ಧಾರವಾಡ : ತಿರುಪತಿ ದೇವಾಲಯದ ಆಸ್ತಿ ಮಾರಾಟ ಮಾಡಿದ್ರೆ ತಂದೆಯ ರೀತಿಯಲ್ಲೇ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಾಯುತ್ತಾರೆ ಎಂದು ಹಿಂದೂಪರ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸೆಕ್ಯೂಲರ್ ಎನ್ನುವ ಇವರು ಹಿಂದೂ ದೇವಸ್ಥಾನದ ಮೇಲೆ ಆಘಾತ ಮಾಡುವ ಪ್ರಕ್ರಿಯೆ ನಡೆದಿದೆ. ಮದರಸಾ, ಚರ್ಚ್ ಆಸ್ತಿ ಬಗ್ಗೆ ಸರ್ಕಾರ ಮಾತಾನಾಡೋದಿಲ್ಲ. ಬದಲಾಗಿ ಹಿಂದೂಗಳ ಮೇಲೆನೇ ಕಣ್ಣು ಎಂದು ಗುಡುಗಿದರು. ಇನ್ನು ಜಗನ್ ಮೋಹರ್ ರೆಡ್ಡಿ ತಂದೆ ವೈ.ಎಸ್ ರಾಜಶೇಖರ್ ರೆಡ್ಡಿ ಇದೇ ರೀತಿ ಮಾಡಿ ತಿರುಪತಿ ತಿಮ್ಮಪ್ಪನ ಶಾಪದಿಂದ ಸತ್ತು ಹೋದ. ಈ ರೀತಿ ಮಾಡಿದರೆ ನಿಮಗೂ ಕೂಡ ತಿರುಪತಿಯ ಶಾಪ ತಟ್ಟುತ್ತೆ ಎಂದು ಜಗನ್ ಗೆ ಮುತಾಲಿಕ್ ಎಚ್ಚರಿಕೆ ನೀಡಿದರು.
ಆಂಧ್ರಪ್ರದೇಶ ಸರ್ಕಾರ ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡುವ ಪ್ರಕ್ರಿಯೆ ಮಾಡುತ್ತಿದೆ. ಸದ್ಯ ಅದನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಆದರೆ ಮುಂದೆಯಾದರೂ ಈ ಪ್ರಕ್ರಿಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಮ್ಮ ವಿರೋಧ ಇದೆ. ತಿರುಪತಿ ದೇವಸ್ಥಾನ ಆಂಧ್ರದಷ್ಟೇ ಅಲ್ಲ, ಇಡಿ ಜಗತ್ತಿನ ಜನ ಬರುವ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಬಂದ ಭಕ್ತರ ಕಾಣಿಕೆ ಹಣ ಅದೇ ದೇವಸ್ಥಾನಕ್ಕೆ ಬಳಕೆ ಮಾಡಬೇಕು. ನಿಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳಬಾರದು. ಸ್ಥಿರ ಆಸ್ತಿ ಮಾರಾಟ ಮಾಡಬಾರದು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.