ADVERTISEMENT
Friday, July 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

VIRAT ಕೊಹ್ಲಿ ವಿಶ್ರಾಂತಿ ಪಡೆಯಬೇಕಾ..?

Mahesh M Dhandu by Mahesh M Dhandu
April 27, 2022
in Newsbeat, Saaksha Special, ಎಸ್ ಸ್ಪೆಷಲ್
virat-kohli-Michael Vaughan advises Virat Kohli to rediscover his youthfulness saaksha tv

virat-kohli-Michael Vaughan advises Virat Kohli to rediscover his youthfulness saaksha tv

Share on FacebookShare on TwitterShare on WhatsappShare on Telegram

VIRAT ಕೊಹ್ಲಿ ವಿಶ್ರಾಂತಿ ಪಡೆಯಬೇಕಾ..?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಫಾರ್ಮ್ ಅವರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಲಯದಲ್ಲಿ ಇಲ್ಲದೇ ಇರುವುದು ತಂಡಕ್ಕೆ ತಲೆ ನೋವಾಗಿದೆ.

Related posts

ನಾನು 5 ವರ್ಷಗಳ ಕಾಲ ಸಿಎಂ – ಸಿದ್ದರಾಮಯ್ಯ ಹೇಳಿಕೆಯಿಂದ ಡಿಕೆಶಿಗೆ ಶಾಕ್!

ನಾನು 5 ವರ್ಷಗಳ ಕಾಲ ಸಿಎಂ – ಸಿದ್ದರಾಮಯ್ಯ ಹೇಳಿಕೆಯಿಂದ ಡಿಕೆಶಿಗೆ ಶಾಕ್!

July 11, 2025
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ECG ವ್ಯವಸ್ಥೆ – ಹೃದಯಾಘಾತ ತಡೆಗಟ್ಟಲು ಸರ್ಕಾರದ ತೀರ್ಮಾನ

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ECG ವ್ಯವಸ್ಥೆ – ಹೃದಯಾಘಾತ ತಡೆಗಟ್ಟಲು ಸರ್ಕಾರದ ತೀರ್ಮಾನ

July 11, 2025

ಡಕೌಟ್ ನಿಂದ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಿದ್ದರೆ ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸುತ್ತಿದ್ದ ಕೊಹ್ಲಿ, ಈಗ ರನ್ ಕಲೆ ಹಾಕುವಲ್ಲಿ ಹಿಂದೆ  ಬಿದ್ದಿದ್ದಾರೆ. ಕೆಟ್ಟ ಹೊಡೆತಗಳಿಗೆ ಮುಂದಾಗಿ ಅವರು ತಮ್ಮ ವಿಕೆಟ್ ಗಳನ್ನು ಸುಲಭವಾಗಿ ನೀಡುತ್ತಿದ್ದಾರೆ. ಪ್ರಸಕ್ತ ಐಪಿಎಲ್ ನಲ್ಲಿ ಕೊಹ್ಲಿ ಅಬ್ಬರಿಸದೇ ಇರುವುದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರನ್ ಮಷಿನ್ ಎಂದೇ ಖ್ಯಾತ ಪಡೆದಿದ್ದ ಕೊಹ್ಲಿ, ರನ್ ದಾಹಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಹಾಗಿದ್ದರೆ ಕೊಹ್ಲಿ ವಿಶ್ರಾಂತಿ ಪಡೆಯಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.

15ನೇ ಆವೃತ್ತಿಯ ಐಪಿಎಲ್ ನಲ್ಲಿ ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಭಡ್ತಿ ನೀಡಿ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಯ್ತು. ಆದ್ರೆ ಆಡುವ ಕ್ರಮಾಂಕ ಬದಲಾದ್ರೂ ವಿರಾಟ್ ನಸೀಬು ಬದಲಾಗಲಿಲ್ಲ. ರಾಜಸ್ಥಾನ್ ನೀಡಿದ ಸುಲಭ ಗುರಿಯನ್ನ ಬೆನ್ನತ್ತಿದ್ದ ತಂಡಕ್ಕೆ ಉತ್ತಮ ಆರಂಭ ನೀಡಬೇಕಿದ್ದ ವಿರಾಟ್, ಕೇವಲ 9 ರನ್ ಗಳಿಗೆ ಪ್ರಸಿದ್ಧ ಕೃಷ್ಣಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದು ತಂಡದ ಮೇಲೆ ಪರಿಣಾಮ ಬೀರಿದ್ದು ಅಲ್ಲದೇ ಸೋಲಿಗೂ ಪ್ರಮುಖ ಕಾರಣವಾಗಿದೆ.

IPL 2022 RCB VIRAT Kohli needs to rest  Saaksha Tv

ಅಂದಹಾಗೆ ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೊದಲು ಮೂರನೇ ಕ್ರಮಾಂಕದಲ್ಲಿ 8 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ  17ರ ಸರಾಸರಿಯಲ್ಲಿ 119 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಒಂದೇ ಪಂದ್ಯದಲ್ಲಿ 48 ರನ್ ಬಾರಿಸಿ ಮಿಂಚಿದ್ದಾರೆ. ಇವರ ಪ್ರಸಕ್ತ ಸಾಲಿನ ಸ್ಟ್ರೈಕ್ ರೇಟ್ ಸಹ 122.68 ಆಗಿದೆ. ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸುತ್ತಿದ್ದ ಕೊಹ್ಲಿ ಈ ಬಾರಿ ಕೇವಲ 9 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ.

ಈ ಅಂಕಿ ಅಂಶಗಳನ್ನ ಗಮನಿಸಿದ್ರೆ ವಿರಾಟ್ ಕೊಹ್ಲಿ ಮೊದಲಿನ ಚಾರ್ಮ್ ನಲ್ಲಿಲ್ಲ ಅನ್ನೋದು ಸ್ಪಷ್ಟವಾಗುತ್ತೆ. ಹೀಗೆ ವಿರಾಟ್ ಕೊಹ್ಲಿ ಪದೇ ಪದೇ ವಿಫಲವಾಗುತ್ತಿರುವುದು ಡ್ರೆಸ್ಸಿಂಗ್ ರೂಮ್ ನ ವಾತಾವರಣವನ್ನು ಕೆಡಿಸುತ್ತಿದೆ. ಯಾಕಂದರೇ ವಿರಾಟ್ ಆರ್ ಸಿಬಿಯ ಹಿರಿಯ ಆಟಗಾರರಾಗಿ ಹೊಸ ಹಾಗೂ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬೇಕಾಗಿತ್ತು. ಆದ್ರೆ ಸ್ವತಃ ವಿರಾಟ್ ಕೊಹ್ಲಿವೇ ಒತ್ತಡಕ್ಕೆ ಸಿಲುಕಿದ್ದು ತಂಡದಲ್ಲಿ ತಮ್ಮ ಸ್ಥಾನ ಅಲುಗಾಡುತ್ತಿದೆ. ಹೀಗಾಗಿ ಬ್ಯಾಟಿಂಗ್ ನತ್ತ ಗಮನ ಹರಿಸಲು ವಿರಾಟ್ ಕೊಹ್ಲಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್ ನ ಮಾಜಿ ಕ್ರಿಕೆಟ್ ಆಟಗಾರ  ಕೆವಿನ್ ಪೀಟರ್ ಸನ್ ಹೇಳಿದಂತೆ ವಿರಾಟ್ ಕೊಹ್ಲಿ ಈ ಮೊದಲಿನಂತೆ ಇಲ್ಲ. ಅವರು ಯಾವಾಗಲೂ ತುಂಬಾ ಗಂಭೀರವಾಗಿರುತ್ತಾರೆ. ಹಾಯ್ ಇಲ್ಲ. ನಗು ಇಲ್ಲ.. ಸ್ವತಃ ಅವರಿಗೆ ಅವರೇ ಬೌಂಡರಿಗಳನ್ನ ಹಾಕಿಕೊಂಡಿದ್ದಾರಂತೆ. ಹೀಗಾಗಿ ವಿರಾಟ್ ಕೊಹ್ಲಿ ಸ್ವಲ್ಪ ಕಾಲ ರೆಸ್ಟ್ ಪಡೆಯಬೇಕು ಎಂದು ಎಲ್ಲಾ ಹಿರಿಯ ಕ್ರಿಕೆಟಿಗರು ವಾದಿಸುತ್ತಿದ್ದಾರೆ.  IPL 2022 RCB VIRAT Kohli needs to rest 

Tags: #Saaksha TVCricketipl 2022RCBvirat kohli
ShareTweetSendShare
Join us on:

Related Posts

ನಾನು 5 ವರ್ಷಗಳ ಕಾಲ ಸಿಎಂ – ಸಿದ್ದರಾಮಯ್ಯ ಹೇಳಿಕೆಯಿಂದ ಡಿಕೆಶಿಗೆ ಶಾಕ್!

ನಾನು 5 ವರ್ಷಗಳ ಕಾಲ ಸಿಎಂ – ಸಿದ್ದರಾಮಯ್ಯ ಹೇಳಿಕೆಯಿಂದ ಡಿಕೆಶಿಗೆ ಶಾಕ್!

by Shwetha
July 11, 2025
0

ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿಯ ಗೇಮ್ ಆಫ್ ಥ್ರೋನ್ಸ್ ಚರ್ಚೆಗೆ ಗ್ರಾಸವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಟೀಮ್ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ...

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ECG ವ್ಯವಸ್ಥೆ – ಹೃದಯಾಘಾತ ತಡೆಗಟ್ಟಲು ಸರ್ಕಾರದ ತೀರ್ಮಾನ

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ECG ವ್ಯವಸ್ಥೆ – ಹೃದಯಾಘಾತ ತಡೆಗಟ್ಟಲು ಸರ್ಕಾರದ ತೀರ್ಮಾನ

by Shwetha
July 11, 2025
0

ಹೃದಯಾಘಾತದಿಂದ ಹಾಸನ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಕೋಕಾರ್ಡಿಯೋಗ್ರಾಂ (ECG) ವ್ಯವಸ್ಥೆ ಮಾಡಲಾಗುವುದು ಎಂದು...

ನರ್ಸಿಂಗ್ ಕೋರ್ಸ್‌ ಶುಲ್ಕ ಹೆಚ್ಚಳ ಇಲ್ಲ –  ಸರ್ಕಾರದ ನಿರ್ಧಾರ

ನರ್ಸಿಂಗ್ ಕೋರ್ಸ್‌ ಶುಲ್ಕ ಹೆಚ್ಚಳ ಇಲ್ಲ – ಸರ್ಕಾರದ ನಿರ್ಧಾರ

by Shwetha
July 11, 2025
0

ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಮತ್ತು ಪೋಷಕರ ಆರ್ಥಿಕ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ, ಈ ಶೈಕ್ಷಣಿಕ ವರ್ಷದಲ್ಲಿ ನರ್ಸಿಂಗ್ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ,...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಹೊಸ ಸುತ್ತಿನ ಮಾತುಕತೆ ಆರಂಭಕ್ಕೆ ಸಿದ್ಧತೆ – ಕೃಷಿ ವಲಯಕ್ಕೆ ಆದ್ಯತೆ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಹೊಸ ಸುತ್ತಿನ ಮಾತುಕತೆ ಆರಂಭಕ್ಕೆ ಸಿದ್ಧತೆ – ಕೃಷಿ ವಲಯಕ್ಕೆ ಆದ್ಯತೆ

by Shwetha
July 11, 2025
0

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಉಭಯ ದೇಶಗಳ ನಡುವೆ ಹೊಸ ಸುತ್ತಿನ ವ್ಯಾಪಾರ ಮಾತುಕತೆಗಳು ಪ್ರಾರಂಭವಾಗಲಿವೆ. ಈ ಮಾತುಕತೆಯಲ್ಲಿ ಕೃಷಿ...

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

by Shwetha
July 11, 2025
0

BMRCL Consultant Recruitment 2025: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬೆಂಗಳೂರು ನಗರದಲ್ಲಿ ಮೆಟ್ರೋ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಸ್ಥಾಪಿತವಾಗಿರುವ ವಿಶಿಷ್ಟ ಜಂಟಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram