ಐಪಿಎಲ್ 2021 | ಮುಂಬೈಗೆ ಪಂಚ್ ಕೊಡುತ್ತಾ ಪಂಜಾಬ್..?
ಬೆಂಗಳೂರು : ಐಪಿಎಲ್ ದಂಗಲ್ ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲ್ ಹಾಕಲಿದೆ. ಟೂರ್ನಿಯಲ್ಲಿ ಈ ಎರಡು ತಂಡಗಳು ನಾಲ್ಕು ಪಂದ್ಯಗಳನ್ನಾಡಿದ್ದು, ಪಂಜಾಬ್ ತಂಡು ಒಂದು ಪಂದ್ಯ ಗೆದ್ದಿದೆ. ಮುಂಬೈ ಇಂಡಿಯನ್ಸ್ ತಂಡ ಎರಡು ಪಂದ್ಯಗಳನ್ನ ಗೆದ್ದು ಪಾಯಿಂಟ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈ ಎರಡು ತಂಡಗಳು 26 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 14 ಮ್ಯಾಚ್ ಗಳನ್ನ ಗೆದ್ದಿದ್ದರೇ, ಪಂಜಾಬ್ ತಂಡ 12 ಪಂದ್ಯಗಳನ್ನ ಜಯಸಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ನಾವೆಲ್ಲಾ ನೋಡಿರುವಂತೆ ಚೆನ್ನೈ ಪಿಚ್ ಸ್ಲೋ ಇದ್ದು, ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದವರಿಗೆ ಹೆಚ್ಚು ಹೆಲ್ಪ್ ಸಿಗಲಿದೆ. ಸೆಕೆಂಡ್ ಬ್ಯಾಟಿಂಗ್ ಮಾಡೋರಿಗೆ ಕಷ್ಟಕರವಾಗಲಿದೆ. ಇದೇ ಕಾರಣಕ್ಕೆ ಯಾರೇ ಟಾಸ್ ವಿನ್ ಆದ್ರೂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಬಲಾಬಲಗಳೇನು..?
ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಬೊಂಬಾಟ್ ಆಟಗಾರಿದ್ದರೂ ಯಾರು ಬ್ಲಾಸ್ಟ್ ಆಗುತ್ತಿಲ್ಲ. ಕ್ರಿಸ್ ಗೇಲ್, ಮಯಾಂಕ್ ಒಂದು ಮ್ಯಾಚ್ ನಲ್ಲಿ ಆಡಿದ್ದು ಬಿಟ್ಟರೇ ಇನ್ನಮೂರು ಪಂದ್ಯದಲ್ಲಿ ಮಿಂಚಿಲ್ಲ. ಮುಖ್ಯವಾಗಿ ಪೂರನ್ ಅವರು ನಾಲ್ಕು ಪಂದ್ಯಗಳಲ್ಲಿ 3 ಬಾರಿ ಡಕೌಟ್ ಆಗಿರುವುದು ತಂಡದ ಮೇಲೆ ಪರಿಣಾಮ ಬೀರಿದೆ. ಸೋ ಆರ್ಡರ್ ನಲ್ಲಿ , ದೀಪಕ್ ಹೂಡಾ, ಶಾರೂಕ್ ಖಾನ್ ಮಾತ್ರ ಮಿಂಚುತ್ತಿದ್ದಾರೆ.
ಬೌಲಿಂಗ್ ನಲ್ಲಿ ಜೇಲ್ ರಿಚರ್ಡ್ ಸನ್,ಶಮಿ, ಮುರುಗನ್ ಅಶ್ವಿನ್ ಯಾರು ಒಳ್ಳೆ ಟಚ್ ನಲ್ಲಿ ಕಾಣುತ್ತಿಲ್ಲ.
ಇನ್ನ ಮುಂಬೈ ಇಂಡಿಯನ್ಸ್ ವಿಚಾರಕ್ಕೆ ಬಂದ್ರೆ ಈ ಮೊದಲು ಇದ್ದ ಮುಂಬೈ ತಂಡ ಈಗ ಕಾಣುತ್ತಿಲ್ಲ. ಚೆನ್ನೈ ಪಿಚ್ ನಲ್ಲಿ ಅವರು ಸ್ಟ್ರಗಲ್ ಆಗುತ್ತಿರೋದು ಕ್ಲಿಯರ್ ಆಗಿ ಗೊತ್ತಾಗುತ್ತಿದೆ. ಕಿರಾನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಕೊನೆಯಲ್ಲಿ ನೀಡಬೇಕಿದ್ದ ಕಿಕ್ ತಂಡಕ್ಕೆ ನೀಡುತ್ತಿಲ್ಲ. ಸೂರ್ಯ ಕುಮಾರ್ ಯಾದವ್, ರೋಹಿತ್ ಹೊರೆತುಪಡಿಸಿ ಉಳಿದ ಎಲ್ಲಾ ಬ್ಯಾಟ್ಸ್ ಮೆನ್ ಗಳು ಚೆನ್ನೈ ಪಿಚ್ ನಲ್ಲಿ ಪರದಾಡುತ್ತಿದ್ದಾರೆ.
ಬೌಲಿಂಗ್ ನಲ್ಲಿ ಹೆಚ್ಚು ಸಮಸ್ಯೆಗಳೇನು ಕಾಣುತ್ತಿಲ್ಲ. ಪಿಚ್ ಬೌಲರ್ ಗಳಿಗೆ ಅನುಕೂಲಕರವಾಗಿರುವುದರಿಂದ ಬೌಲರ್ ಗಳು ಮಿಂಚು ಹರಿಸುತ್ತಿದ್ದಾರೆ.
ಬೆಸ್ಟ್ ಇಲೆವೆನ್
ಮುಂಬೈ ತಂಡದಲ್ಲಿ ಒಂದು ಬದಲಾವಣೆ ಆಗುವ ಸಾಧ್ಯತೆ ಇದೆ. ಅದೇನೆಂದರೇ ಇಶಾನ್ ಕಿಶಾನ್ ಬದಲು ಆದಿತ್ಯ ತಾರೆಗೆ ಚಾನ್ಸ್ ಕೊಡುವ ಸಾಧ್ಯತೆಗಳಿವೆ.
ಇನ್ನುಳಿದಂತೆ ರೋಹಿತ್ ಶರ್ಮಾ, ಡಿ ಕಾಕ್, ಆದಿತ್ಯ ತಾರೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಕೃನಾಲ್ ಪಾಂಡ್ಯ, ಜಯಂತ್ ಯಾದವ್, ಟ್ರೆಂಟ್ ಬೋಲ್ಡ್, ರಾಹುಲ್ ಚಹಾರ್, ಬೂಮ್ರಾ.
ಇನ್ನ ಪಂಜಾಬ್ ತಂಡದ ವಿಚಾರಕ್ಕೆ ಬಂದ್ರೆ ಪೂರನ್ ಬದಲಿಗೆ ಡೇವಿಡ್ ಮಲಾನ್ ಆಡಿಸುವ ಸಾಧ್ಯತೆಗಳಿವೆ.
ಉಳಿದಂತೆ ರಾಹುಲ್, ಅಗರ್ ವಾಲ್, ಕ್ರಿಸ್ ಗೇಲ್, ಮಲಾನ್, ದೀಪಕ್ ಹೂಡಾ, ಶರೂಕ್ ಖಾನ್, ಹೆನ್ರಿಕ್ಯೂಸ್, ಬಿಶ್ನೋಯಿ, ಶಮಿ, ಅರ್ಶೀದೀಪ್ ಸಿಂಗ್, ಮುರುಗನ್ ಅಶ್ವಿನ್ ತಂಡದಲ್ಲಿರುತ್ತಾರೆ
ವಿನ್ನಿಂಗ್ ಚಾನ್ಸ್
ಆನ್ ಪೇಪರ್ ಟೀಂನ ನೋಡಿ ಹೇಳೊದಾದ್ರೆ ಮುಂಬೈ ಗೆಲ್ಲುವ ಫೇವರೇಟ್ ತಂಡವಾಗಿದೆ. ಬ್ಯಾಟಿಂಗ್ ನಲ್ಲಿ ಒಂದಿಷ್ಟು ಸಮಸ್ಯೆ ಬಿಟ್ಟರೇ ಮುಂಬೈ ತಂಡ ಸ್ಟ್ರಾಂಗ್ ಆಗಿದೆ. ಇದೆಲ್ಲಾ ಬಿಟ್ಟು ರಾಹುಲ್ ಆಗಲಿ, ಗೇಲ್ ಆಗಲಿ ಬ್ಲಾಸ್ಟ್ ಆದ್ರೆ ಪಂಜಾಬ್ ಗೆ ವಿನ್ನಿಂಗ್ ಚಾನ್ಸ್ ಇದೆ.