ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇನ್ ಕಮ್ ಟ್ಯಾಕ್ಸ್ ವಿಧಿಸದೇ ಇರುವ ದೇಶಗಳ ಬಗ್ಗೆ ನಿಮಗೆ ಗೊತ್ತಿದ್ಯಾ…! ಟ್ಯಾಕ್ಸ್ ಫ್ರೀ ದೇಶಗಳಿವು..!

Namratha Rao by Namratha Rao
January 12, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಇನ್ ಕಮ್ ಟ್ಯಾಕ್ಸ್ ವಿಧಿಸದೇ ಇರುವ ದೇಶಗಳ ಬಗ್ಗೆ ನಿಮಗೆ ಗೊತ್ತಿದ್ಯಾ…! ಟ್ಯಾಕ್ಸ್ ಫ್ರೀ ದೇಶಗಳು ಯಾವ್ಯಾವು…!

ಇಂದು ಇಡೀ ವಿಶ್ವಾದ್ಯಂತ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ತೆರಿಗೆ ಪಾವತಿ ಇದ್ದೇ ಇದೆ.. ಪ್ರತಿ ಹಂತದಲ್ಲೂ  ಪ್ರತಿ ಸಣ್ಣ ಪುಟ್ಟ ವಸ್ತುಗಳ ಮೇಲೂ ಟ್ಯಾಕ್ಸ್ ಕಟ್ಟಲೇಬೇಕು. ನಮ್ಮ ದೈನಂದಿನ ಜೀವನದಲ್ಲಿ ನಾವೂ ಏನೇ ಖರೀದಿಸಿದ್ರೂ, ಏನೇ ಮಾರಾಟ ಮಾಡಿದ್ರೂ, ಸೇವೆಗಳ ಮೇಲೂ, ಆಸ್ತಿ ಪಾಸ್ತಿ ಎಲ್ಲದರಲ್ಲೂ ಟ್ಯಾಕ್ಸ್ ಕಟ್ಟೇ ಕಟ್ತೀವಿ. ಇನ್ ಕಮ್ ಟ್ಯಾಕ್ಸ್ ಪಾವತಿಸೋದೆ ಹಲವರಿಗೆ ದೊಡ್ಡ ತಲೆನೋವಾಗಿರುತ್ತೆ. ಅನೇಕ ವಂಚಕರು ತೆರಿಗೆ ಕಟ್ಟದೇ ದೇಶಕ್ಕೆ ಕನ್ನ ಹಾಕಿರೋದನ್ನ ನೋಡಿದ್ದೇವೆ.. ಹಾಗೆ ನೋಡೋದಾದ್ರೆ ದೇಶದ ಆರ್ಥಿಕತೆಯ ಪ್ರಮುಖ , ಬಹುಮುಖ್ಯ ಮೂಲವೇ ಟ್ಯಾಕ್ಸ್.

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

ನಿಮಗೆ ಗೊತ್ತಾ ಅತಿ ಹೆಚ್ಚು ಟ್ಯಾಕ್ಸ್  ಸಂಗ್ರಹಿಸಿದ ದೇಶದಲ್ಲಿ 2019ರಲ್ಲಿ ಮೊದಲನೇ ಸ್ಥಾನವನ್ನ ಸ್ವೀಡನ್ ಪಡೆದುಕೊಂಡಿತ್ತು. ಆದ್ರೆ ವಿಶ್ವದಲ್ಲಿ ಇನ್ ಕಮ್ ಟ್ಯಾಕ್ಸ್ ವಿಧಿಸದ ಅನೇಕ ರಾಷ್ಟ್ರಗಳಿವೆ ಅನ್ನೋದು ನಿಮಗೆ ಗೊತ್ತಾ… ಇಂತಹ ರಾಷ್ಟ್ರಗಳು ಜಿಜವಾಗಲೂ ಇದ್ಯಾ ಅಂತ ನಿಮಗೆ ಆಶ್ಚರ್ಯ ಆಗುತ್ತೆ….  ಆದ್ರೆ ಇದು ನಿಜ ಟ್ಯಾಕ್ಸ್ ಗೆ ವಿಧಿಸದ 7 ರಾಷ್ಟ್ರಗಳು ಜಗತ್ತಿನಲ್ಲಿವೆ… ಹಾಗಾದ್ರೆ ಯಾವು ಆ ರಾಷ್ಟ್ರಗಳು ತೆರಿಗೆ ವಿಧಿಸದೇ ಇರೋದಕ್ಕೆ ಮುಖ್ಯ ಕಾರಣ ಏನು ಅನ್ನೋದನ್ನ ನೋಡೋಣ.

ತೆರಿಗೆ ಪಾವತಿ ದೇಶದ ಆರ್ಥಿಕತೆಗೆ ಬೇಕೇ ಬೇಕಾದ ಅವಿಭಾಜ್ಯ ಅಂಗ ಅಂತಲೇ ಹೇಳಬಹುದು.. ಆದ್ರೆ ಕೆಲವೊಮ್ಮೆ ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಸಾಕು ಆ ದೇಶದ ಆರ್ಥಿಕತೆಗೆ ಶ್ರೀಮಂತಿಕೆಗೆ. ಸರ್ಕಾರ ನಡೆಸೋಕೆ.. ಹೌದು ಅಂತಹ ಸಂಪನ್ಮೂಲಗಳ ಪೈಕಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ.

ಚಾಮುಂಡೇಶ್ವರೀ ಅಮ್ಮನವರನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..!!

ಇನ್ ಕಮ್ ಟ್ಯಾಕ್ಸ್ ವಿಧಿಸದ 7 ರಾಷ್ಟ್ರಗಳು

ಅರಬ್ ( UAE) : ಅರಬ್ ರಾಷ್ಟ್ರದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೇನು ಕೊರತೆಯೇ ಇಲ್ಲ. ಪೆಟ್ರೋಲ್, ಡೀಸೆಲ್, ಖನಿಜಗಳು, ನೈಸರ್ಗಿಕ ಅನಿಲ ಅರಬ್ ನಲ್ಲಿ ಹೇರಳವಾಗಿ ಸಿಗುತ್ತೆ. ಜಗತ್ತಿನಾದ್ಯಂತ ರಫ್ತು ಮಾಡುವ ಅಗ್ರ ರಾಷ್ಟ್ರ ಕೂಡ ಹೌದು.. ಈ ರಾಷ್ಟ್ರದಲ್ಲಿ ಜನರಿಗೆ ತೆರಿಗೆ ಪಾವತಿಸುವ ತಲೆನೋವಿಲ್ಲ. ಈ ದೇಶದಲ್ಲಿ ಸದ್ಯ ಸಾರ್ವಜನಿಕರಿಗೆ ಝೀರೋ ಟ್ಯಾಕ್ಸ್ ವ್ಯವಸ್ಥೆಯಿದೆ. ಆದ್ರೆ ಕೇವಲ ಪೆಟ್ರೋಲ್  ಅನಿಲ ಕಂಪನಿಗಳು ಹಾಗೂ ವಿದೇಶಿ ಬ್ಯಾಂಕ್ ಗಳು ತೆರಿಗೆ ಪಾವತಿಸಬೇಕು.. ಅವುಗಳಿಗೆ ಮಾತ್ರವೇ ಟ್ಯಾಕ್ಸ್ ವಿಧಿಸಲಾಗುತ್ತೆ. ಉಳಿದೆಲ್ಲಾ ಇಂಡಸ್ಟ್ರಿಗಳು ತೆರಿಗೆ ಮುಕ್ತವಾಗಿವೆ. ಇನ್ನೂ  ಬೆರಳೆಣಿಕೆಯಷ್ಟು ಸರಕು ಮತ್ತು ಸೇವೆಗಳಿಗೆ ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ, ಅಲ್ಲಿ 2018 ರಿಂದ ಹೆಚ್ಚಿನ ಸರಕುಗಳ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸಲಾಗುತ್ತದೆ.

ಬಹಮಾಸ್ : ವಯಕ್ತಿಕ ಅಥವ ವ್ಯಾವಹಾರಿಕ, ಕಾರ್ಪರೇಟ್ ಟ್ಯಾಕ್ಸ್ ಅನ್ನ ಈ ದೇಶದಲ್ಲಿ ವಿಧಿಸಲಾಗಿಲ್ಲ.

ಸ್ಥಳೀಯವಾಗಿ ಆದಾಯವನ್ನು ಪಡೆದರೆ ಮಾತ್ರ ಬಹಾಮಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ವಿಧಿಸಲಾಗುತ್ತದೆ. ಸ್ಥಳೀಯವಾಗಿ ಆದಾಯವನ್ನು ಪಡೆದರೆ ಮಾತ್ರ ಬಹಾಮಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಮುಕ್ತವಾಗಿರುವ ಇತರ ಕ್ಷೇತ್ರಗಳಲ್ಲಿ ಸಂಪತ್ತು, ಆನುವಂಶಿಕತೆ ಮತ್ತು ಬಂಡವಾಳ ಲಾಭಗಳು ಸೇರಿವೆ. ತೆರಿಗೆ ಮುಕ್ತ ಆದಾಯದ ಪ್ರಯೋಜನಗಳನ್ನು ದೇಶದ ನಿವಾಸಿಗಳು ಪೌರತ್ವವನ್ನು ಹೊಂದದೆಯೇ  ಪಡೆಯಬಹುದಾಗಿದೆ.

ಒಮನ್ : ಗಲ್ಫ್ ರಾಷ್ಟ್ರ ಒಮನ್  ನಲ್ಲಿ ರೆಸಿಡೆನ್ಸಿಯಲ್, ನಾನ್ ರೆಸಿಡೆನ್ಸಿಯಲ್ ಅಥವ ವಯಯಕ್ತಿವಾಗಿ ಯಾವುದೇ ತೆರಿಗೆ ವಿಧಿಸಲಾಗಿಲ್ಲ. ಈ ದೇಶವೂ ಸಂಪೂರ್ಣ ಟ್ಯಾಕ್ಸ್ ಫ್ರೀಯಾಗಿದೆ. ಆದ್ರೆ ವ್ಯಾಪರಿಗಳು ತಮ್ಮ ಆದಾಯದ ಮೇಲೆ ಶೇ 15 ರಷ್ಟು ತೆರಿಗೆ ಕಟ್ಟಬೇಕಾಗುತ್ತೆ.. ಇನ್ನೂ ಅನಿಲ ಕಂಪನಿಗಳು ಶೇ. 55 ರಷ್ಟು ತೆರಿಗೆ ಪಾವತಿಸಬೇಕು.

ಮೊನಾಕೋ: ಈ ದೇಶದಲ್ಲಿ ಜನರ ಬಳಿ ವಯಕ್ತಿಕ ಹಾಗೂ ಆಸ್ತಿಗಳಿಗೆ ಟ್ಯಾಕ್ಸ್ ವಿಧಿಸಿಲ್ಲ… ಈ ದೇಶದಲ್ಲಿ 6 ತಿಂಗಳ ಮೇಲೆ ವಾಸವಾಗಿದ್ದರೆ ಅಲ್ಲಿನ ಪ್ರಜೆಯಾಗಿ ಪೌರತ್ವ ಪಡೆಯಬಹುದು.. ಬಳಿಕ ಟ್ಯಾಕ್ಸ್ ಫ್ರೀ ಸೌಲಭ್ಯ ಪಡೆಯಬಹುದಾಗಿದೆ. ಆದ್ರೆ ಕೆಲ ಇಂಡಸ್ಟರಿಗಳು ತಮ್ಮ ವಹಿವಾಟಿನಲ್ಲಿ ಶೇ 25 ರಷ್ಟು ಆದಾಯ ಗಳಿಸಿದ್ರೆ ಅಂತಹ ಸಂಸ್ಥೆಗಳಿಗೆ ಮಾತ್ರ ಟ್ಯಾಕ್ಸ್ ವಿಧಿಸಲಾಗುತ್ತೆ.

ಪನಾಮಾ:  ವಯಕ್ತಿಕ ಟ್ಯಾಕ್ಸ್ ಆಗಲಿ ಅಥವ ಸಂಸ್ಥೆಗಳ ಮೇಲೆ ಯಾವುದೇ ಟ್ಯಾಕ್ಸ್ ಗಳನ್ನ ಈ ದೇಶದಲ್ಲಿ ವಿಧಿಸಲಾಗಿಲ್ಲ. ಕಂಪನಿಗಳ ಮೇಲೆಯೂ ಝೀರೋ ತೆರಿಗೆ ವಿಧಿಸಲಾಗಿದೆ. ಸ್ಥಳೀಯವಾಗಿ ವ್ಯವಹಾರದಲ್ಲಿ ತೊಡಗಿರುವ ಕಡಲಾಚೆಯ ಕಂಪನಿಗಳು ಕನಿಷ್ಠ ಸ್ಥಳೀಯ ತೆರಿಗೆಗಳಿಗೆ ಒಳಪಟ್ಟಿರುತ್ತವೆ ಅಷ್ಟೇ…  ಕುವೈತ್‌ : ಕುವೈತ್‌ ನಲ್ಲಿ ವಾಸಿಸುವ ಯಾರಿಗಾದರೂ ಸಹ ಅವರ ರಾಷ್ಟ್ರೀಯತೆಯನ್ನು ಲೆಕ್ಕಿಸದೆ, ತೆರಿಗೆ ಮುಕ್ತ ವೈಯಕ್ತಿಕ ಆದಾಯದ ಸವಲತ್ತನ್ನ ನೀಡಲಾಗುತ್ತದೆ. ಇದರರ್ಥ ಕುವೈತ್‌ನ ತೆರಿಗೆ ಕಾನೂನು ನಿವಾಸಿ ಮತ್ತು ಅನಿವಾಸಿಗಳ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವುದಿಲ್ಲ. ಆದಾಗ್ಯೂ, ದೇಶದ ವಿದೇಶಿ ಕಾರ್ಪೊರೇಟ್‌ಗಳ ಮೇಲೆ ಕಾರ್ಪೊರೇಟ್ ತೆರಿಗೆ ವಿಧಿಸಲಾಗುತ್ತದೆ. ಈ ವಿದೇಶಿ ಕಂಪನಿಗಳು ತಮ್ಮ ಆದಾಯದ 15 ಪ್ರತಿಶತವನ್ನು ಕುವೈತ್ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

ಕತಾರ್ :  ಈ ಅರಬ್ ರಾಷ್ಟ್ರವು ವ್ಯಕ್ತಿಗಳಿಗೆ ತೆರಿಗೆ ಮುಕ್ತ ವೈಯಕ್ತಿಕ ಆದಾಯವನ್ನು ನೀಡುತ್ತದೆ. ಆದಾಗ್ಯೂ, ವಾಣಿಜ್ಯ ಚಟುವಟಿಕೆಯು ಕಂಪನಿಯ ತೆರಿಗೆಗೆ ಒಳಪಟ್ಟಿರುತ್ತದೆ, ಅದು ಕಂಪನಿಯ ಒಟ್ಟು ರಾಜ್ಯ ಆದಾಯದ ಶೇಕಡಾ 10 ರಷ್ಟನ್ನು ಹೊಂದಿರುತ್ತದೆ ಮತ್ತು ಇದನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ. ಬಾಡಿಗೆ ಆದಾಯದಿಂದ ಶೇಕಡಾ 10 ರಷ್ಟು ಸ್ಥಿರ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ಆದರ ತೆರಿಗೆ ಮುಕ್ತ ಪರಿಸರ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳು ಈ ದೇಶಕ್ಕೆ ಹಲವಾರು ವಲಸಿಗರನ್ನು ಆಕರ್ಷಿಸುತ್ತವೆ. ಆದಾಗ್ಯೂ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ನಿರ್ದಿಷ್ಟ ದೇಶಗಳ ವಲಸಿಗರು ಆಯಾ ಸರ್ಕಾರಗಳ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆಗೆ ಒಳಪಟ್ಟಿರುತ್ತಾರೆ.

ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಬರೆದಿಟ್ಟುಕೊಳ್ಳಿ ಕೆಜಿಎಫ್ – 2 ಕ್ಲೈಮಾಕ್ಸ್ ಇದೇ.. never before ever after

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: arab countriesincome tax freetax free countries in world
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram