ಮಲ್ಯ ಸಾಲ ತೀರಿಸಲ್ಲ.. ಆರ್ ಸಿಬಿ ಕಪ್ ಗೆಲ್ಲಲ್ಲ.. ಈ ಮಾತು ಈ ಸಲ ಸುಳ್ಳಾಗುತ್ತಾ ?
ವಿಜಯ ಮಲ್ಯ ಸಾಲ ತೀರಿಸಲ್ಲ… ಆರ್ ಸಿಬಿ ಐಪಿಎಲ್ ಕಪ್ ಗೆಲ್ಲಲ್ಲ..
ಹೀಗೆ ಟೀಕೆ, ಹಾಸ್ಯ ಮಾಡುತ್ತಿರುವವರಿಗೆ ಈ ಬಾರಿಯಾದ್ರೂ ಆರ್ ಸಿಬಿ ಉತ್ತರ ನೀಡುತ್ತಾ ?
ಯಾವುದಕ್ಕೂ ಕಾದು ನೋಡಬೇಕು..!
ಈ ನಡುವೆ ಆರ್ ಸಿಬಿ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷ ಕೂಡ ಕಪ್ ನಮ್ದೆ ಅಂತಾ ಬೀಗುತ್ತಿದ್ದಾರೆ.
ವಿರಾಟ್ ಕೊಹ್ಲಿಯ ಮೇಲಿನ ಭರವಸೆಯೋ.. ಎಬಿಡಿ ವಿಲಿಯರ್ಸ್ ಮೇಲಿನ ಅಭಿಮಾನವೋ.. ನಮ್ಮ ಕರ್ನಾಟಕದ ಹೆಮ್ಮೆಯೋ.. ಆರ್ ಸಿಬಿ ಮೇಲಿನ ಪ್ರೀತಿಯೋ ಗೊತ್ತಿಲ್ಲ.. ಪ್ರತಿಯೊಬ್ಬ ಆರ್ ಸಿಬಿ ಅಭಿಮಾನಿ ಈ ಬಾರಿಯಾದ್ರೂ ಆರ್ ಸಿಬಿ ಕಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದಾರೆ.
ಆದ್ರೆ ಆರ್ ಸಿಬಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಸಾಮಥ್ರ್ಯ ವಿದೆಯಾ ಅನ್ನೋ ಪ್ರಶ್ನೆಗೂ ಉತ್ತರವಿದೆ.
ಯಾಕಂದ್ರೆ ಆರ್ ಸಿಬಿಯಲ್ಲಿ ನಾಯಕ ವಿರಾಟ್ ಕೊಹ್ಲಿಯ ಆಟದ ಮೇಲಿರುವ ನಂಬಿಕೆ. ಅದೇ ರೀತಿ ಎಬಿಡಿ ವಿಲಿಯರ್ಸ್ ಮೇಲಿನ ವಿಶ್ವಾಸ.
ಅದನ್ನು ಬಿಟ್ಟು ಯಾರು ತಂಡಕ್ಕೆ ಆಧಾರವಾಗಿ ನಿಲ್ಲುತ್ತಾರೆ ಅನ್ನೋ ಪ್ರಶ್ನೆ ಬಂದಾಗ ಬರೋವ ಉತ್ತರ ದೇವದತ್ತ್ ಪಡಿಕ್ಕಲ್.
ಇನ್ನು ಬೌಲಿಂಗ್ ವಿಭಾಗ.. ಕ್ರಿಸ್ ಮೋರಿಸ್ ಹೊರತುಪಡಿಸಿ ಆರ್ ಸಿಬಿ ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಬೌಲರ್ ಗಳು ಯಾರಿದ್ದಾರೆ ಅಂದಾಗ ನಿಖರವಾದ ಉತ್ತರವಿಲ್ಲ.
ಮಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಬೌಲರ್ ಗಳು. ಆದ್ರೆ ಮಹತ್ವದ ಹಂತದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಇನ್ನು ಆರ್ ಸಿಬಿ ತಂಡದಲ್ಲಿ ಸ್ಪೋಟಕ ಆಲ್ ರೌಂಡರ್ ನ ಕೊರತೆ ಎದ್ದು ಕಾಣುತ್ತಿದೆ. ಹಾಗೇ ಹೆಚ್ಚುವರಿ ಬ್ಯಾಟ್ಸ್ ಮೆನ್ ಕೂಡ ಇಲ್ಲ. ತಂಡ ಗೆಲ್ಲಬೇಕಾದ್ರೆ ವಿರಾಟ್ ಕೊಹ್ಲಿ ಮತ್ತು ಎಬಿಡಿ ಆಡಲೇಬೇಕು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ಆರ್ ಸಿಬಿ ತಂಡವಿದೆ.
ಇದೀಗ ಪ್ಲೇ ಆಫ್ ನ ಎರಡನೇ ಪಂದ್ಯದಲ್ಲಿ ಆರ್ ಸಿಬಿ ಹೈದ್ರಬಾದ್ ತಂಡವನ್ನು ಎದುರಿಸಬೇಕಿದೆ.
ಮೇಲ್ನೋಟಕ್ಕೆ ಆರ್ ಸಿಬಿಗಿಂತ ಹೈದ್ರಬಾದ್ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಕಾರಣ ಸನ್ ರೈಸರ್ಸ್ ಹೈದ್ರಬಾದ್ ತಂಡದ ಹೊಂದಾಣಿಕೆಯ ಆಟವೇ ಪ್ರಮುಖ ಕಾರಣ.
ಯುವ ಬೌಲರ್ ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದ್ದಾರೆ. ಹಾಗೇ ಬ್ಯಾಟಿಂಗ್ ನಲ್ಲಿ ಡೇವಿಡ್ ವಾರ್ನರ್, ವೃದ್ದಿಮಾನ್ ಸಾಹ, ಮನೀಷ್ ಪಾಂಡೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ಹೈದ್ರಬಾದ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುತ್ತಿದೆ.
ಇನ್ನೊಂದೆಡೆ ಆರ್ ಸಿಬಿ ಸಾಲು ಸಾಲು ನಾಲ್ಕು ಸೋಲುಗಳನ್ನು ಕಂಡಿದೆ. ಲೆಕ್ಕಚಾರದ ಆಟದ ಮೂಲಕ ಪ್ಲೇ ಆಫ್ ಗೆ ಎಂಟ್ರಿಪಡೆದಿದೆ. ಹೀಗಾಗಿ ಆರ್ ಸಿಬಿ ಒತ್ತಡಕ್ಕೆ ಸಿಲುಕಿದ್ರೂ ಮಹತ್ವದ ಪಂದ್ಯದಲ್ಲಿ ಹೈದ್ರಬಾದ್ ತಂಡಕ್ಕೆ ದಿಟ್ಟ ಉತ್ತರವನ್ನು ನೀಡುವ ತಾಕತ್ತಂತೂ ಇದ್ದೇ ಇದೆ.
ಒಟ್ಟಿನಲ್ಲಿ ಆರ್ ಸಿಬಿಗೆ ಅಗ್ನಿಪರೀಕ್ಷೆಯಾಗಿದೆ. ಮರೀಚಿಕೆಯಾಗುತ್ತಿರುವ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮತ್ತೊಂದು ಅವಕಾಶ ಸಿಕ್ಕಿದೆ. ನೋಡೋಣ.. ಹೇಗೆ ಆಡ್ತಾರೆ.. ವಿರಾಟ್ ಕೊಹ್ಲಿ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಲ್ಲ ಅನ್ನೋ ನಂಬಿಕೆ ಇದೆ.
ಆರ್ ಸಿಬಿ ಅಭಿಮಾನಿಗಳ ನಂಬಿಕೆಯನ್ನು ವಿರಾಟ್ ಉಳಿಸಿಕೊಳ್ತಾರೋ.. ಅಥವಾ ಮತ್ತೆ ಹುಸಿಗೊಳಿಸ್ತಾರೋ ಯಾವುದಕ್ಕೂ ನವೆಂಬರ್ 7ಕ್ಕೆ ಗೊತ್ತಾಗಲಿದೆ.