ಐಪಿಎಲ್ 2021 – ಆರ್ ಸಿಬಿ ಪ್ಲೇ ಆಫ್ ಗೂ ಎಂಟ್ರಿ ಪಡೆಯಾಗಲ್ಲ – ಆಕಾಶ್ ಚೋಪ್ರಾ ಭವಿಷ್ಯ
ಈ ಸಲ ಕಪ್ ನಮ್ದೆ ಅಂತ ಆರ್ ಸಿಬಿ ಅಭಿಮಾನಿಗಳು ಈ ಬಾರಿಯೂ ಭಾರೀ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಆರ್ ಸಿಬಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
14ನೇ ಆವೃತ್ತಿಯ ಟೂರ್ನಿಯಲ್ಲಿ ಆರ್ ಸಿಬಿ ಪ್ಲೇ ಆಫ್ ಗೂ ಎಂಟ್ರಿ ಕೊಡಲ್ಲ ಎಂದು ಆಕಾಶ್ ಚೋಪ್ರಾ ಅವರು ಆರ್ ಸಿಬಿಯ ಭವಿಷ್ಯ ನುಡಿದಿದ್ದಾರೆ. ಅಂದ ಮೇಲೆ ಈ ಬಾರಿಯೂ ಕಪ್ ನಮ್ದಲ್ಲ ಅಂತಾಯ್ತು.
ಆರ್ ಸಿಬಿ ಈ ಬಾರಿಯೂ ಕಪ್ ಗೆಲ್ಲಲ್ಲ. ಕಳೆದ ವರ್ಷದಂತೆ ಪ್ಲೇ ಆಫ್ ಗೆ ಎಂಟ್ರಿ ಪಡೆಯಲ್ಲ. ಕಳೆದ ಬಾರಿಯ ಪ್ರದರ್ಶನವನ್ನು ಈ ಬಾರಿ ನಿರೀಕ್ಷೆ ಮಾಡುವಂತಿಲ್ಲ ಎಂದು ಆಕಾಶ್ ಚೋಪ್ರಾ ಅವರು ಅಭಿಪ್ರಾಯ ವಕ್ತಪಡಿಸಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ರೆ ಮಹತ್ವದ ಘಟ್ಟದಲ್ಲಿ ಟೂರ್ನಿಯಲ್ಲಿ ಹಿಡಿತವನ್ನು ಕಳೆದುಕೊಳ್ಳುತ್ತದೆ. ಮುಖ್ಯವಾಗಿ ಆರ್ ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗುತ್ತಿದೆ. ಈ ತಪ್ಪನ್ನು ಸರಿಪಡಿಸಿಕೊಳ್ಳದಿದ್ರೆ ತಂಡಕ್ಕೆ ಅಪಾಯ ಗ್ಯಾರಂಟಿ ಎಂದು ಹೇಳಿದ್ದಾರೆ.
ಒಂದು ವೇಳೆ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಆರಂಭಿಕ ಜೋಡಿಯಾಗಿ ಯಶ ಸಾಧಿಸಬಹುದು. ಯುಜುವೇಂದ್ರ ಚಾಹಲ್ ಆರ್ ಸಿಬಿ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಲಿದ್ದಾರೆ ಎಂದು ಕೂಡ ಆಕಾಶ್ ಚೋಪ್ರಾ ಇದೇ ವೇಳೆ ಹೇಳಿದ್ದಾರೆ.
ಅಷ್ಟೇ ಅಲ್ಲ, ಈ ಬಾರಿಯ ಟೂರ್ನಿಯಲ್ಲಿ ಆರೇಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಡೆದುಕೊಳ್ಳಲಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿಗೆ ರಿಷಬ್ ಪಂತ್, ಕೆ.ಎಲ್. ರಾಹುಲ್ ಪೈಪೋಟಿ ಒಡ್ಡಲಿದ್ದಾರೆ.
ಆದ್ರೆ ಆರ್ ಸಿಬಿ ತಂಡ ಈ ಬಾರಿ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು. ಕಪ್ ಗೆಲ್ಲಲೇಬೇಕು ಎಂಬ ಹಠದಲ್ಲಿದೆ. ತಂಡದಲ್ಲಿ ಯುವ ಬ್ಯಾಟ್ಸ್ ಮೆನ್ ಗಳು ಇದ್ದಾರೆ. ಆದ್ರೆ ಬ್ಯಾಟಿಂಗ್ ಗೆ ತಕ್ಕಂತೆ ಬೌಲಿಂಗ್ ವಿಭಾಗದಲ್ಲಿ ಅಷ್ಟೊಂದು ಬಲಿಷ್ಠವಾಗಿಲ್ಲ.
ಒಟ್ಟಿನಲ್ಲಿ ಆಕಾಶ್ ಚೋಪ್ರಾ ಅವರ ಭವಿಷ್ಯ ನಿಜವಾಗುತ್ತಾ ? ಅಥವಾ ಕಪ್ ನಮ್ದೆ ಅಂತ ಹೇಳುತ್ತಿರುವ ಅಭಿಮಾನಿಗಳ ಕನಸು ಈಡೇರುತ್ತಾ ಅನ್ನೋದನ್ನು ಕಾದು ನೋಡಬೇಕು.