕಾರ್ಮಿಕನೊಬ್ಬ ವಿಕಲಾಂಗ ಮಗನನ್ನು ಕರೆದೊಯ್ಯಲು ಸೈಕಲ್ ಕದ್ದು, ಜತೆಗೆ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟ ಮನಮಿಡಿಯುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಭಾರತ್ ಪುರದಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದ ಮೊಹ್ಮದ್ ಇಕ್ಬಾಲ್ ಖಾನ್ ಗೆ ತನ್ನ ವಿಕಲಾಂಗ ಮಗನನ್ನು ಹುಟ್ಟೂರು ಉತ್ತರ ಪ್ರದೇಶದ ಬರೈಲಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಆತನಲ್ಲಿ ಪಯಣಿಸಲು ಚಿಕ್ಕಾಸು ಇಲ್ಲದ ಕಾರಣ ಭಾರತ್ ಪುರದ ಸಾಹೀಬ್ ಸಿಂಗ್ ಎಂಬುವರ ಸೈಕಲ್ ಕದ್ದು , ಅವರಿಗೊಂದು ಪತ್ರವನ್ನು ಬರೆದು ತೆರಳಿದ. ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಸೈಕಲ್ ಕದಿಯುತ್ತಿದ್ದೇನೆ. ನನ್ನ ಮಗ ವಿಕಲಾಂಗನಾಗಿದ್ದು, ಆತ ಒಂದು ಹೆಜ್ಜೆಯನ್ನು ಇಡಲಾರ. ನಾವು ಬರೈಲಿಗೆ ಹೋಗಬೇಕಿದೆ ಎಂದು ಪತ್ರದಲ್ಲಿ ಬರೆದಿದ್ದು, ಪತ್ರವನ್ನು ಓದಿದ ಸೈಕಲ್ ಮಾಲೀಕ ಸಾಹೀಬ್ ಸಿಂಗ್ ರ ಮನಸ್ಸು ಕರಗಿ, ಪೊಲೀಸರಿಗೆ ದೂರು ಕೊಡದೆ ಇಕ್ಬಾಲ್ ಖಾನ್ ನನ್ನು ಕ್ಷಮಿಸಿದ್ದಾರೆ.
‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...








