Thursday, September 21, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಎಲ್‌ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?

Shwetha by Shwetha
February 27, 2021
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಎಲ್‌ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?

ಹೊಸದಿಲ್ಲಿ, ಫೆಬ್ರವರಿ27: ಫೆಬ್ರವರಿ 24 ರ ಮಧ್ಯರಾತ್ರಿಯಿಂದ (ಬುಧವಾರ) ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಾರಂಭಿಸಿದ್ದಾಗಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಫೆಬ್ರವರಿ 25 ರಂದು ಪ್ರಕಟಿಸಿವೆ.
India-Pakistan ceasefire
ಫೆಬ್ರವರಿ 22 ರಂದು ತಮ್ಮ ದೂರವಾಣಿ ಹಾಟ್‌ಲೈನ್‌ನಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸಂಘ ಮತ್ತು ಪಾಕಿಸ್ತಾನದ ಲೆಫ್ಟಿನೆಂಟ್ ಮೇಜ್ ಜನರಲ್ ನೌಮನ್ ಜಕಾರಿಯಾ ಅವರ ನಡುವಿನ ಚರ್ಚೆಯ ನಂತರ ಸೈನ್ಯವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

Related posts

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

September 20, 2023
ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

September 20, 2023

ಆಡಿಯೋ ಹೇಳಿಕೆಯಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತಾ ವ್ಯವಹಾರಗಳ ಸಲಹೆಗಾರ ಮೊಯೀದ್ ಯೂಸುಫ್ ಕದನ ವಿರಾಮವು ತೆರೆಮರೆಯಲ್ಲಿ ನಡೆದ ಮಾತುಕತೆಗಳ ಫಲಿತಾಂಶವಾಗಿದೆ. ಭವಿಷ್ಯದಲ್ಲಿ ಹಿಂಸಾಚಾರಗಳು ಮತ್ತು ‌ಉದ್ವಿಗ್ನತೆಗಳು ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.

ಒಪ್ಪಂದದಡಿಯಲ್ಲಿ, ಎರಡೂ ದೇಶಗಳ ಡಿಜಿಎಂಒಗಳು ಗಡಿಗಳಲ್ಲಿ ಪರಸ್ಪರ ಲಾಭದಾಯಕ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸುವ ಹಿತದೃಷ್ಟಿಯಿಂದ ಶಾಂತಿಯನ್ನು ಭಂಗಗೊಳಿಸುವ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಪ್ರವೃತ್ತಿಯನ್ನು ಹೊಂದಿರುವ ಪರಸ್ಪರರ ಪ್ರಮುಖ ಸಮಸ್ಯೆಗಳು ಮತ್ತು ಕಳವಳಗಳನ್ನು ಪರಿಹರಿಸಲು ಒಪ್ಪಿಕೊಂಡರು.

ಕಳೆದ ಮೂರು ತಿಂಗಳಿಂದ ಭಾರತ ಮತ್ತು ಪಾಕಿಸ್ತಾನ ಬ್ಯಾಕ್‌ಚಾನಲ್ ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಯೂಸುಫ್‌ರನ್ನು ಮೂರನೇ ದೇಶದಲ್ಲಿ ಭೇಟಿಯಾದರು ಮತ್ತು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಸಂವಹನ ಮಾರ್ಗಗಳನ್ನು ತೆರೆದಿಟ್ಟಿದ್ದರು.

2003 ರಿಂದ ಉಭಯ ದೇಶಗಳು ಕದನ ವಿರಾಮ ಒಪ್ಪಂದವನ್ನು ಹೊಂದಿದ್ದರೂ, ಉಲ್ಲಂಘನೆಗಳು ಸಾಮಾನ್ಯವಾಗಿದ್ದವು.

ಗಡಿಯಾಚೆಗಿನ ಭಯೋತ್ಪಾದಕರಿಗೆ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ಪಾಕಿಸ್ತಾನ ಸೇನೆಯು ಕವರ್-ಫೈರ್ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು.

2019 ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ, ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಮತ್ತು ಅದೇ ವರ್ಷದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಭಾರತದ ನಿರ್ಧಾರದ ನಂತರ ದೇಶಗಳ ನಡುವಿನ ಸಂಬಂಧಗಳು ಇನ್ನಷ್ಟು ಬಿಗಡಾಯಿಸಿದ ನಂತರ ಗಡಿಯಾಚೆಗಿನ ಗುಂಡಿನ ದಾಳಿ ಹೆಚ್ಚು ಗಂಭೀರವಾಯಿತು.

ಫೆಬ್ರವರಿ 2 ರಂದು, ಜನರಲ್ ಬಜ್ವಾ, ಪಾಕಿಸ್ತಾನದ ವಾಯುಪಡೆಯ ಅಕಾಡೆಮಿಗೆ ಭೇಟಿ ನೀಡಿದಾಗ, ನಾವು ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ದೃಢವಾಗಿ ಬದ್ಧರಾಗಿದ್ದೇವೆ. ಎಲ್ಲಾ ರೀತಿಯಿಂದಲೂ ಶಾಂತಿಯನ್ನು ವಿಸ್ತರಿಸುವ ಸಮಯ ಇದು. ಜಮ್ಮು ಮತ್ತು ಕಾಶ್ಮೀರದ ದೀರ್ಘಕಾಲದ ಸಮಸ್ಯೆಯನ್ನು ಜಮ್ಮು ಕಾಶ್ಮೀರ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಗೌರವಾನ್ವಿತ ಮತ್ತು ಶಾಂತಿಯುತವಾಗಿ ಪಾಕಿಸ್ತಾನ ಮತ್ತು ಭಾರತ ಬಗೆಹರಿಸಬೇಕು ಎಂದು ಹೇಳಿದರು.
India-Pakistan ceasefire

ಅಫ್ಘಾನಿಸ್ತಾನದಲ್ಲಿ ಯುದ್ಧ ಮುಗಿಯುತ್ತಿದ್ದಂತೆ ಅಮೆರಿಕದ ನೆರವು ಸಿಗದು ಎಂದು ಅರ್ಥಮಾಡಿಕೊಂಡ ಮತ್ತು ಕಾಶ್ಮೀರ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ನಮ್ಮ ಪರವಾಗಿಲ್ಲ ಎಂಬ ಕಹಿ ಅನುಭವವು ಇಸ್ಲಾಮಿಕ್ ರಾಷ್ಟ್ರವನ್ನು ಭಾರತದೊಂದಿಗೆ ರಾಜಿಯಾಗುವ ನಿರ್ಧಾರ ಕೈಗೊಳ್ಳಲು ‌ಕಾರಣವಾಯಿತು.

ಯುನೈಟೆಡ್ ಸ್ಟೇಟ್ಸ್ ಶ್ವೇತಭವನದ ವಕ್ತಾರ ಜೆನ್ ಸಾಕಿ ಅವರು ಭಾರತ-ಪಾಕ್ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಇದು ದಕ್ಷಿಣ ಏಷ್ಯಾದಲ್ಲಿ ಹೆಚ್ಚಿನ ಶಾಂತಿ ಮತ್ತು ಸ್ಥಿರತೆಯತ್ತ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/oWAdASicQQ

— Saaksha TV (@SaakshaTv) February 23, 2021

ಎಲ್‌ಐಸಿ(LIC)ಯಿಂದ ತನ್ನ ಗ್ರಾಹಕರಿಗಾಗಿ ಮಾರ್ಚ್ 6 ರವರೆಗೆ ವಿಶೇಷ ಸೌಲಭ್ಯ https://t.co/H6UI5Ixv2K

— Saaksha TV (@SaakshaTv) February 23, 2021

ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ https://t.co/4XKj4biGrS

— Saaksha TV (@SaakshaTv) February 22, 2021

 

Tags: ceasefireindia-pakistan
ShareTweetSendShare
Join us on:

Related Posts

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

by Honnappa Lakkammanavar
September 20, 2023
0

ಬೆಂಗಳೂರು: ಪೊಲೀಸರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಾಗರಾಜ್(47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಇವರು ಸನಾವುಲ್ಲಾ ಒಡೆತನದ...

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

by Honnappa Lakkammanavar
September 20, 2023
0

ನವದೆಹಲಿ : ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ನಂತರ...

ಸೈನಿಕರ ದಾಳಿಗೆ 25ನಾಗರಿಕರ ಸಾವು

ಸೈನಿಕರ ದಾಳಿಗೆ 25ನಾಗರಿಕರ ಸಾವು

by Honnappa Lakkammanavar
September 20, 2023
0

ಸೈನಿಕರು ನಡೆಸಿದ ದಾಳಿಯಲ್ಲಿ ಕನಿಷ್ಠ 25 ನಾಗರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅರ್ಮೇನಿಯನನ್ ನಿಯಂತ್ರಿತ ಕರಾಬಖ್ ನಲ್ಲಿ ಅಜರ್ಬೈಜಾನಿ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಗರಿಕರು...

ದಾಖಲೆಯ ಮಟ್ಟಕ್ಕೇರಿದ ಕಚ್ಚಾತೈಲ ದರ

ದಾಖಲೆಯ ಮಟ್ಟಕ್ಕೇರಿದ ಕಚ್ಚಾತೈಲ ದರ

by Honnappa Lakkammanavar
September 20, 2023
0

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.267ಕ್ಕೆ ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ತೈಲ ಬೆಲೆಗಳು ಈಗ ಬ್ಯಾರೆಲ್...

ಲೈಂಗಿಕತೆ ಇಲ್ಲದ ವಿವಾಹ ಅಪರಿಪೂರ್ಣ: ಹೈಕೋರ್ಟ್

ಲೈಂಗಿಕತೆ ಇಲ್ಲದ ವಿವಾಹ ಅಪರಿಪೂರ್ಣ: ಹೈಕೋರ್ಟ್

by Honnappa Lakkammanavar
September 20, 2023
0

ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಉದ್ಧೇಶಪೂರ್ವಕವಾಗಿ ನಿರಾಕರಿಸುವುದು ಕ್ರೂರತೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮದುವೆಯಾದ 35 ದಿನಕ್ಕೆ ಬೇರೆ ಬೇರೆಯಾದ ದಂಪತಿಗೆ ವಿಚ್ಛೇತನ ನೀಡಿದ್ದನ್ನು ಎತ್ತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಮನೆಯ ಎಂತಹ ದೊಡ್ಡ ವಾಸ್ತು ಕೊರತೆಯನ್ನು ಒಂದು ಗ್ಲಾಸ್ ನೀರು ನಿವಾರಿಸುತ್ತದೆ. ಇನ್ಮುಂದೆ ವಾಸ್ತು ಫಿಕ್ಸ್ ಮಾಡಲು ಲಕ್ಷಾಂತರ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ..

ಮನೆಯ ಎಂತಹ ದೊಡ್ಡ ವಾಸ್ತು ಕೊರತೆಯನ್ನು ಒಂದು ಗ್ಲಾಸ್ ನೀರು ನಿವಾರಿಸುತ್ತದೆ. ಇನ್ಮುಂದೆ ವಾಸ್ತು ಫಿಕ್ಸ್ ಮಾಡಲು ಲಕ್ಷಾಂತರ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ..

September 21, 2023
ಪೊರಕೆ ಹಿಡಿದು ಜಾತಿ ನಿಂದನೆ; ವ್ಯಕ್ತಿಯಿಂದ ಆತ್ಮಹತ್ಯೆ

ಪೊರಕೆ ಹಿಡಿದು ಜಾತಿ ನಿಂದನೆ; ವ್ಯಕ್ತಿಯಿಂದ ಆತ್ಮಹತ್ಯೆ

September 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram