ಸಿದ್ದರಾಮಯ್ಯ ಮತ್ತೊಮ್ಮೆ ವಲಸೆಗೆ ಸಿದ್ದರಾಗುವುದು ನಿಶ್ಚಿತ Siddaramaiah saaksha tv
ಬೆಂಗಳೂರು : ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಚಿಮ್ಮನಕಟ್ಟಿ ಅವರ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ವಲಸೆಗೆ ಸಿದ್ದರಾಗುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಚಿಮ್ಮನಕಟ್ಟಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದ್ದು, ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಚಿಮ್ಮನಕಟ್ಟಿ ಅವರ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ವಲಸೆಗೆ ಸಿದ್ದರಾಗುವುದು ನಿಶ್ಚಿತ. ನೀವು ಇಲ್ಲಿಗೇಕೆ ಬಂದಿರಿ ಎಂದು ಸ್ಥಳೀಯ ನಾಯಕರಿಂದ ಪ್ರಶ್ನೆ ಎದುರಾಗಿದೆ. ಇದರರ್ಥ ನೀವು ಬಾದಾಮಿ ಕ್ಷೇತ್ರ ಕ್ಕೆ ನ್ಯಾಯ ಒದಗಿಸಿಲ್ಲ ಎಂದಲ್ಲವೇ ಸಿದ್ದರಾಮಯ್ಯ ಎಂದು ಕುಟುಕಿದೆ.
ಜನರು ಪ್ರೀತಿಸುವ ಕಡೆ ಚುನಾವಣೆಗೆ ನಿಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಜಾರಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ, ಚಾಮರಾಜಪೇಟೆಯಲ್ಲೂ ನನ್ನನ್ನು ಪ್ರೀತಿಸುವ ಜನರಿದ್ದಾರೆ ಎಂದು ನೇರವಾಗಿ ಹೇಳಿ. ಹೇಗಿದ್ದರೂ ಮುಂದೆ ಚುನಾವಣೆಗೆ ನಿಲ್ಲುವುದು ಅಲ್ಲೇ ಅಲ್ಲವೇ ಎಂದು ಲೇವಡಿ ಮಾಡಿದೆ.
ಇನ್ನು ವಿಜಯಪುರ ಬಾಗಲಕೋಟೆ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲೇ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಚಿಮ್ಮನಕಟ್ಟಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ.ಗದ್ಗದಿತವಾಗಿ ಭಾಷಣ ಮಾಡ್ತಾ, ಸಿದ್ದು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಚಿಮ್ಮನಕಟ್ಟಿ. ಬಾದಾಮಿಯಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಬಾದಾಮಿ ಕ್ಷೇತ್ರ ತ್ಯಾಗ ಮಾಡಿದ್ದ ಬಿ ಬಿ ಚಿಮ್ಮನಕಟ್ಟಿ. ಭಾಷಣದ ವೇಳೆ ನೀವು ಮತ್ತೇ ಹುಲಿ ಆಗ್ತೀರಿ ಎಂದ ಕಾರ್ಯಕರ್ತರು. ನಮ್ಮನ್ನ ಹುಲಿ ಹೋಗಿ ಇಲಿ ಮಾಡಿದ್ದೀರಿ. ಎಂದು ವೇದಿಕೆಯ ಮೇಲೆ ಗದ್ಗದಿತರಾಗಿ ಹೇಳಿದರು.
ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ನಿಲ್ಲುತ್ತಾರೆ. ಅವರ ಪುತ್ರನ ಬಿಟ್ಟು ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಗೆಲ್ಲತ್ತಿದ್ರು.ವರುಣಾ ಕ್ಷೇತ್ರ ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಚಾಮುಂಡೇಶ್ವರಿ ಗೆಲ್ಲುವ ಯೋಗ್ಯತೆ ಇಲ್ಲ ಅಂದ್ರೆ ಯಾಕೆ ಸ್ಪರ್ಧಿಸಬೇಕಿತ್ತು. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಗೆಲ್ಲಬೇಕೆಂದು ಚಾಲೆಂಜ್ ಹಾಕಿದ ಚಿಮ್ಮನಕಟ್ಟಿ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲಾಂದ್ರೆ ಯಾಕೆ ಸ್ಪರ್ಧಿಸಬೇಕು. ಅದನ್ನ ಬಿಟ್ಟು ನಮಗೆ ಗಂಟು ಬಿದ್ದಾರ, ನಾನೇನು ಮಾಡಬೇಕು. ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡ್ರಿ ಎನ್ನುತ್ತ, ಹುಲಿ ಹೋಗಿ ಇಲಿ ಆಗಿನಿ. ಎಂದು ಮಾತನಾಡುವ ಭರದಲ್ಲಿ ಸಿದ್ದರಾಮಯ್ಯಗೆ ಚಿಮ್ಮನಕಟ್ಪಿ. ಏಕವಚನದಲ್ಲೇ ಬೈದಾಡಿದರು ಇದರಿಂದ ವೇದಿಕೆ ಮೇಲಿದ್ದ ಸಿದ್ದರಾಮಯ್ಯಗೆ ತೀವ್ರ ಮುಜುಗರವುಂಟಾಯಿತು.