IND vs SA: ಪಂದ್ಯದಲ್ಲಿ ಪಂತ್ ಇರಬೇಕಿತ್ತು – ಮ್ಯಾನೇಜ್ಮೆಂಟ್ ವಿರುದ್ಧ ಸೆಹ್ವಾಗ್ ಕಿಡಿ…
ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಐದು ವಿಕೆಟ್ಗಳ ಸೋಲನುಭವಿಸಿದೆ. ಗೆಲುವಿನ ನಂತರ, ದಕ್ಷಿಣ ಆಫ್ರಿಕಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ.
ತೆಂಬಾ ಬಾವುಮಾ ನೇತೃತ್ವದ ತಂಡ ಮೂರು ಪಂದ್ಯಗಳಿಂದ ಐದು ಅಂಕಗಳನ್ನ ಹೊಂದಿದ್ದರೆ, ಭಾರತ ಸೋಲಿನ ನಂತರ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ ಮತ್ತು ಬಾಂಗ್ಲಾದೇಶ ಸಮಾನವಾಗಿ ನಾಲ್ಕು ಅಂಕಗಳನ್ನ ಹೊಂದಿವೆ.
ಇದೇ ಪಂದ್ಯದ ವೇಳೆ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (ಡಿಕೆ) ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಡಿಕೆ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ವಿಕೆಟ್ ಕೀಪಿಂಗ್ ಮಾಡಬೇಕಾಯಿತು. ಕಾರ್ತಿಕ್ ಬಾಂಗ್ಲಾದೇಶ ವಿರುದ್ಧದ ಭಾರತದ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ.
ಪಂದ್ಯದ ನಂತರ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನ ಕ್ರಿಕ್ ಬಜ್ ಮಾತನಾಡಿಸಿತು. ಭಾರತದ ಪ್ಲಾನಿಂಗ್ ನಲ್ಲಿ ಬದಲಾವಣೆ ಮಾಡುವ ಅಗತ್ಯವಿದೆಯೇ ಎಂದು ಕೇಳಿದ್ದಕ್ಕೆ ಸೆಹ್ವಾಗ್ ಅವರು “ ಪಂತ್ ಅವರನ್ನ ಭಾರತದ ಪ್ಲೇಯಿಂಗ್ ಇಲೆವನ್ ಅಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ.
“ಇದು ಮೊದಲ ದಿನದಿಂದಲೇ ಆಗಬೇಕಿತ್ತು. ಪಂತ್ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್, ODI ಆಡಿದ್ದಾರೆ ಉತ್ತಮ ಪ್ರದರ್ಶನ ನೀಡಿದ್ದಾರೆ. ದಿನೇಶ್ ಕಾರ್ತೀಕ್ ಯಾವಾಗ ಆಡಿದ್ದಾರೆ ? ಇದು ಬೆಂಗಳೂರು ವಿಕೆಟ್ ಅಲ್ಲ. ಇವತ್ತಿಗೂ ಹೇಳ್ತಾ ಇದ್ದೀನಿ. ಪಂತ್ ಗೆ ಇಲ್ಲಿ ಆಡಿದ ಅನುಭವವಿದೆ. ಗಬ್ಬಾದಲ್ಲಿ ಆಸ್ಟ್ರೇಲಿಯಾದ ಗರ್ವ ಮುರಿದಿದ್ದಾರೆ. ಎಂದು ಸೆಹ್ವಾಗ್ ಪಂತ್ ಪರ ಬ್ಯಾಟ್ ಬೀಸಿದ್ದಾರೆ.
ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 15 ಎಸೆತಗಳನ್ನು ಎದುರಿಸಿದ ಕಾರ್ತಿಕ್ ಕೇವಲ 6 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
IND vs SA: Virender Sehwag Backs Rishabh Pant Over Injured Dinesh Karthik in India’s T20 World Cup