ADVERTISEMENT
Thursday, March 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಡತನ… ಅಪಮಾನ.. ನಿಷೇಧ..ಹೀಗೆ ಓಡುತ್ತಲೇ ಬೆಳೆದ ಕ್ರೀಡಾತಾರೆ ದುಟಿ ಚಾಂದ್..!

admin by admin
July 2, 2021
in Newsbeat, Sports, ಕ್ರೀಡೆ
Dutee Chand Indian sprinter saakshatv
Share on FacebookShare on TwitterShare on WhatsappShare on Telegram

ಬಡತನ… ಅಪಮಾನ.. ನಿಷೇಧ..ಹೀಗೆ ಓಡುತ್ತಲೇ ಬೆಳೆದ ಕ್ರೀಡಾತಾರೆ ದುಟಿ ಚಾಂದ್..!

Dutee Chand Indian sprinter  saakshatvಭಾರತದ ವೇಗದ ಓಟಗಾರ್ತಿ ದುಟು ಚಾಂದ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿಶ್ವ ಶ್ರೇಯಾಂಕ ಪಟ್ಟಿಯ ಆಧಾರದ ಮೇಲೆ ದುಟಿ ಚಾಂದ್ ಅವರು 100ಮೀಟರ್, 200ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲೂ ಭಾಗವಹಿಸಿದ್ದರು. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದುಟಿ ಚಾಂದ್ ಅವರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಪ್ರತಿ ದಿನ ಆರರಿಂದ ಏಳು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿರುವ ದುಟಿ ಚಾಂದ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸದಲ್ಲೂ ಇದ್ದಾರೆ.
ಅಂದ ಹಾಗೇ ದುಟಿ ಚಾಂದ್ ಭಾರತೀಯ ಅಥ್ಲೆಟಿಕ್ಸ್ ನಲ್ಲಿ ಮಿಂಚು ಹರಿಸಿದ್ದ ಕ್ರೀಡಾಪಟು. ಏಷ್ಯಾದ ಎರಡನೇ ವೇಗದ ಮಹಿಳಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ. ದುಟಿ ಚಾಂದ್ ಸಾಧನೆಯನ್ನು ನೋಡಿ ಎಲ್ಲರೂ ಕೊಂಡಾಡುತ್ತಿದ್ದಾರೆ. ಆದ್ರೆ ಈ ಏಷ್ಯಾಡ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ದುಟಿ ಚಾಂದ್ ಹಿಂದಿನ ನೋವಿನ ಕಥೆಯನ್ನು ಕೇಳಿದ್ರೆ ಹೀಗೂ ಆಗಿದೆಯಾ ಅಂತ ಅನ್ನಿಸಬಹುದು.

Related posts

Yugadi 2026 Horoscope – ಯುಗಾದಿ ವರ್ಷ ಭವಿಷ್ಯ : ಪರಾಭವ ನಾಮ ಸಂವತ್ಸರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ? ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Yugadi 2026 Horoscope – ಯುಗಾದಿ ವರ್ಷ ಭವಿಷ್ಯ : ಪರಾಭವ ನಾಮ ಸಂವತ್ಸರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ? ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

March 19, 2026
astrology

ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

March 18, 2026

Dutee Chand Indian sprinter  saakshatvಭಾರತೀಯ ಅಥ್ಲೆಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಮಾಡಿರುವ ಅವಮಾನಕ್ಕೆ ಅಂದು ದುಟಿ ಚಾಂದ್ ತಲೆತಗ್ಗಿಸಿದ್ದರು. ಆದ್ರೆ 2018ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದು ಭಾರತೀಯ ಅಥ್ಲೆಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ಗೆ ಮುಖಕ್ಕೆ ಮಂಗಳಾರತಿ ಮಾಡುವಂತೆ ಮಾಡಿದ್ರು.
ಅದ್ರಲ್ಲೂ ದುಟಿಚಾಂದ್ 18ನೇ ಏಷ್ಯನ್ ಗೇಮ್ಸ್ ನ ನೂರು ಮೀಟರ್ ಓಟವನ್ನು 11.32 ಸೆಕೆಂಡುಗಳಲ್ಲಿ ಕ್ರಮಿಸಿ ಕೂದಲೆಳೆಯದ ಅಂತರದಿಂದ ಚಿನ್ನದ ಪದಕವನ್ನು ಕಳೆದುಕೊಂಡಿದ್ದರು. ಹಾಗೇ ನೋಡಿದ್ರೆ 100 ಮೀಟರ್ ಓಟದ ಸೆಮಿಫೈನಲ್ ನಲ್ಲಿ 11.43 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್ ಎಂಟ್ರಿಯಾಗಿದ್ದರು. ಆಗ ದುಟಿ ಚಾಂದ್ ಪದಕ ಗೆಲ್ಲುವ ನಿರೀಕ್ಷೆಗಳು ಇರಲಿಲ್ಲ. ಆದ್ರೆ ಎರಡುವರೆ ಗಂಟೆಗಳ ಬಳಿಕ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು. ಏಳನೇ ಟ್ರ್ಯಾಕ್ ನಲ್ಲಿ ಓಟ ಅರಂಭಿಸಿದ್ದ ದುಟಿ ಚಾಂದ್ ಅದ್ಭುತ ಆರಂಭವನ್ನೇ ಪಡೆದ್ರು. ಇನ್ನೇನೂ ಗುರಿ ತಲುಪುವಷ್ಟರಲ್ಲಿ ಕ್ಷಣ ಮಾತ್ರದ ಹಿನ್ನಡೆ ಅನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಚೊಚ್ಚಲ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ದುಟಿ ಚಾಂದ್ ಚೊಚ್ಚಲ ಪದಕವನ್ನು ಗೆದ್ದುಕೊಂಡಿದ್ದರು. ಅದೂ ಕೂಡ 20 ವರ್ಷಗಳ ಬಳಿಕ ನೂರು ಮೀಟರ್ ನಲ್ಲಿ ಪದಕ ಗೆದ್ದ ಸಾಧನೆಯನ್ನು ದುಟಿ ಚಾಂದ್ ಮಾಡಿದ್ರು. ಈ ಹಿಂದೆ 1998ರ ಏಷ್ಯಾಡ್ನಲ್ಲಿ ರಚಿತಾ ಮಿಸ್ಟ್ರಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು.
ಈ ಪದಕದೊಂದಿಗೆ ದುಟಿಚಾಂದ್ ಭಾರತದ ಅಗ್ರ ಅಥ್ಲೀಟ್ ಗಳ ಸಾಲಿಗೂ ಸೇರ್ಪಡೆಗೊಂಡಿದ್ದರು. ಏಷ್ಯನ್ ಗೇಮ್ಸ್ ನೂರು ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಗೆದ್ದ ಮೂರನೇ ಕ್ರೀಡಾಪಟು ಹಾಗೂ ನಾಲ್ಕನೇ ಪದಕ ಗಿಟ್ಟಿಸಿದ್ದ ಅಥ್ಲೀಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದರು. 1951ರಲ್ಲಿ ರೋಶನ್ ಮಿಸ್ಟ್ರಿ ಬೆಳ್ಳಿ ಗೆದ್ದುಕೊಂಡಿದ್ರೆ, 1982 ಮತ್ತು 1986 ಪಿ.ಟಿ. ಉಷಾ ಎರಡು ಬಾರಿ ಬೆಳ್ಳಿ ಗೆದ್ದುಕೊಂಡಿದ್ದರು.
Dutee Chand Indian sprinter  saakshatvಅಂದ ಹಾಗೇ ದುಟಿ ಚಾಂದ್ ಹುಟ್ಟಿದ್ದು ಫೆಬ್ರವರಿ 3, 1996. ಒಡಿಸ್ಸಾದ ಜೈಪುರ್ ಜಿಲ್ಲೆಯವರು. ತಂದೆ ಚಕ್ರಾಧರ್ ಚಾಂದ್ ಮತ್ತು ತಾಯಿ ಅಖುಜಿ ಚಾಂದ್. ನೇಕಾರರ ಕುಟುಂಬದಿಂದ ಬಂದಿರುವ ದುಟಿ ಚಾಂದ್ ಬಡತನದಲ್ಲೇ ಬದುಕನ್ನು ಕಳೆದವರು. ಬಡತನದ ವಿರುದ್ಧವೇ ಓಡುತ್ತಾ ಬೆಳೆದ ದುಟಿ ಚಾಂದ್ ಗೆ ಅಕ್ಕ ಸರಸ್ವತಿ ಚಾಂದ್ ಬೆನ್ನೆಲುಬಾಗಿ ನಿಂತಿದ್ದರು. 2012-2013ರಲ್ಲಿ ದುಟಿ ಚಾಂದ್ 18 ವಯೋಮಿತಿಯ ನೂರು ಮೀಟರ್ ಓಟದಲ್ಲಿ 11.8 ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯನ್ನೇ ಬರೆದಿದ್ದರು.
ಆದ್ರೆ, ಭಾರತದ ಭರವಸೆಯ ವೇಗದ ಓಟಗಾರ್ತಿಯಾಗಿದ್ದ ದುಟಿ ಚಾಂದ್ ಗೆ 2014ರಲ್ಲಿ ಆಘಾತ ಅನುಭವಿಸಿದ್ರು. ಇನ್ನೇನೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಅನ್ನುವಷ್ಟರಲ್ಲಿ ದುಟಿ ಚಾಂದ್ ಅವರನ್ನು ಸ್ಪರ್ಧೆಯಿಂದ ಭಾರತೀಯ ಅಥ್ಲೆಟಿಕ್ ಫೆಡರೇಷನ್ ಕೈಬಿಟ್ಟಿತ್ತು. ಕಾರಣ ಮಹಿಳಾ ಆಥ್ಲೀಟ್ ಆಗಿರುವ ದುಟಿಚಾಂದ್ ದೇಹದಲ್ಲಿ ಹೈಪರ್ ಆಂಡ್ರೊಜೆನಿಜಮ್ ಅಂಶ ಜಾಸ್ತಿಯಾಗಿದೆ. ಇದ್ರಿಂದ ದುಟಿ ಚಾಂದ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ ಅಂತ ಆದೇಶವನ್ನು ನೀಡಿತ್ತು. ಇದ್ರಿಂದ ಕಂಗಲಾಗಿರುವ ದುಟಿ ಚಾಂದ್ ಭಾರತೀಯ ಅಥ್ಲೆಟಿಕ್ ಫೆಡರೇಷನ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡೇರೇಷನ್ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಸ್ಪೋಟ್ರ್ಸ್ ಆರ್ಬಿಟ್ರೆಷನ್ ನ್ಯಾಯಾಲಯ ವಿಚಾರಣೆ ನಡೆಸಿದ್ದ ಬಳಿಕ ಸರಿಯಾದ ಸಾಕ್ಷ್ಯಗಳು ಇಲ್ಲದ ಕಾರಣ ದುಟಿ ಚಾಂದ್ ಗೆ ಮತ್ತೆ ಅಥ್ಲೆಟಿಕ್ಸ್ ನಲ್ಲಿ ಸ್ಪರ್ಧಿಸುವಂತೆ ಅವಕಾಶ ನೀಡಲಾಗಿತ್ತು.
Dutee Chand Indian sprinter  saakshatvದುರಂತ ಅಂದ್ರೆ, ಭಾರತ ಅಥ್ಲೆಟಿಕ್ ಫೆಡರೇಷನ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ನ ತಪ್ಪು ಕಲ್ಪನೆಯಿಂದ ದುಟಿ ಚಾಂದ್ 2014ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2014 ಏಷ್ಯನ್ ಗೇಮ್ಸ್ ನಿಂದ ವಂಚಿತರಾದ್ರು. ಆಗ ಕಂಗೆಟ್ಟಿದ್ದ ದುಟಿ ಚಾಂದ್ಗೆ ಸಹಾಯಕ್ಕೆ ಬಂದವರು ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಂಚಂದ್.
ಕೋರ್ಟ್ ಮೆಟ್ಟಲೇರಿದಾಗ ಎಲ್ಲಾ ರೀತಿಯ ಸಹಾಯವನ್ನು ಮಾಡಿರುವ ಪುಲ್ಲೇಲಾ ಗೋಪಿಂಚಂದ್ ಅವರು ದುಟಿ ಚಾಂದ್ ಅವರ ಕ್ರೀಡಾಬದುಕಿಗೆ ಬೆಳಕು ನೀಡಿದ್ರು. ಅಲ್ಲದೆ ತಮ್ಮದೇ ಅಕಾಡೆಮಿಯಲ್ಲಿ ದುಟಿ ಚಾಂದ್ ಅವರಿಗೆ ಆಸರೆಯನ್ನು ಕೂಡ ನೀಡಿದ್ರು.

ಒಟ್ಟಿನಲ್ಲಿ ದುಟಿ ಚಾಂದ್ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿಕೊಂಡು ಯಶಸ್ಸಿನ ಶಿಖರವನ್ನೇರಿದ್ದಾರೆ. ಹೆಣ್ಣು ಮಗಳಾಗಿದ್ರೂ ತನ್ನ ಲಿಂಗತ್ವದ ಬಗ್ಗೆ ಅನುಮಾನ ಮೂಡುವಂತೆ ಆದಾಗ ಹೇಗೆ ಆಗಿರಬೇಕು ಅವರಿಗೆ. ಬಡತನದ ನೋವು, ದೇಹದಲ್ಲಿನ ವ್ಯತ್ಯಾಸದಿಂದ ಆಗಿರುವ ಲಿಂಗತ್ವದ ಸಂಕಟ. ಅವಮಾನ, ಟೀಕೆ, ಆರೋಪಗಳು ಹೀಗೆ ಒಂದಲ್ಲ ಎರಡಲ್ಲ ಪ್ರತಿ ಕ್ಷಣವೂ ದುಟಿ ಚಾಂದ್ ಮಾನಸಿಕವಾಗಿ ಕೊರಗಿಕೊಂಡೇ ಅಭ್ಯಾಸದಲ್ಲಿ ನಿರತರಾಗಿದ್ದರು.

ಇದೀಗ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಗೆದ್ದಿರುವ ಪದಕಗಳ ಹೊಳಪು ಇದೆಯಲ್ವಾ ,ಅದು ದುಟಿ ಚಾಂದ್ ಅವರ ಬದುಕಿನ ಸಂಕಟವನ್ನು ಮರೆ ಮಾಚುವಂತೆ ಮಾಡಿದೆ. ದುಟಿ ಚಾಂದ್ ಬದುಕಿನಲ್ಲಿ ಮಾಡಿರುವ ಸಾಧನೆ, ಪದಕಗಳಿಂದ ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಿದೆ.
ಇದೀಗ ಟೋಕಿಯೋ ಒಲಿಂಪಿಕ್ಸ್ ನತ್ತ ಚಿತ್ತವನ್ನಿಟ್ಟಿರುವ ದುಟಿ ಚಾಂದ್ ಶ್ರೇಷ್ಠ ಪ್ರದರ್ಶನ ನೀಡಿ ಪದಕ ಗೆಲ್ಲಲಿ ಅನ್ನೋದೇ ನಮ್ಮೆಲ್ಲರ ಆಶಯ.

Tags: #saakshatvathleticsDutee Chandindiandian sprinterSportsTokyo OlympicsTokyo Olympics 2021
ShareTweetSendShare
Join us on:

Related Posts

Yugadi 2026 Horoscope – ಯುಗಾದಿ ವರ್ಷ ಭವಿಷ್ಯ : ಪರಾಭವ ನಾಮ ಸಂವತ್ಸರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ? ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Yugadi 2026 Horoscope – ಯುಗಾದಿ ವರ್ಷ ಭವಿಷ್ಯ : ಪರಾಭವ ನಾಮ ಸಂವತ್ಸರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ? ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

by Shwetha
March 19, 2026
0

ಮೇಷ ರಾಶಿ ಈ ವರ್ಷ ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಶನಿಯು ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಸಂಚರಿಸುವುದರಿಂದ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ದೂರದ ಪ್ರಯಾಣ...

astrology

ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

by admin
March 18, 2026
0

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ...

ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

by Shwetha
March 18, 2026
0

ನವದೆಹಲಿ: ದೇಶಾದ್ಯಂತ ಇರುವ ಕೋಟ್ಯಂತರ ಅಡುಗೆ ಅನಿಲ (ಎಲ್‌ಪಿಜಿ) ಗ್ರಾಹಕರಿಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಲ್ಲಾ ಗೃಹಬಳಕೆಯ...

ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್: ರಕ್ಷಣೆ ಕೋರಿ ಬಂದವರನ್ನೇ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್: ರಕ್ಷಣೆ ಕೋರಿ ಬಂದವರನ್ನೇ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

by Shwetha
March 18, 2026
0

ಮಂಗಳೂರು: ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿ ನ್ಯಾಯ ಒದಗಿಸಬೇಕಾದ ರಕ್ಷಕರೇ ಭಕ್ಷಕರಾದ ಘನಘೋರ ಪ್ರಕರಣವೊಂದು ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಕೌಟುಂಬಿಕ ಕಲಹದ...

ಕೋರಮಂಗಲ ಮಿನಿ ನಾರ್ತ್ ಇಂಡಿಯಾ, ಸರ್ಜಾಪುರ ಬಿಹಾರ, ಎಲೆಕ್ಟ್ರಾನಿಕ್ ಸಿಟಿ ಆಂಧ್ರ… ಹಾಗಾದರೆ ಕನ್ನಡಿಗರ ಬೆಂಗಳೂರು ಎಲ್ಲಿದೆ? ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಸ್ಟ್

ಕೋರಮಂಗಲ ಮಿನಿ ನಾರ್ತ್ ಇಂಡಿಯಾ, ಸರ್ಜಾಪುರ ಬಿಹಾರ, ಎಲೆಕ್ಟ್ರಾನಿಕ್ ಸಿಟಿ ಆಂಧ್ರ… ಹಾಗಾದರೆ ಕನ್ನಡಿಗರ ಬೆಂಗಳೂರು ಎಲ್ಲಿದೆ? ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಸ್ಟ್

by Shwetha
March 18, 2026
0

ಜಾಗತಿಕ ಭೂಪಟದಲ್ಲಿ ಸಿಲಿಕಾನ್ ಸಿಟಿ ಎಂದು ರಾರಾಜಿಸುತ್ತಿರುವ ನಮ್ಮ ಬೆಂಗಳೂರು, ಅಭಿವೃದ್ಧಿಯ ಓಟದಲ್ಲಿ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿದೆಯೇ? ಉದ್ಯೋಗ ಅರಸಿ ಬರುವ ಪರಭಾಷಿಗರ ಪ್ರವಾಹದಲ್ಲಿ ಕನ್ನಡದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram