K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ…
ಈಗಾಗಲೇ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ಹಾಸನ ಅರಸೀಕೆರೆ ಶಾಸಕರಾದ ಕೆ ಎಂ ಶಿವಲಿಂಗೇಗೌಡ ಅವರು ಸಾಕಷ್ಟು ದಿನಗಳಿಂದ ಒಳಗಡೆಯಿಂದ ಇಟ್ಟುಕೊಂಡಿದ್ದ ಸಿಟ್ಟನ್ನ ಇಂದು ಹೊರ ಹಾಕಿದ್ದಾರೆ.
ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ದಕ್ಕೆ ನಿಲ್ತಾರೆ, ಸ್ವಂತ ಅಣ್ಣ ತಮ್ಮಂದಿರೇ ಬೇರೆ ಆಗಿ ಹೋಗ್ತಾರೆ. ಹೌದು ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು, ಬಂದಿದೆ ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಅಂದ್ರೆ, ನಾನ್ಯೇಕೆ ಇರಬೇಕು, ಇವರ ಜೊತೆ ನಾನಿನ್ನು ಪಕ್ಷನೇ ಬಿಟ್ಟು ಹೋಗಿಲ್ಲ. ಚಾಕು, ಚೂರಿ ಹಾಕಿ ಹೋದ ಅಂತ ಇವರು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸ ? ಅದರಿಂದ ಭಿನ್ನಾಭಿಪ್ರಾಯ ಬಂತು, ಭಿನ್ನಾಭಿಪ್ರಾಯ ನಾನೇಕು ಮಾಡ್ಕೊಂಡಿಲ್ಲ ಎಂದು ಶಿವಲಿಂಗೆ ಗೌಡ್ರು ದಳಪತಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಐದು ಕೋಟಿ ಕೊಡ್ತಿನಿ ಲೆಹರ್ ಸಿಂಗ್ಗೆ ಓಟು ಹಾಕಿದ್ರೆ ಅಂದ್ರು ನನ್ನ ಜೀವನದಲ್ಲಿ ಯಾರಿಗೂ ಮಾನ ಮರ್ಯಾದೆ ಮಾರ್ಕಂಡು ಜೀವನ ಮಾಡಿಲ್ಲ. ಇವತ್ತು ಕರ್ನಾಟಕ ರಾಜ್ಯದಲ್ಲಿ ಶಿವಲಿಂಗೇಗೌಡ ಅಂದ್ರೆ ಒಂದು ಹೆಸರಿದೆ. ಭಿನ್ನಾಭಿಪ್ರಾಯ ಬಂತು ಬೇರೆ ಆಗಿ ಬಿಟ್ಟಿದ್ದೀವಿ, ನೀವು ಬೇರೆ ಹೋಗಿದ್ದೀರಿ, ನಿಮ್ಮ ಪಕ್ಷ ಕಟ್ಕಂಡಿದ್ದೀರಿ, ನನಗೆ ನನ್ನ ಕ್ಷೇತ್ರದ ಐದಾರು ಸಾವಿರ ಜನ ಸೇರಿ, ಇಲ್ಲಾ ನೀನು ಈ ಸಾರಿ ಕಾಂಗ್ರೆಸ್ಗೆ ಹೋಗಬೇಕು ಅಂತ ಕೂಗಿದ್ರು ನಾನು ಜನ ಏನು ಹೇಳಿದ್ರು ಅದರಂತೆ ನಾನು ಕಾಂಗ್ರೆಸ್ಗೆ ಹೋಗುವಂತ ಕೆಲಸ ಮಾಡಿದ್ದೇನೆ. ಆದರೆ ನೀವು ಈ ರೀತಿ ಮಾಡುವುದು, ಸುಮ್ಮನೆ ಏನೇನು ಹೇಳುವುದು ತರವಲ್ಲ. ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರ್ತಿವಿ ಎಂದಿದ್ದಾರೆ ಶಿವಲಿಂಗೇಗೌಡ್ರು.
ನಾನೇನು ಯಾರಿಗೂ ಮೋಸ ಮಾಡಿಲ್ಲ, ಪಕ್ಷ ದ್ರೋಹ ಮಾಡಿಲ್ಲ, ಯಾರಿಗೂ ಕೆಟ್ಟ ಹೆಸರು ತಂದಿಲ್ಲ ಹೊಂದಾಣಿಕೆ ಆಗಲಿಲ್ಲ ಹೋಗಿದ್ದೀನಿ ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತಹವರು ಪಾರ್ಟಿ ಬಿಟ್ಟು ಹೋಗಿದ್ದಾರೆ. ಎಷ್ಟು ಜನ ಪಾರ್ಟಿ ಬಿಟ್ಟು ಹೋಗಿದ್ದಾರೆ. ಎ.ಟಿ.ರಾಮಸ್ವಾಮಿ, ಶ್ರೀನಿವಾಸ್ಗೌಡ, ಗುಬ್ಬಿ ವಾಸಣ್ಣ ಯಾರ್ ಯಾರೋ ಯಾವ್ಯಾವ ಪಾರ್ಟಿ ಬಿಟ್ಟು ಹೋಗ್ತಾವ್ರೆ. ಅವತ್ತು ಹದಿನೇಳು ಜನರ ಜೊತೆ ಹೋಗುವದಾದರೆ ಅವತ್ತೆ ನನಗೆ ಮಂತ್ರಿ ಕೊಡೋರು ನಾನು ಅಂತಹ ಕೆಟ್ಟ ಕೆಲಸ ಮಾಡಲ್ಲ, ನಾನು ಅದಲ್ಲ ನೀವು ಬಿ ಫಾರಂ ಕೊಟ್ಟಿದ್ದು ಐದು ವರ್ಷ. ಏ.23 ರವರೆಗೆ ನಿಮ್ಮ ಋಣ ಇದೆ ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ. ಆಮೇಲೆ ನಾನು ಕೊಟ್ಟು ಹೋಗ್ತಿನಿ.
ನಾನು ರಾಜಕೀಯದ ಸನ್ಯಾಸಿ ಅಲ್ಲಾ, ನಾನು ರಾಜಕೀಯ ಮಾಡಲೇಬೇಕು, ನಾನು ಮಾಡ್ತಿನಿ. ಅದುಕ್ಕೋಸ್ಕರ ಈ ಭಿನ್ನಾಭಿಪ್ರಾಯ ಬೇಡ. ಯಾರು, ಏನು, ಎಂತದ್ದು ಬೇಡ, ಜನ ಓಲೈಸಿಕೊಳ್ಳಿ. ರಣರಂಗದಲ್ಲಿ ಸೋಲಿಸಿ ನಾನೇನು ಬೇಡ ಅನ್ನಲ್ಲ. ಈ ಕ್ಷೇತ್ರದ ಜನ ನನ್ನ ಕೈ ಹಿಡುದ್ರೆ ನಾನು ಮುಂದುವರಿತಿನಿ. ಈ ಕ್ಷೇತ್ರದ ಜನ ಮುಂದುವರಿಯಲು ಕೊಡದೆ ಹೋದರೆ ಮನೆಗೆ ಹೋಗ್ತಿನಿ. ಅದರಲ್ಲಿ ಏನಿದೆ ತಪ್ಪು, ಅದಬಿಟ್ಟು ಇವನು ಮೋಸ ಮಾಡ್ದಾ ಅಂತಾರೆ. ನಾನು ಯಾರಿಗೆ ಮೋಸ ಮಾಡಿದ್ದೀನಿ ? ಈಗ ನಿಮ್ಮ ಪಾರ್ಟಿ ಅಧ್ಯಕ್ಷರನ್ನು ಮಾಡ್ಕಂಡಿದಿರಲ್ಲಾ ಇಬ್ರಾಹಿಂ ಸಿದ್ದರಾಮಯ್ಯ, ಅಹಿಂದ ಕಟ್ಕಂಡು ಹೋಗಿ ಎಂಎಲ್ಸಿ ಆಗ್ಲಿಲ್ವಾ ಕಾಂಗ್ರೆಸ್ನಲ್ಲಿ ಎಂದು ದಳಪತಿಗಳ ವಿರುದ್ಧವೇ ಶಿವಲಿಂಗೇ ಗೌಡ್ರು ಜೆಡಿಎಸ್ ದಳಪತಿಗಳ ವಿರುದ್ಧ ಸೈಲೇಂಟ್ ಆಗಿ ಗುಡುಗಿದ್ದಾರೆ.
K M Sivalinge Gowda: Araseikere MLA who responded to Dalpati’s criticism – will not resign till April 23…