ಕಾಣದಂತೆ ಮಾಯವಾದ… “ಭಕ್ತ ಪ್ರಹ್ಲಾದ” : ಭಾವುಕರಾಗಿ ಟ್ವೀಟ್ ಮಾಡಿದ ಜಗ್ಗೇಶ್
ಕರುನಾಡನ್ನು ಕಣ್ಣೀರಿನಲ್ಲಿ ಬಿಟ್ಟು ಕಾಣದಂತೆ ಮಾಯವಾಗಿರುವ ಅಪ್ಪು ಅಗಲಿಕೆಯಿಂದ ಅಭಿಮಾನಿಗಳು , ನಟ ನಟಿಯರು ಕಣ್ಣೀರು ಹಾಕುತ್ತಿದ್ದಾರೆ. ನಿನ್ನೆ ಹೃದಯಾಘಾತದಿಂದ ಅಪ್ಪು ನಿಧನರಾಗಿದ್ದಾರೆ ಎಂಬ ಸುದ್ದಿ ಚಂದನವನಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಅಪ್ಪು ನೆನೆದು ಸೆಲೆಬ್ರಿಟಿಗಳು ಟ್ವೀಟ್ ಮಾಡುತ್ತಾ ಕಣ್ಣೀರು ಹಾಕುತ್ತಿದ್ದಾರೆ.
ಜಗ್ಗೇಶ್ ಸಹ ಈ ಬಗ್ಗೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. @jaggesh2 ‘ನನ್ನ ಪುಟ್ಟಗ್ರಾಮಕ್ಕೆ ನೀಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ!ಮಾತು ಬರದ ನನ್ನ ತಮ್ಮನ ಕಂಡು ನೀ ಮರಗಿದ್ದು ನೆನೆದು ನನ್ನಹೃದಯ ಚಿದ್ರವಾಗಿದೆ!ನೀಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ!ಕರೆ ಮಾಡಿದರೆ ಅಣ್ಣ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾವ! ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ!ಎಂಥ ಸಾವು ಇದು!ಬದುಕಲ್ಲಿ ನಾ ಪೂಜೆ ಮಾಡದ ದಿನ ಇಂದು’
ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ. ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ”
“ಮರೆಯಲಾಗದ ದಿನ.. ಸಂತೋಷ್ ಜೀ ರವರು ಪುನೀತ್ ಬೇಟಿ ಮಾಡಬೇಕೆಂದು ತಿಳಿಸಿದಾಗ ಪುನೀತ್ ಗೆ ಕರೆಮಾಡಿ ವಿಷಯ ತಿಳಿಸಿದೆ ಮಗುವಂತೆ ಕಾದು ಕುಳಿತು ಜೀ ರವರ ಜೊತೆ ಸಮಯ ಕಳೆದು ಮನಬಿಚ್ಚಿ ಮಾತಾಡಿದ ಕ್ಷಣ.. “ನಿನ್ನ ಮಗುವಿನಂತಹ ನಗು ನನ್ನ ಹೃದಯದಲ್ಲಿ ಅಚ್ಚಾಗಿದೆ”
ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು!ನಿಮ್ಮಆತ್ಮಕ್ಕೆ ಚಿರಶಾಂತಿ. ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.