¨ನಭಕ್ಕೆ ಜಿಗಿದ ಪಿಎಸ್ಎಲ್ವಿ-ಸಿ50 ರಾಕೆಟ್
ಶ್ರೀಹರಿಕೋಟ : ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ ಪಿಎಸ್ ಎಲ್ವಿ-ಸಿ50 ರಾಕೆಟ್, ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದೆ.
ಇದು ಪಿಎಸ್ಎಲ್ವಿ-ಸಿ50ಯ 52ನೇ ಉಡ್ಡಯನವಾಗಿದ್ದು, ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದ ಎರಡನೇಯ ಉಡಾವಣಾ ಘಟಕದಿಂದ ಮಧ್ಯಾಹ್ನ ಸರಿಯಾಗಿ 3 ಗಂಟೆ 41 ನಿಮಿಷಕ್ಕೆ ಉಪಗ್ರಹದ ಉಡಾವಣೆ ನಡೆಯಿತು.
ಸಿಎಂಎಸ್-01 ಉಪಗ್ರಹ ಕಕ್ಷೆಯ ವಿಸ್ತೃತ-ಸಿ ಬ್ಯಾಂಡ್ ನ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ತರಂಗಗಳ ಸೇವೆ ಒದಗಿಸಲು ಕಲ್ಪಿಸಲಾದ ಸಂವಹನ ಉಪಗ್ರಹವಾಗಿದೆ.
ಅದರ ವ್ಯಾಪ್ತಿಯಲ್ಲಿ ಭಾರತದ ಮುಖ್ಯ ಭೂ ಪ್ರದೇಶಗಳು, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳು ಬರಲಿವೆ.
ಏರ್ ಇಂಡಿಯಾ ಟಿಕೆಟ್ ಮೇಲೆ ಶೇ 50 ರಷ್ಟು ರಿಯಾಯ್ತಿ : ಷರತ್ತು ಅನ್ವಯ
ಈ ಬಗ್ಗೆ ಇಸ್ರೋ ಅಧ್ಯಕ್ಷ ಡಾ ಕೆ ಸಿವನ್ ಸಂತಸ ಹಂಚಿಕೊಂಡಿದ್ದು, ಸದ್ಯ ಕಕ್ಷೆಯಲ್ಲಿರುವ ಅಒS-01 ಸಂವಹನ ಉಪಗ್ರಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಮುಂದಿನ ನಾಲ್ಕು ದಿನಗಳಲ್ಲಿ ನಿಗದಿತ ಸ್ಲಾಟ್ನಲ್ಲಿ ಉಪಗ್ರಹವನ್ನು ಇರಿಸಲಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿಜ್ಞಾನಿಗಳ ತಂಡಗಳು ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಿವೆ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel