ಶಿವಮೊಗ್ಗದಲ್ಲಿ ಬಿಜೆಪಿಗೆ ಮುಖಭಂಗ : ಈಶ್ವರಪ್ಪ ಹೇಳಿದ್ದೇನು..?
ಶಿವಮೊಗ್ಗ : ಭದ್ರವಾತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದು, ಹೀನಾಯ ಸೋಲುಂಡಿದೆ. ಇದು ಸಾಮಾನ್ಯವಾಗಿಯೇ ಬಿಜೆಪಿಗೆ ಮುಜುಗರ ತಂದೊಡ್ಡಿದೆ.
ಯಾಕೆಂದ್ರೆ ಶಿವಮೊಗ್ಗ ಬಿಜೆಪಿ ಭದ್ರಕೋಟೆ, ಹಾಗೂ ಸಿಎಂ ತವರು ಜಿಲ್ಲೆ. ಹೀಗಾಗಿ ಇಲ್ಲಿ ಬಿಜೆಪಿ ಸೋಲುಂಡಿರುವುದು ಪಕ್ಷಕ್ಕೆ ಭಾರಿ ಮುಜುಗರ ತಂದೊಡ್ಡಿದೆ.
ಫಲಿತಾಂಶದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಭದ್ರಾವತಿಯಲ್ಲಿ ಈ ಬಾರಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ದೃಷ್ಟಿಯಿಂದ ಸಾಕಷ್ಟು ಸಂಘಟನೆ ಮಾಡಿದ್ದೆವು. ಆದರೆ ಮತದಾರರು ನಮಗೆ 4 ಸ್ಥಾನ ನೀಡಿದ್ದಾರೆ.
ಕಳೆದ ಬಾರಿ ಬಿಜೆಪಿ 2 ಸ್ಥಾನ ಪಡೆದಿತ್ತು. ಜೊತೆಗೆ ಕಳೆದ ಬಾರಿ ಎಲ್ಲ ವಾರ್ಡ್ ಗಳಿಗೂ ಅಭ್ಯರ್ಥಿ ಹಾಕುವುದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲ ವಾರ್ಡ್ ಗಳಿಗೂ ಅಭ್ಯರ್ಥಿ ಹಾಕಿದ್ದೆವು. ಜೊತೆಗೆ 4 ಸ್ಥಾನಗಳಲ್ಲಿ ಗೆಲುವು ಕಂಡಿದ್ದೇವೆ.
ತೀರ್ಥಹಳ್ಳಿಯಲ್ಲಿ ಅಧಿಕಾರ ಏಕೆ ಕೈ ತಪ್ಪಿ ಹೋಯಿತು ಗೊತ್ತಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿ ಹಾಗೂ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.