ಐಪಿಎಲ್ 2021 : ಸೂಪರ್ ಕಿಂಗ್ಸ್ ಗೆ ರಾಯಲ್ಸ್ ಸವಾಲ್
ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಾಡಿದ ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಎರಡೂ ತಂಡಗಳು ತಮ್ಮ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಆ ಗೆಲುವನ್ನು ಮುಂದುವರೆಸುವ ವಿಶ್ವಾಸದಿಂದಲೇ ಇಂದು ಉಭಯ ತಂಡಗಳು ಕಣಕ್ಕಿಳಿಯಲಿವೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಇಲ್ಲಿಯವರೆಗೂ ಎರಡೂ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಮೇಲುಗೈ ಸಾಧಿಸಿದೆ. ಚೆನ್ನೈ ತಂಡ 14 ಬಾರಿ ಗೆಲುವು ಸಾಧಿಸಿದ್ರೆ ರಾಜಸ್ಥಾನ್ 9 ಬಾರಿ ಗೆದ್ದಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ ನಮಗೆ ತಿಳಿದಿರುವಂತೆ ಮುಂಬೈನಲ್ಲಿ ರನ್ ಮಳೆಯೇ ಸುರಿಯುತ್ತಿದೆ. ಅದೇ ರೀತಿ ಫಾಸ್ಟ್ ಬೌಲರ್ ಗಳಿಗೂ ಕೂಡ ಹೆಲ್ಫ್ ಫುಲ್ ಆಗಿದೆ. ಟಾಸ್ ಗೆದ್ದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಮುಂಬೈನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡುವವರಿಗೆ ಹೆಚ್ಚು ಅನುಕೂಲಕರವಾಗಿದೆ.
ಬಲಾಬಲಗಳೇನು..?
ಚೆನ್ನೈ : ಕಳೆದ ಎರಡು ಪಂದ್ಯಗಳನ್ನ ನೋಡಿದ್ರೆ ಚೆನ್ನೈ ಸ್ವಲ್ಪ ಸಮತೋಲನದಿಂದ ಕಾಣುತ್ತಿದೆ. ಮುಖ್ಯವಾಗಿ ಬ್ಯಾಟಿಂಗ್ ಲೈನಪ್ ತುಂಬಾ ಸ್ಟ್ರಾಂಗ್ ಇದೆ. ಕೊನೆಯ ಎಂಟನೇ ಆಟಗಾರನೂ ಬ್ಯಾಟಿಂಗ್ ಮಾಡುವ ಸಾಮಥ್ರ್ಯ ಹೊಂದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಉಳಿದಂತೆ ಟಾಪ್ ಫೈವ್ ಆಟಗಾರರಲ್ಲಿ ಫೈಯರ್ ಕಾಣ್ತಿಲ್ಲ. ಮೊಯಿನ್ ಅಲಿ ಬಿಟ್ಟರೇ ಬೇರೆ ಯಾವ ಆಟಗಾರನೂ ಬೆಂಕಿ ಆಟವಾಡುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ವಿಕೆಟ್ ಟೇಕಿಂಗ್ ಬೌಲರ್ ನ ಕೊರತೆ ಇದೆ. ದೀಪಕ್ ಚಹಾರ್ ಕಳೆದ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ರೂ ಅದನ್ನ ಮುಂದುವರೆಸ್ತಾ ಅನ್ನೋದು ಪ್ರಶ್ನೆಯಾಗಿದೆ. ಮುಖ್ಯವಾಗಿ ಶರ್ದೂಲ್ ಠಾಕೂರ್ ಹೋಂ ಗ್ರೌಂಡ್ ನಲ್ಲಿ ಆಡುತ್ತಿದ್ದರೂ ಹೇಳಿಕೊಳ್ಳಲು ಪ್ರದರ್ಶನ ನೀಡದೇ ಇರೋದು ತಂಡಕ್ಕೆ ಸೆಟ್ ಬ್ಯಾಕ್ ಆಗಿದೆ.
ರಾಜಸ್ಥಾನ : ಆರ್ ಆರ್ ತಂಡಕ್ಕೆ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಸಮಸ್ಯೆಗಳು ಕಾಣುತ್ತಿವೆ. ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಚೆನ್ನಾಗಿದ್ರೆ, ಬೌಲಿಂಗ್ ಚೆನ್ನಾಗಿರಲ್ಲ. ಇನ್ನೋಂದು ಪಂದ್ಯದಲ್ಲಿ ಬೌಲಿಂಗ್ ಚೆನ್ನಾಗಿದ್ರೆ ಬ್ಯಾಟಿಂಗ್ ಚೆನ್ನಾಗಿರಲ್ಲ. ಕಂಪ್ಲೀಟ್ ಆಗಿ ಸಂಜು ಸ್ಯಾಮನ್ಸ್, ಬಟ್ಲರ್ ಮೇಲೆ ಟೀಂ ಅವಲಂಬನೆ ಆಗಿದೆ. ಈ ಮಧ್ಯೆ ತಂಡಕ್ಕೆ ಮಿಲ್ಲರ್ ಸೇರಿರೋದು ತಂಡದ ಬಲ ಹೆಚ್ಚಿಸಿದೆ. ಬೌಲಿಂಗ್ ನಲ್ಲಿ ಆರ್ಚರ್ ಅಲಭ್ಯತೆ ಎದ್ದು ಕಾಣುತ್ತಿದೆ. ಮೋರಿಸ್ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡುತ್ತಿಲ್ಲ. ಉನಾದ್ಕಟ್ ಮೇಲೆ ಸಾಕಷ್ಟು ಒತ್ತಡವಿದೆ.
ಬೆಸ್ಟ್ ಇಲೆವೆನ್
ಎರಡು ತಂಡಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲದೇ ಇವತ್ತಿನ ಪಂದ್ಯದಲ್ಲಿ ಕಣಕ್ಕಿಳಿಯಬಹುದು.
ರಾಜಸ್ಥಾನ್ : ಜೋಸ್ ಬಟ್ಲರ್, ಮನನ್ ವೋಹ್ರಾ, ಸಂಜು ಸ್ಯಾಮನ್ಸ್, ದೇವಿಡ್ ಮಿಲ್ಲರ್, ರಿಯಾನ್ ಪರಾಗ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರೀಸ್, ಉನಾದ್ಕಟ್, ಮುಸ್ತಾಫಿಝೂರ್ ಅಥವಾ ಲಿವಿನ್ಟೊಂನ್, ಸಕಾರಿಯಾ.
ಚೆನ್ನೈ : ಗಾಯಕ್ವಾಡ್ ಬದಲು ಉತ್ತಪ್ಪ ಆಡುವ ಚಾನ್ಸನ್ ಇದೆ. ಉಳಿದಂತೆ ಫಾಪ್ ಡುಪ್ಲಸೀಸ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಧೋನಿ,
ಜಡೇಜಾ, ಸ್ಯಾಮ್ ಕರನ್, ಬ್ರಾವೋ,ಶರ್ದೂಲ್ ಠಾಕೂರ್, ದೀಪಕ್ ಚಹಾರ್
ವಿನ್ನಿಂಗ್ ಚಾನ್ಸನ್ಸ್
ಆನ್ ಪೇಪರ್ ಟೀಂಗಳನ್ನ ನೋಡಿದ್ರೆ ಚೆನ್ನೈ ಗೆಲ್ಲುವ ಚಾನ್ಸ್ ಹೆಚ್ಚಿದೆ ಅಂತ ಅನಿಸುತ್ತಿದೆ. ಚೆನ್ನೈ 55%, ರಾಜಸ್ಥಾನ್ 45%