ಭಾರತದ ಮಾಜಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ನೀಡಿದ ಹೇಳಿಕೆಯಿಂದ ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಕುರಿತಂತೆ ಹೊಸ ಚರ್ಚೆಗೆ ದಾರಿ ತೆರೆದುಕೊಂಡಿದೆ. ದೇಶದ ಕೇಂದ್ರ ಸರ್ಕಾರದ ನಿಲುವನ್ನು ಉಲ್ಲೇಖಿಸಿ, ಅವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಭಾರತದ ನಿಲುವು ಸ್ಪಷ್ಟ – ಗಡುವು ಮೀರಿ ಹೋಗಲಾರದು:
ಗವಾಸ್ಕರ್ ಹೇಳಿರುವ ಪ್ರಕಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೇಂದ್ರ ಸರ್ಕಾರ ಎಳೆದಿರುವ ಗೆರೆಯನ್ನು ಮೀರಿ ಹೋಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸುವುದು ಸಾಧ್ಯವಿಲ್ಲ.
ಏಷ್ಯಾ ಕಪ್ನಲ್ಲಿ ಬದಲಾವಣೆ ಸಾಧ್ಯತೆ:
ಗವಾಸ್ಕರ್ ಅಭಿಪ್ರಾಯಪಟ್ಟಿರುವಂತೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಂದಿನ ದಿನಗಳಲ್ಲಿ ವಿಸರ್ಜನೆಯಾಗಬಹುದಾದ ಸಾಧ್ಯತೆಯೂ ಇದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳದಿರುವ ಸಾಧ್ಯತೆ ಹೆಚ್ಚು.
ಪಾಕಿಸ್ತಾನ ಬದಲಿಗೆ ಹಾಂಗ್ ಕಾಂಗ್ ಅಥವಾ UAE?
ಪಾಕಿಸ್ತಾನ ಭಾಗಿಯಾಗದ ಪರಿಸ್ಥಿತಿ ಎದುರಾದರೆ, ಭಾರತವು ಹಾಂಗ್ ಕಾಂಗ್ ಅಥವಾ ಯುಎಇ (UAE)ಯನ್ನು ಆಹ್ವಾನಿಸಬಹುದು. ಈ ರಾಷ್ಟ್ರಗಳು ಬಲವಾದ ಎದುರಾಳಿ ತಂಡಗಳಾಗಿದ್ದರೂ, ರಾಜಕೀಯ ಅಸ್ಥಿರತೆ ಇಲ್ಲದ ಕಾರಣದಿಂದ ಹೆಚ್ಚು ಸೂಕ್ತ ಎನಿಸುತ್ತವೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಭದ್ರತಾ ಹಿನ್ನೆಲೆ & ರಾಜಕೀಯ ಪ್ರಭಾವ:
ಈ ಮಾತುಗಳು ಕೇವಲ ಕ್ರಿಕೆಟ್ಗೆ ಮಾತ್ರ ಅಲ್ಲ, ಭದ್ರತಾ ವಿಚಾರಗಳಿಗೂ ಸಂಬಂಧ ಹೊಂದಿವೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ರಾಜಕೀಯ ಪರಿಸ್ಥಿತಿಯ ನಡುವೆ ಈ ನಿರ್ಧಾರಗಳು ಹೊರಬಂದಿದೆ
ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ:
ಏಷ್ಯಾ ಕಪ್ಕ್ಕೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗ, ಈ ಬೆಳವಣಿಗೆಯಿಂದ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ. ಪಾಕಿಸ್ತಾನ ನಿಜವಾಗಿಯೂ ಔಟ್ ಆಗುತ್ತದೆಯಾ? ACC ಭವಿಷ್ಯ ಏನು? ಈ ಬಗ್ಗೆ ಅಧಿಕೃತ ಘೋಷಣೆಗಾಗಿ ಎಲ್ಲರ ದೃಷ್ಠಿ ಈಗ BCCI ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೇಲೆ ನೆಟ್ಟಿದೆ.